Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ

Mysuru Dasara 2021: ನವರಾತ್ರಿ ದಿನಗಳು ಹೆಚ್ಚು ಪವಿತ್ರವಾದ ಸಂದರ್ಭವಾಗಿದೆ. ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಪೂಜೆ ಮಾಡಬಹುದು. ಸ್ವಚ್ಛ ಮನಸಿನಿಂದ ದುರ್ಗಾ ಮಾತೆಯ ಉಪಾಸನೆ ಮಾಡುವುದರಿಂದ ದೊಡ್ಡ ದೊಡ್ಡ ಗಂಡಾಂತರಗಳೇ ಸುಲಭವಾಗಿ ದೂರವಾಗಿಬಿಡುತ್ತದೆ ಎಂಬ ವಿಶ್ವಾಸವಿದೆ.

Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ
Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 09, 2021 | 8:11 AM

ನವರಾತ್ರಿ ವೇಳೆ ಈ ಉಪ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಎಲ್ಲ ದುಃಖವನ್ನು ದೂರ ಮಾಡುತ್ತದೆ; ಸುಖ ಸಮೃದ್ಧಿ ಮನೆ ಮಾಡುತ್ತದೆ. ನವರಾತ್ರಿಯ ಮೂರನೆಯ ದಿನ ಇಂದು. ಈ ಸಂದರ್ಭದಲ್ಲಿ ಈ ಉಪಾಯಗಳನ್ನು ಪಾಲಿಸಿದರೆ ನಿಮ್ಮ ಎಲ್ಲ ದುಃಖ ದೂರವಾಗುತ್ತದೆ; ಸುಖ ಸಮೃದ್ಧಿ ನಿಮ್ಮಲ್ಲಿ ಮನೆ ಮಾಡುತ್ತದೆ. ವನರಾತ್ರಿಯ ವೇಳೆ ದುರ್ಗಾ ಮಾತೆ ಭೂಮಿಯ ಮೇಲೆ ಅವತರಿಸಿ, ತನ್ನ ಭಕ್ತರೊಂದಿಗೆ ಸಂಚರಿಸುತ್ತಾಳೆ. ಈ ವೇಳೆ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡು ದುರ್ಗಾ ಮಾತೆಯನ್ನು ಒಲಿಸಿಕೊಳ್ಳಬಹುದು.

ನವರಾತ್ರಿ ದಿನಗಳು ಹೆಚ್ಚು ಪವಿತ್ರವಾದ ಸಂದರ್ಭವಾಗಿದೆ. ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಪೂಜೆ ಮಾಡಬಹುದು. ಸ್ವಚ್ಛ ಮನಸಿನಿಂದ ದುರ್ಗಾ ಮಾತೆಯ ಉಪಾಸನೆ ಮಾಡುವುದರಿಂದ ದೊಡ್ಡ ದೊಡ್ಡ ಗಂಡಾಂತರಗಳೇ ಸುಲಭವಾಗಿ ದೂರವಾಗಿಬಿಡುತ್ತದೆ ಎಂಬ ವಿಶ್ವಾಸವಿದೆ. ದೀರ್ಘ ಕಾಲದಿಂದ ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನವರಾತ್ರಿ ವೇಳೆ ದುರ್ಗಾ ಮಾತೆಯನ್ನು ಆರಾಧಿಸುವುದರಿಂದ ಶೀಘ್ರವೇ ಅದಕ್ಕೆ ಪರಿಹಾರ ಸಿಗುತ್ತದೆ.

ಮನೋಕಾಮನೆಗಳನ್ನು ಪೂರ್ತಿಗೊಳಿಸಿಕೊಳ್ಳಬೇಕು ಅಂದರೆ

ದುರ್ಗಾ ಮಾತೆಯ ಎದುರು ಮಣ್ಣಿನಿಂದ ಮಾಡಿದ 9 ಅಖಂಡ ದೀಪಗಳನ್ನು ಹಚ್ಚಬೇಕು. ಕೈಯಲ್ಲಿ ನೀರು ಹಿಡಿದು ಪ್ರಾರ್ಥನೆ ಸಲ್ಲಿಸಬೇಕು. ಅದಾದ ಮೇಲೆ ಕೈಯಲ್ಲಿರುವ ನೀರನ್ನು ನೆಲದ ಮೇಲೆ ಬಿಡಬೇಕು. ಇನ್ನು ಅಖಂಡ ದೀಪಗಳನ್ನು 9 ದಿನ, 7 ದಿನ, 5 ದಿನ ಅಥವಾ 2 ದಿನಗಳ ಕಾಲ ಹಚ್ಚುವುದರಿಂದ ನಿಮ್ಮ ಮನೋಕಾಮನೆಗಳು ನೆರವೇರುತ್ತವೆ. ಆದರೆ ಈ ಮಧ್ಯೆ ದೀಪವನ್ನು ಆರಿಸಬಾರದು.

