AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan

Raksha Bandhan

ಈ ಜಗತ್ತಿನಲ್ಲಿ ತಂದೆ ತಾಯಿಯಂತೆ ಪೋಷಣೆ ಹಾಗೂ ಕಾಳಜಿ ವಹಿಸುವ ಸಂಬಂಧವಿದ್ದರೆ ಅದು ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಸಂಬಂಧ. ಈ ಸಂಬಂಧವನ್ನು ಸಂಭ್ರಮಿಸುವ ಹಬ್ಬವೇ ರಕ್ಷಾ ಬಂಧನ. ಈ ದಿನವು ಅಣ್ಣ ತಂಗಿಯರ ಭಾಂಧವ್ಯದ ಸಂಕೇತವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ಹಬ್ಬ ಕೂಡ ಹೌದು. ಈ ದಿನದಂದು ಅಣ್ಣನ ಒಳಿತನ್ನು ಬಯಸುವ ಸಹೋದರಿಯರು ರಾಖಿ ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ತನ್ನ ಮುದ್ದಿನ ತಂಗಿ ಅಥವಾ ಅಕ್ಕನಿಗೆ ವಿಶೇಷ ಉಡುಗೆಯನ್ನು ನೀಡುವುದು ವಾಡಿಕೆ. ಅಣ್ಣ ತಂಗಿಯರ ಸುಂದರ ಬಾಂಧವ್ಯವನ್ನು ಸಾರುವ ಈ ಬಾರಿಯ ರಕ್ಷಾ ಬಂಧನ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳು ಇಲ್ಲಿದೆ ಓದಿ.

ಇನ್ನೂ ಹೆಚ್ಚು ಓದಿ

ಕೃತಿ ಸನನ್ ಜಾಹೀರಾತು ವಿವಾದ: ಸಿಬ್ಬಂದಿ ಸುರಕ್ಷತೆಗಾಗಿ ವಿಡಿಯೋ ಹಿಂಪಡೆದ ಕಂಪನಿ

ನಟಿ ಕೃತಿ ಸನನ್ ಅಭಿನಯಿಸಿದ್ದ ಹೊಸ ಜಾಹೀರಾತು ಸಖತ್ ವಿವಾದಕ್ಕೆ ಕಾರಣವಾದ ಬಳಿಕ ಅದನ್ನು ತೆಗೆದುಹಾಕಲಾಯಿತು. ಆ ನಿರ್ಧಾರಕ್ಕೆ ಅಸಲಿ ಕಾರಣ ಏನು ಎಂಬುದನ್ನು ಆ ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ. ವಿವಾದ ಹೆಚ್ಚಾದ ಬಳಿಕ ತಮ್ಮ ಸಿಬ್ಬಂದಿಗೆ ಅಭದ್ರತೆಯ ವಾತಾವರಣ ಸೃಷ್ಟಿ ಆಗಿತ್ತು ಎಂದು ಅವರು ಹೇಳಿದ್ದಾರೆ.

Raksha Bandhan: ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋಗೆ ಭಾರೀ ಮೆಚ್ಚುಗೆ

ರಕ್ಷಾ ಬಂಧನ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯರು ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದರು. ಯೋಧರ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಕಾಶ್ಮೀರಿ ಯುವತಿಯರು ಹಾಗೂ ಶಾಲಾ ಬಾಲಕಿಯರು ರಕ್ಷಾಬಂಧನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದರು. ಜಾತಿ-ಧರ್ಮ ಮೀರಿ ಸಹೋದರತ್ವ ಸಾರಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಮ್ಮೆಯಿಂದ ರಾಖಿ ತೋರಿಸಿದ ಸಲ್ಮಾನ್ ಖಾನ್; ಸಹೋದರಿ ಮನೆಯಲ್ಲಿ ರಕ್ಷಾ ಬಂಧನ ಸಡಗರ

ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಎಲ್ಲ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಅದಕ್ಕೆ ರಾಖಿ ಹಬ್ಬ ಕೂಡ ಹೊರತಾಗಿಲ್ಲ. ಸಹೋದರಿ ಅಲ್ವಿರಾ ಖಾನ್ ನಿವಾಸದಲ್ಲಿ ಸಲ್ಮಾನ್ ಖಾನ್ ಅವರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲಿಂದ ಹೊರಬರುವಾಗ ಅವರು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು.

