
ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ ಮತ್ತು ಅಪಾರ ನಂಬಿಕೆಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು 2026ರ ಆಗಸ್ಟ್ 28, ಶುಕ್ರವಾರದಂದು ವೈಭವದಿಂದ ಆಚರಿಸಲಾಗುತ್ತಿದೆ. ಆದರೆ, ಇದೇ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ ಎಂಬ ಸುದ್ದಿಯಿಂದಾಗಿ ಹಲವರಲ್ಲಿ “ಸೂತಕ್ ಅವಧಿ ಅನ್ವಯಿಸುತ್ತದೆಯೇ?” ಹಾಗೂ “ರಾಖಿ ಕಟ್ಟಲು ಯಾವುದೇ ಅಡಚಣೆ ಇದೆಯೇ?” ಎಂಬ ಅನುಮಾನಗಳು ಮೂಡಿವೆ. ಧಾರ್ಮಿಕ ನಿಯಮಗಳು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂಶಯಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.
ಈ ಬಾರಿಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣದ ಸಮಯದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಹಗಲು ವೇಳೆಯಾಗಿರುವುದರಿಂದ ಹಾಗೂ ಚಂದ್ರನು ದಿಗಂತದ ಕೆಳಗಿರುವುದರಿಂದ ಈ ಖಗೋಳ ಘಟನೆ ಭಾರತಕ್ಕೆ ಗೋಚರವಾಗುವುದಿಲ್ಲ.
ಸಾಮಾನ್ಯವಾಗಿ ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಗ್ರಹಣ ಗೋಚರಿಸುವ ಪ್ರದೇಶಗಳಲ್ಲಿ ಈ ಸಮಯದಲ್ಲಿ ಪೂಜೆ, ಶುಭ ಕಾರ್ಯಗಳು ಹಾಗೂ ಆಹಾರ ಸೇವನೆಯನ್ನು ನಿಷೇಧಿಸುವ ಸಂಪ್ರದಾಯವಿದೆ. ಆದರೆ, ಸಾಂಪ್ರದಾಯಿಕ ಪಂಚಾಂಗ ನಿಯಮಗಳ ಪ್ರಕಾರ, ಗ್ರಹಣವು ಎಲ್ಲಿ ಕಣ್ಣಿಗೆ ಕಾಣಿಸುತ್ತದೆಯೋ ಅಲ್ಲಿ ಮಾತ್ರ ಸೂತಕ ನಿಯಮಗಳು ಅನ್ವಯಿಸುತ್ತವೆ. ಭಾರತದಲ್ಲಿ ಗ್ರಹಣ ಕಾಣಿಸದಿರುವುದರಿಂದ ಯಾವುದೇ ಸೂತಕ ಅವಧಿ ಇರುವುದಿಲ್ಲ.
ಇದನ್ನೂ ಓದಿ: ಆ.28ರಂದು ರಕ್ಷಾ ಬಂಧನ; ಈ ಶುಭ ದಿನದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?
ರಕ್ಷಾ ಸೂತ್ರವು ಶುದ್ಧತೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಗ್ರಹಣದ ಪ್ರಭಾವ ಭಾರತದಲ್ಲಿ ಇಲ್ಲದಿರುವುದರಿಂದ, ಸಹೋದರಿಯರು ಕಾಯುವ ಅಗತ್ಯವಿಲ್ಲದೇ ಬೆಳಗಿನ ಶುಭ ಮುಹೂರ್ತದಲ್ಲೇ ಸಹೋದರರಿಗೆ ರಾಖಿ ಕಟ್ಟಬಹುದು. ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಬಹುದು.
ಅನೇಕ ಕುಟುಂಬಗಳಲ್ಲಿ ಹಬ್ಬದ ಪೂಜೆಗೂ ಮುನ್ನ ಹಾಗೂ ರಕ್ಷಾ ಸೂತ್ರಕ್ಕೆ ಗಂಗಾಜಲ ಸಿಂಪಡಿಸಿ ಶುದ್ಧೀಕರಿಸುವ ಸಂಪ್ರದಾಯವಿದೆ. ಇದು ಆಧ್ಯಾತ್ಮಿಕ ಭಕ್ತಿ ಮತ್ತು ಸಾಂಪ್ರದಾಯಿಕ ನಂಬಿಕೆಗೆ ಸಂಬಂಧಿಸಿದ ಆಚರಣೆಯಾಗಿದ್ದು, ಗ್ರಹಣದ ಭಯದಿಂದ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಕುಟುಂಬದ ಸಾಂಪ್ರದಾಯಿಕ ಪದ್ಧತಿಯಂತೆ ಇದನ್ನು ಅನುಸರಿಸಬಹುದು. ಭಯವಿಲ್ಲದೆ ಹಬ್ಬ ಆಚರಿಸಿಚಂದ್ರಗ್ರಹಣದ ಕಾರಣದಿಂದಾಗಿ ಹಬ್ಬದ ಸಂಭ್ರಮಕ್ಕೆ ಯಾವುದೇ ಧಕ್ಕೆ ಇಲ್ಲ. ಗ್ರಹಣದ ಪ್ರಭಾವ ಭಾರತದಲ್ಲಿ ಇಲ್ಲದಿರುವುದರಿಂದ ಸಹೋದರ-ಸಹೋದರಿಯರು ನಿರಾತಂಕವಾಗಿ, ಪ್ರೀತಿ-ವಾತ್ಸಲ್ಯದಿಂದ ಹಬ್ಬವನ್ನು ಆಚರಿಸಿ ಪರಸ್ಪರ ಶುಭ ಹಾರೈಸಬಹುದು. ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗಳಿಸುವುದೇ ಈ ರಕ್ಷಾ ಬಂಧನದ ನಿಜವಾದ ಉದ್ದೇಶ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Fri, 28 August 26