ನಿಂತು ಹೋಗಿರುವ ಯೋಜನೆ ಕೈಗೂಡಬೇಕು ಅಂದರೆ

ದೀರ್ಘ ಕಾಲದಿಂದ ಕೈಗೂಡದೆ ನಿಂತುಹೋಗಿರುವ ಕೆಲಸ ಪೂರ್ಣಗೊಳ್ಳಬೇಕು ಅಂದರೆ ದುರ್ಗಾ ಮಾತೆಗೆ ಕೆಂಪು ಚುನರಿ ಬಟ್ಟೆಯಲ್ಲಿ ಐದು ತರಹದ ಒಣ್ಣ ಹಣ್ಣುಗಳನ್ನು (Dry Fruits) ತೆಗೆದುಕೊಂಡು ಹೋಗಿ ದುರ್ಗಾ ಮಾತೆಗೆ ಅರ್ಪಿಸಬೇಕು. ಆ ವೇಳೆ ನಿಮ್ಮ ಇಚ್ಛೆಯನ್ನು ಪೂರ್ತಿಗೊಳಿಸುವಂತೆ ಮಾತೆಯಲ್ಲಿ ಪ್ರಾರ್ಥನೆ ಮಾಡಬೇಕು. ಬಳಿಕ ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಇದರಿಂದ ನಿಮ್ಮ ಕೆಲಸದಲ್ಲಿ ಎದುರಾಗುತ್ತಿರುವ ವಿಘ್ನಗಳು ದೂರವಾಗುತ್ತವೆ. ನಿಂತುಹೋಗಿರುವ ನಿಮ್ಮ ಕೆಲಸ ಪೂರ್ಣಗೊಳ್ಳಲಿದೆ.

ಹಣದ ಸಂಕಟ ದೂರವಾಗಬೇಕು ಅಂದರೆ

ಒಂದು ವೇಳೆ ನಿಮ್ಮ ಪರಿವಾರದಲ್ಲಿ ಹಣದ ಸಂಕಷ್ಟ ಎದುರಾಗಿದೆ ಅಂದರೆ ಅದನ್ನು ನಿವಾರಿಸಿಕೊಳ್ಳಲು ನವರಾತ್ರಿಯ ವೇಳೆ ಬೆಳ್ಳಿಯಲ್ಲಿ ಮಾಡಿರುವ ಸ್ವಸ್ತಿಕ್, ಅನೆ, ದೀಪ, ಕಲಶ, ಶ್ರೀ ಯಂತ್ರ, ಮುಕುಟ ಇವುಗಳ ಪೈಕಿ ಒಂದನ್ನು ಖರೀದಿಸಬೇಕು. ಅದನ್ನು ದುರ್ಗಾ ಮಾತೆಯ ಪದ ತಲದಲ್ಲಿ ಇಡಬೇಕು. ನವರಾತ್ರಿಯ ಕೊನೆಯ ದಿನ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ಹಣ ಎತ್ತಿಡುವ ಜಾಗದಲ್ಲಿ ಎತ್ತಿಡಬೇಕು. ಇದರಿಂದ ಶೀಘ್ರವೇ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗಲಿವೆ. ಧನಾಗಮ ಶುರುವಾಗಲಿದೆ.

ಸಂಕಷ್ಟಗಳಿಂದ ದೂರವಾಗಲು

ನವರಾತ್ರಿಯ ದಿನಗಳಲ್ಲಿ ವೀಳ್ಯದ ಎಲೆಯಲ್ಲಿ ಲವಂಗ ಮತ್ತು ಬತಾಸು ಸಿಹಿ ತಿನಿಸನ್ನು ಆಂಜನೇಯನಿಗೆ ಅರ್ಪಿಸಬೇಕು. ಅದಾದ ಮೇಲೆ ಹನುಮಾನ್​ ಚಾಲೀಸ್​ ಪಠಣ ಮಾಡಬೇಕು. ಇದರಿಂದ ನಿಮ್ಮ ಕಷ್ಟಗಳು ದೂರವಾಗಲಿವೆ.

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