ಮೋದಿ ತಾತನಿಗೆ ರಾಖಿ ಕಟ್ಟಿ, ಕೆನ್ನೆಗೆ ಮುತ್ತು ನೀಡಿ ಸಂಭ್ರಮಿಸಿದ ಮಕ್ಕಳು

ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ಜೊತೆ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ. ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಶಾಲಾ ಮಕ್ಕಳನ್ನು ಭೇಟಿಯಾದ ಪ್ರಧಾನಿ ಮೊದಿಯವರಿಗೆ ಕೈ ತುಂಬ ರಾಖಿ ಕಟ್ಟಿದ ಮಕ್ಕಳು ಮೋದಿ ತಾತಾ ನೀಡಿದ ಸ್ವೀಟ್ ತಿಂದು, ಸಂಭ್ರಮಪಟ್ಟರು. ಮಕ್ಕಳ ಜೊತೆ ಬೆರೆತು ಸಂಭ್ರಮಿಸಿದ ಪ್ರಧಾನಿ ಮೋದಿಯವರ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಮಹಾರಾಷ್ಟ್ರದ ರಾಜ್ಯಪಾಲರಿಗೆ ರಾಖಿ ಕಳುಹಿಸಿ, ಆಶೀರ್ವದಿಸಿದ ಬಿಎಪಿಎಸ್​ ಗುರು ಮಹಂತ್ ಸ್ವಾಮಿ ಮಹಾರಾಜ್

ರಕ್ಷಾಬಂಧನದ ಪ್ರಯುಕ್ತ ಮಹಾರಾಷ್ಟ್ರದ ರಾಜ್ಯಪಾಲರಿಗೆ ಮುಂಬೈನ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಧಾರ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರು ಆಶೀರ್ವದಿಸಿ ರಾಖಿಯನ್ನು ನೀಡಿದರು. ಮಹಂತ್ ಸ್ವಾಮಿ ಮಹಾರಾಜ್ ಕಳುಹಿಸಿದ ರಾಖಿಯನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರಿಗೆ ಕಟ್ಟಿ, ಶ್ರೀಗಳ ಆಶೀರ್ವಾದವನ್ನು ತಲುಪಿಸಲಾಯಿತು. ಈ ಮಾತುಕತೆಯ ವೇಳೆ, ಬಿಎಪಿಎಸ್ ಸಂಸ್ಥೆಯು ನಡೆಸುತ್ತಿರುವ ಆಧ್ಯಾತ್ಮಿಕ ಹಾಗೂ ಮಾನವೀಯ ಸೇವಾ ಕಾರ್ಯಗಳನ್ನು ರಾಜ್ಯಪಾಲರು ಮುಕ್ತಕಂಠದಿಂದ ಶ್ಲಾಘಿಸಿದರು.

ಹೈಫೈವ್, ಸಿಹಿಮುತ್ತು, ತಮಾಷೆ; ಪ್ರಧಾನಿ ಮೋದಿಯ ರಕ್ಷಾಬಂಧನದ ಸಂಭ್ರಮ ಹೀಗಿತ್ತು ನೋಡಿ

ಪ್ರತಿ ವರ್ಷವೂ ಪ್ರಧಾನಿಯಾದಾಗಿನಿಂದಲೂ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಾರೆ. ಇಂದು ಕೂಡ ಹಲವು ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಮೋದಿ ತಾತನಿಗೆ ರಾಖಿ ಕಟ್ಟಲು ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಮಕ್ಕಳಿಗೆ ಹೈಫೈವ್‌ ನೀಡುತ್ತಾ, ನಗುತ್ತಾ, ನಗಿಸುತ್ತಾ ಪ್ರಧಾನಿ ಮೋದಿ ರಕ್ಷಾಬಂಧನ ಆಚರಿಸಿದ್ದಾರೆ. ಪ್ರಧಾನಿ ಮೋದಿಯವರ ಸಂಭ್ರಮದ ವಿಡಿಯೋ ಇಲ್ಲಿದೆ.

