
Raksha Bandhan
ಈ ಜಗತ್ತಿನಲ್ಲಿ ತಂದೆ ತಾಯಿಯಂತೆ ಪೋಷಣೆ ಹಾಗೂ ಕಾಳಜಿ ವಹಿಸುವ ಸಂಬಂಧವಿದ್ದರೆ ಅದು ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಸಂಬಂಧ. ಈ ಸಂಬಂಧವನ್ನು ಸಂಭ್ರಮಿಸುವ ಹಬ್ಬವೇ ರಕ್ಷಾ ಬಂಧನ. ಈ ದಿನವು ಅಣ್ಣ ತಂಗಿಯರ ಭಾಂಧವ್ಯದ ಸಂಕೇತವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ಹಬ್ಬ ಕೂಡ ಹೌದು. ಈ ದಿನದಂದು ಅಣ್ಣನ ಒಳಿತನ್ನು ಬಯಸುವ ಸಹೋದರಿಯರು ರಾಖಿ ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ತನ್ನ ಮುದ್ದಿನ ತಂಗಿ ಅಥವಾ ಅಕ್ಕನಿಗೆ ವಿಶೇಷ ಉಡುಗೆಯನ್ನು ನೀಡುವುದು ವಾಡಿಕೆ. ಅಣ್ಣ ತಂಗಿಯರ ಸುಂದರ ಬಾಂಧವ್ಯವನ್ನು ಸಾರುವ ಈ ಬಾರಿಯ ರಕ್ಷಾ ಬಂಧನ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳು ಇಲ್ಲಿದೆ ಓದಿ.
ವೀರೇಂದ್ರ ಹೆಗ್ಗಡೆ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬ ಆಚರಿಸಿದ ಹಿರಿಯ ನಟಿ ಶ್ರುತಿ
ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಅವರು ಈ ವರ್ಷ ಧರ್ಮಸ್ಥಳದಲ್ಲಿ ರಕ್ಷಾ ಬಂಧನ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಶ್ರುತಿ ರಾಖಿ ಕಟ್ಟಿದ್ದಾರೆ. ಅವರ ಜೊತೆ ಮಗಳು ಗೌರಿ ಕೂಡ ಹಾಜರಿದ್ದರು. ಈ ವಿಶೇಷ ಫೋಟೋಗಳು ಇಲ್ಲಿವೆ ನೋಡಿ..
- Madan Kumar
- Updated on: Aug 20, 2024
- 3:10 pm
ರಾಧಿಕಾ ಪಂಡಿತ್ ಮನೆಯಲ್ಲಿ ರಕ್ಷಾ ಬಂಧನ ಸೆಲೆಬ್ರೇಷನ್; ಫೋಟೋಸ್ ನೋಡಿ..
ಎಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಖುಷಿಯಿಂದ ಆಚರಿಸಲಾಗಿದೆ. ಸೆಲೆಬ್ರಿಟಿಗಳು ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನಿಸಲಾಗಿದೆ. ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ರಾಖಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಸಹೋದರನನ್ನು ರಾಧಿಕಾ ಮಿಸ್ ಮಾಡಿಕೊಂಡಿದ್ದಾರೆ.
- Madan Kumar
- Updated on: Aug 19, 2024
- 10:04 pm
Sudha Murty: ಈ ರೀತಿ ಎಂದೂ ಆಗಿರಲಿಲ್ಲ; ರಕ್ಷಾ ಬಂಧನದ ಕುರಿತ ಪೋಸ್ಟ್ ವಿವಾದಕ್ಕೆ ಸುಧಾ ಮೂರ್ತಿ ಬೇಸರ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ ಒಂದು ಭಾರೀ ವೈರಲ್ ಆಗಿತ್ತು. ಇದು ಎಲ್ಲೆಡೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತು. ಹಾಗಾದರೆ, ಏನು ಈ ವಿವಾದ? ಇಲ್ಲಿದೆ ಪೂರ್ತಿ ಮಾಹಿತಿ.
