AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Owl: ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ

ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದ್ರೆ ತಂತ್ರಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು. ಬನ್ನಿ ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ ಎಂಬ ಬಗ್ಗೆ ತಿಳಿದುಕೊಳ್ಳಿ.

Owl: ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ
ಗೂಬೆ
TV9 Web
| Edited By: |

Updated on: Oct 19, 2022 | 6:30 AM

Share

ರಾತ್ರಿಯ ರಾಜ ಎಂದು ಕರೆಯಲ್ಪಡುವ ಗೂಬೆ ಬಗ್ಗೆ ನಮ್ಮಲ್ಲಿ ಅನೇಕ ನಂಬಿಕೆಗಳಿವೆ. ಕೆಲವರು ಗೂಬೆಯನ್ನು ಶುಭವೆಂದು ನಂಬಿದರೆ ಮತ್ತೆ ಕೆಲವರು ಅದನ್ನು ಅಶುಭವೆನ್ನುತ್ತಾರೆ. ಸಾಮಾನ್ಯವಾಗಿ ಮೂರ್ಖ ಎಂದು ಬೈಯ್ಯುವಾಗ ಗೂಬೆ ಪದ ಬಳಸಲಾಗುತ್ತದೆ. ಆದ್ರೆ ಮೂಲತಃ ಇದು ತಪ್ಪು. ಗೂಬೆ, ತಾಯಿ ಲಕ್ಷ್ಮಿಯ ವಾಹನ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು. ಬನ್ನಿ ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ ಎಂಬ ಬಗ್ಗೆ ತಿಳಿದುಕೊಳ್ಳಿ.

ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದ್ರೆ ತಂತ್ರಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ. ಪ್ರಾಚೀನ ಕಾಲದಲ್ಲಿ ಹವಾಮಾನದ ಬಗ್ಗೆ ತಿಳಿಯಲೂ ಗೂಬೆಯನ್ನು ಬಳಕೆ ಮಾಡ್ತಾ ಇದ್ದರು. ಪುರಾಣ ಕಾಲದ ಉಲ್ಲೇಖದಂತೆ ಮಂತ್ರ-ತಂತ್ರ ಮಾಡುವವರು ಅಮವಾಸ್ಯೆ ರಾತ್ರಿಯಂದು ಗೂಬೆಯನ್ನು ಬಲಿ ಕೊಡ್ತಾರಂತೆ. ಇದರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂಬುದು ಅವರ ನಂಬಿಕೆ. ಆದ್ರೆ ಯಾವುದೇ ಬಲಿಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುವುದಿಲ್ಲ. ಅದೇನೇ ಇರಲಿ, ಗೂಬೆ ಕೆಲ ಶುಭ ಸಂಕೇತಗಳನ್ನೂ ನೀಡುತ್ತದೆ.

ಗೂಬೆಯ ಕೆಲ ಶುಭ ಸಂಕೇತಗಳು

  • ಬೆಳಿಗ್ಗೆ ಪೂರ್ವದಲ್ಲಿ ಕುಳಿತಿರುವ ಗೂಬೆಯನ್ನು ನೋಡಿದ್ರೆ ಅಥವಾ ಧ್ವನಿ ಕೇಳಿದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಅಥವಾ ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ಕಂಡರೆ ಶುಭ ಎನ್ನಲಾಗುತ್ತೆ.
  • ರಾತ್ರಿ ವೇಳೆ ಹೊರಗೆ ಹಾಕಿರುವ ಮಂಚದ ಮೇಲೆ ಗೂಬೆ ಬಂದು ಕುಳಿತಲ್ಲಿ ಆ ಮನೆಯಲ್ಲಿ ಶೀಘ್ರವೇ ಮದುವೆ ನಡೆಯಲಿದೆ ಎಂದರ್ಥ.
  • ಗರ್ಭಿಣಿ ಹೆರಿಗೆಗೆ ಹೋಗುವ ವೇಳೆ ಗೂಬೆ ನೋಡಿದ್ರೆ ಆಕೆಗೆ ಅವಳಿ ಮಕ್ಕಳು ಜನಿಸುತ್ತವೆ ಎಂಬ ನಂಬಿಕೆ ಇದೆ.
  • ಗೂಬೆ ದೇಹ ರೋಗಿ ಮೈಗೆ ತಾಕಿದ್ರೆ ಆತ ಬೇಗ ಗುಣಮುಖನಾಗುತ್ತಾನೆಂದರ್ಥ. ಬಿಳಿ ಗೂಬೆ ಕಾಣಿಸಿಕೊಂಡರೆ ಶುಭ. ಬಿಳಿ ಗೂಬೆ ನೋಡಿದವರು ಶುಭ ಸುದ್ದಿಯನ್ನು ಕೇಳುತ್ತೀರಿ ಎನ್ನಲಾಗಿದೆ.
  • ಬೆಳಗ್ಗೆ ಸಮಯದಲ್ಲಿ ಗೂಬೆ ಕಂಡರೆ ಶುಭ ಸಂಕೇತ ಎನ್ನಲಾಗಿದೆ. ಬೆಳಗ್ಗೆ ಸಮಯದಲ್ಲಿ ಗೂಬೆ ಕಂಡವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ.
  • ನೀವು ಎಲ್ಲಾದರೂ ಹೋಗುತ್ತಿರುವಾಗ ಗೂಬೆ ನಿಮ್ಮ ದಾರಿಗೆ ಅಡ್ಡ ಬಂದರೆ ಅದು ಶುಭ ಸಂಕೇತ. ನಿಮ್ಮ ಜೀವನದಲ್ಲಿ ಏನೇ ಅಡೆ ತಡೆಗಳಿದ್ದರೂ ಅಥವಾ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ.

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