Video: ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ

ಗುಜರಾತ್‌ನ ಸೂರತ್‌ನಲ್ಲಿ ರಕ್ಷಾಬಂಧನಕ್ಕಾಗಿ ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕಯುಕ್ತ ರಾಖಿಗಳಿಗೆ ಪರ್ಯಾಯವಾಗಿ, ಮಾಧವ್ ಗೋಶಾಲೆ ಸೇರಿದಂತೆ ಹಲವು ಸಂಸ್ಥೆಗಳು ಈ ವೈಶಿಷ್ಟ್ಯಪೂರ್ಣ ವೈದಿಕ ರಾಖಿಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ದೇಶಿ ಹಸುವಿನ ಸಗಣಿ ಪುಡಿ, ಗೋಮೂತ್ರ, ರೇಷ್ಮೆ ದಾರ ಮತ್ತು ಮರವನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ, ಪರಿಸರ ಸ್ನೇಹಿ ಹಬ್ಬಕ್ಕೆ ಉತ್ತೇಜನ ನೀಡುತ್ತದೆ.

ಅಂದು ಹಾವು-ಮುಂಗುಸಿ, ಈಗ ಸ್ವೀಟ್ ಬ್ರದರ್-ಸಿಸ್ಟರ್; ಶ್ರುತಿ-ಶರಣ್ ಬಾಂಧವ್ಯದ ಕಥೆ

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಸಹೋದರ-ಸಹೋದರಿ ಶರಣ್ ಮತ್ತು ಶ್ರುತಿ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಗಮನ ಸೆಳೆದಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಇವರ ನಡುವೆ ಬೆಳೆಯುತ್ತಾ ಬಾಂಧವ್ಯ ಗಟ್ಟಿಯಾಗಿದೆ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಇಬ್ಬರೂ ಹಂಚಿಕೊಂಡ ಬಾಲ್ಯದ ಮೋಜಿನ ಘಟನೆಗಳು ಮತ್ತು ಸಿನಿ ಜರ್ನಿ ನೆನಪುಗಳು ಇಲ್ಲಿವೆ.

ಯಶ್​ಗೆ ತಂಗಿಯೆಂದರೆ ಅದೆಷ್ಟು ಪ್ರೀತಿ, ಬಾಲ್ಯದ ಆ ಘಟನೆಯೇ ಸಾಕ್ಷಿ

Yash sister Nandini: ಯಶ್ ಇತ್ತೀಚೆಗೆ ಪಾಲ್ಗೊಂಡಿದ್ದ ‘ಆಪ್ ಕಿ ಅದಾಲತ್’ ಸಂದರ್ಶನದಲ್ಲಿ ಯಶ್ ತಮ್ಮ ತಂಗಿ ನಂದಿನಿ ಅವರ ಬಗ್ಗೆ ಮಾತನಾಡಿದ್ದರು. ನಂದಿನಿ, ಇಡೀ ಪ್ರಪಂಚದಲ್ಲಿ ನನಗೆ ಬಹಳ ಪ್ರಿಯವಾದ ವ್ಯಕ್ತಿ ಎಂದಿದ್ದರು ಯಶ್. ನಂದಿನಿ ಅವರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಈ ಹಿಂದೆ ಅವರು ಯಶ್ ಬಗ್ಗೆ ಮಾತನಾಡಿದ್ದು ಕೆಲವು ಆಪ್ತ ವಿಷಯಗಳನ್ನು ಹಂಚಿಕೊಂಡಿದ್ದರು. ಮಾಹಿತಿ ಇಲ್ಲಿದೆ...

Raksha Bandhan: ಅಣ್ಣನಿಗೋ, ತಮ್ಮನಿಗೋ… ಮೊದಲು ಯಾರಿಗೆ ರಾಖಿ ಕಟ್ಟಬೇಕು? ಪೂಜಾ ವಿಧಿ-ವಿಧಾನ ಹಾಗೂ ಸಂಪೂರ್ಣ ಮಾಹಿತಿ