- Sushma Chakre
- Updated on: Aug 19, 2024
- 9:37 pm
ರಾಖಿಯಲ್ಲಿ ದಾಖಲಾಯ್ತು ತಾಯಿ-ಮಗನ ಆಪ್ತ ಕ್ಷಣ; ಮೋದಿಗೆ ವಿಶೇಷ ರಾಖಿ ಕಟ್ಟಿದ ಬಾಲಕಿ
ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಸರದಿಯಲ್ಲಿ ತೆರಳಿ ಮೋದಿಗೆ ರಾಖಿ ಕಟ್ಟಿದ್ದಾರೆ. ತಾವೇ ವಿಶೇಷವಾಗಿ ರಾಖಿಯನ್ನು ತಯಾರಿಸಿ ಕಟ್ಟಿರುವ ವಿದ್ಯಾರ್ಥಿಗಳ ಉತ್ಸಾಹ ಕಂಡು ಮೋದಿ ಅತ್ಯಂತ ಸಂತೋಷ ಪಟ್ಟಿದ್ದಾರೆ.
- Sushma Chakre
- Updated on: Aug 19, 2024
- 4:42 pm
ಜೈಲಿನಲ್ಲಿ ರಾಖಿ ಕಟ್ಟಿಸಿಕೊಳ್ಳದೇ ಧಿಮಾಕು ತೋರಿದ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ
ಪರಪ್ಪನ ಅಗ್ರಹಾರದಲ್ಲಿ ಇರುವ ಪವಿತ್ರಾ ಗೌಡ ಅವರು ಧಿಮಾಕಿನಿಂದ ನಡೆದುಕೊಂಡಿದ್ದಾರೆ. ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಜೈಲಿನಲ್ಲಿವವರಿಗೆ ರಾಖಿ ಕಟ್ಟಲು ತೆರಳಿದ್ದ ಮಹಿಳೆಯರ ಎದುರು ಪವಿತ್ರಾ ಗೌಡ ಧಿಮಾಕಿನ ವರ್ತನೆ ತೋರಿದ್ದಾರೆ. ದರ್ಶನ್ ಸ್ನೇಹಿತೆಯಾದ ಪವಿತ್ರಾ ಗೌಡ ಅವರಿಗೆ ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನ ಮುಂದುವರಿದಿದೆ.
- Ramu Ram
- Updated on: Aug 19, 2024
- 4:20 pm
Raksha Bandhan: ದೆಹಲಿಯಲ್ಲಿ ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ
ರಕ್ಷಾಬಂಧನದ ಹಿನ್ನೆಲೆಯಲ್ಲಿ ಇಂದು ಶಾಲಾ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಲು ಸರದಿಯಂತೆ ನಿಂತಿದ್ದರು. ಕಾರ್ಯಕ್ರಮದ ಕೊನೆಯಲ್ಲಿ, ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು.