ರಕ್ಷಾ ಬಂಧನದಲ್ಲಿ ಮೊದಲು ಯಾರಿಗೆ ರಾಖಿ ಕಟ್ಟಬೇಕು ಎಂಬ ಗೊಂದಲಕ್ಕೆ ಇಲ್ಲಿ ಉತ್ತರ. ಸಾಮಾನ್ಯವಾಗಿ ಅಣ್ಣನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ, ಆದರೆ ಇದು ಕಡ್ಡಾಯ ನಿಯಮವಲ್ಲ. ಮುಖ್ಯವಾಗಿ ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ ಮುಖ್ಯ. ರಾಖಿ ಕಟ್ಟುವ ಮೊದಲು ಗಣೇಶ ಪೂಜೆ, ಮನೆದೇವರ ಸ್ಮರಣೆ ಸಾಂಪ್ರದಾಯಿಕ ಕ್ರಮಗಳು. ವಾಹನ ಹಾಗೂ ಸಾಕುಪ್ರಾಣಿಗಳಿಗೂ ರಾಖಿ ಕಟ್ಟುವ ಪದ್ಧತಿ ಕೆಲವು ಕಡೆ ಇದೆ. ಇದು ಬಾಂಧವ್ಯ ಬಲಪಡಿಸುವ ಹಬ್ಬ.

ಪ್ರೀತಿ, ವಿಶ್ವಾಸದ ಪವಿತ್ರ ಬಾಂಧವ್ಯ ಸದಾ ಅಚಲವಾಗಿರಲಿ: ಪ್ರಧಾನಿ ಮೋದಿಯವರ ರಕ್ಷಾಬಂಧನ ಸಂದೇಶ

ಪ್ರಧಾನಿ ಮೋದಿ ಅವರು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ್ದು, ಸೋದರ-ಸೋದರಿಯರ ನಡುವಿನ ಪವಿತ್ರ ಪ್ರೀತಿ, ವಿಶ್ವಾಸದ ಬಾಂಧವ್ಯ ಸದಾ ಅಚಲವಾಗಿರಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ, ‘ವಿಶ್ವ ಸಂಸ್ಕೃತ ದಿನ’ದ ಮಹತ್ವವನ್ನು ಸ್ಮರಿಸಿ, ಸಂಸ್ಕೃತವು ಭಾರತೀಯ ಪರಂಪರೆಯ ಜ್ಞಾನನಿಧಿ ಎಂದು ಬಣ್ಣಿಸಿದ್ದಾರೆ. ದೇಶದ ಗಡಿ ಕಾಯುವ ಯೋಧರಿಗೆ ರಾಖಿ ಕಳುಹಿಸುವ ಮೂಲಕ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವ ರಾಷ್ಟ್ರೀಯ ಸಂಕಲ್ಪವನ್ನೂ ತಿಳಿಸಿದ್ದಾರೆ.

Raksha Bandhan 2026: ರಕ್ಷಾ ಬಂಧನ ಹಬ್ಬದಂದೇ ಚಂದ್ರಗ್ರಹಣ; ರಾಖಿ ಕಟ್ಟಲು ಸೂಕ್ತ ಸಮಯ ಯಾವುದು? ಇಲ್ಲಿದೆ ಸ್ಪಷ್ಟ ಉತ್ತರ!

2026ರ ಆಗಸ್ಟ್ 28ರಂದು ರಕ್ಷಾ ಬಂಧನ ಮತ್ತು ಚಂದ್ರಗ್ರಹಣ ಒಟ್ಟಿಗೆ ಬಂದಿವೆ. ಆದರೆ, ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಸೂತಕ ಅವಧಿ ಅನ್ವಯಿಸುವುದಿಲ್ಲ. ಸಹೋದರಿಯರು ಯಾವುದೇ ಭಯವಿಲ್ಲದೆ ಬೆಳಗಿನ ಶುಭ ಮುಹೂರ್ತದಲ್ಲಿ ಸಹೋದರರಿಗೆ ರಾಖಿ ಕಟ್ಟಬಹುದು. ಧಾರ್ಮಿಕ ಪೂಜಾ ವಿಧಿಗಳಿಗೆ ಯಾವುದೇ ಅಡಚಣೆ ಇಲ್ಲ, ನಿರಾತಂಕವಾಗಿ ಹಬ್ಬವನ್ನು ಆಚರಿಸಿ ಬಾಂಧವ್ಯ ಗಟ್ಟಿಪಡಿಸಿ.