- Sushma Chakre
- Updated on: Aug 19, 2024
- 4:19 pm
ಆತ್ಮಹತ್ಯೆಗೆ ಯತ್ನ, ತಾನು ಸಾಯುವ ಮೊದಲು ತಮ್ಮನಿಗೆ ರಾಖಿ ಕಟ್ಟಿದ ಅಕ್ಕ
ಸಾಯುವ ಮೊದಲು ಆಸ್ಪತ್ರೆಯ ಹಾಸಿಗೆ ಮೇಲೆಯೇ ಅಕ್ಕ ತಮ್ಮನಿಗೆ ರಾಖಿ ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಮಹಬೂಬಾಬಾದ್ ಮೂಲದ ಬಾಲಕಿ ತನ್ನ ಪ್ರಾಣ ಕಳೆದುಕೊಳ್ಳಲು ಪ್ರಯತ್ನ ಪಟ್ಟಿದ್ದಳು, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
- Nayana Rajeev
- Updated on: Aug 19, 2024
- 3:33 pm
ರಕ್ಷಾ ಬಂಧನ: ಸೋದರನಿಂದ ಸೋದರಿಗೆ ಕೊಡಬಹುದಾದ ಒಳ್ಳೆಯ ಹಣಕಾಸು ಉಡುಗೊರೆಗಳು…
Raksha Bandhan festival 2024: ಇವತ್ತು 19 ಆಗಸ್ಟ್ 2024, ರಕ್ಷಾ ಬಂಧನ ಹಬ್ಬ. ಸೋದರ ಮತ್ತು ಸೋದರಿಯರ ಬಾಂಧವ್ಯದ ಸಂಕೇತ ಇದು. ಸೋದರಿ ನಿಮ್ಮ ಕೈಗೆ ರಾಖಿ ಕಟ್ಟಿದಾಗ ನೀವು ಏನು ಗಿಫ್ಟ್ ಕೊಡುತ್ತೀರಿ? ಸೋದರಿಗೆ ಹಣಕ್ಕಿಂತ ಪ್ರೀತಿ ಮತ್ತು ಭದ್ರತಾ ಭಾವನೆ ಮುಖ್ಯವಾದರೂ ಆಕೆಯ ಭವಿಷ್ಯಕ್ಕೆ ನೆರವಾಗುವಂಥ ಹಣಕಾಸು ಉಡುಗೊರೆಗಳನ್ನು ನೀವು ಕೊಡಬಹುದು. ಇಲ್ಲಿದೆ ಒಂದಷ್ಟು ಸಲಹೆಗಳು...
- Vijaya Sarathy SN
- Updated on: Aug 19, 2024
- 10:38 am
Raksha Bandhan 2024: ಅಲೆಕ್ಸಾಂಡರ್ನ ಪ್ರಾಣಕ್ಕೆ ರಕ್ಷಣೆಯಾಗಿತ್ತು ಈ ರಕ್ಷಾಬಂಧನ
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲಿ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಅವರಿಬ್ಬರ ನಡುವೆ ಯುದ್ಧ ನಡೆಯುವ ಸಮಯದಲ್ಲಿ ಅಲೆಕ್ಸಾಂಡರ್ ಪತ್ನಿ ಪೋರಸ್ಗೆ ಒಂದು ಪವಿತ್ರ ದಾರ ಮತ್ತು ಒಂದು ಮನವಿಯನ್ನು ಮಾಡುತ್ತಾಳೆ. ಅದೇನೆಂದರೆ ತನ್ನ ಪತಿಯನ್ನು ಕೊಲ್ಲದಂತೆ ಕೇಳಿಕೊಳ್ಳುತ್ತಾಳೆ. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರ್ನನ್ನು ಕೊಲ್ಲದೆ ಉಳಿಸಿದನು.
- Web contact
- Updated on: Aug 19, 2024
- 10:11 am
Raksha Bandhan 2024: ದ್ರೌಪದಿ ಕೃಷ್ಣನಿಗೆ ಕಟ್ಟಿದ ರಕ್ಷೆ ಅವಳ ಮಾನ ಉಳಿಸಿತು
ಸಹೋದರ ಸಹೋದರಿಯರಾಗಲು ಒಡಹುಟ್ಟಿಕೊಳ್ಳಬೇಕೆಂದು ಇದೆಯೇ. ಹಾಗಾದರೆ ಶ್ರೀ ಕೃಷ್ಣ ಯಾಕೆ ದ್ರೌಪತಿಯನ್ನು ಸಹೋದರಿಯಾಗಿ ಸ್ವೀಕರಿಸಿದ್ದು. ದ್ರೌಪತಿ ಏಕೆ ಶ್ರೀ ಕೃಷ್ಣನನ್ನು ರಕ್ಷಾಬಂಧನದ ರಕ್ಷೆಯಲ್ಲಿ ಕಟ್ಟಿಕೊಂಡಿದ್ದಳು. ರಕ್ತ ಸಂಬಂಧಗಳಿಂದ ಸೂಚಿಸುವ ಬಂಧವಲ್ಲ ಈ ರಕ್ಷೆ.
- Web contact
- Updated on: Aug 18, 2024
- 2:46 pm