ರಕ್ಷಾ ಬಂಧನ
Image Credit source: Getty Images
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಪೂರ್ಣಿಮೆಯ ದಿನದಂದು ರಕ್ಷಾ ಬಂಧನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 28 ರಂದು ರಾಖಿ ಪೌರ್ಣಮಿ ಆಚರಿಸಲಾಗುತ್ತಿದ್ದು, ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯ, ಯಶಸ್ಸು ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಹೋದರನ ರಾಶಿಗೆ ಹೊಂದುವ ಬಣ್ಣದ ರಾಖಿಯನ್ನು ಆಯ್ಕೆ ಮಾಡುವುದು ಅತ್ಯಂತ ಶುಭ. ಪ್ರತಿಯೊಂದು ರಾಶಿಗೂ ಸೂಕ್ತವಾದ ಬಣ್ಣಗಳು ಹಾಗೂ ಅವುಗಳ ಆಧ್ಯಾತ್ಮಿಕ ಹಿನ್ನೆಲೆಯನ್ನು ಕೆಳಗೆ ನೀಡಲಾಗಿದೆ.
12 ರಾಶಿಗಳಿಗೆ ಸೂಕ್ತವಾದ ರಾಖಿ ಬಣ್ಣಗಳ ವಿವರ:
- ಮೇಷ ರಾಶಿ (Aries): ಈ ರಾಶಿಯವರು ಧೈರ್ಯ ಹಾಗೂ ಶಕ್ತಿಯ ಸಂಕೇತ. ಇವರಿಗೆ ಕೆಂಪು, ಗುಲಾಬಿ ಅಥವಾ ಹಳದಿ ಬಣ್ಣದ ರಾಖಿ ಶುಭ.
- ವೃಷಭ ರಾಶಿ (Taurus): ಸ್ಥಿರತೆ ಮತ್ತು ನಂಬಿಕೆಯನ್ನು ಗೌರವಿಸುವ ಇವರಿಗೆ ಹಸಿರು, ಕೆನೆ, ಆಕಾಶ ನೀಲಿ ಅಥವಾ ಬೂದು ಬಣ್ಣ ಸೂಕ್ತ.
- ಮಿಥುನ ರಾಶಿ (Gemini): ಬುದ್ಧಿವಂತಿಕೆ ಮತ್ತು ಉತ್ಸಾಹ ಹೊಂದಿರುವ ಇವರಿಗೆ ತಿಳಿ ಹಸಿರು, ಹಳದಿ, ಕೆಂಪು ಅಥವಾ ಶ್ರೀಗಂಧದ ಬಣ್ಣದ ರಾಖಿ ಒಳ್ಳೆಯದು.
- ಕರ್ಕಾಟಕ ರಾಶಿ (Cancer): ಭಾವನಾತ್ಮಕ ಸಮತೋಲನ ಮತ್ತು ಶಮನಕ್ಕಾಗಿ ಇವರಿಗೆ ಬಿಳಿ ಅಥವಾ ಬೆಳ್ಳಿ ಬಣ್ಣದ ರಾಖಿ ತೊಡಿಸಬೇಕು.
- ಸಿಂಹ ರಾಶಿ (Leo): ನಾಯಕತ್ವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ಚಿನ್ನ, ಕಿತ್ತಳೆ ಅಥವಾ ರಾಯಲ್ ಕೆಂಪು ಬಣ್ಣ ಆಯ್ಕೆ ಮಾಡಿ.
- ಕನ್ಯಾ ರಾಶಿ (Virgo): ಶಿಸ್ತು ಮತ್ತು ಏಕಾಗ್ರತೆಗೆ ಹೆಸರುವಾಸಿಯಾದ ಇವರಿಗೆ ತಿಳಿ ಹಸಿರು, ಮಣ್ಣಿನ ಬಣ್ಣ (Light Brown) ಸೂಕ್ತ.
- ತುಲಾ ರಾಶಿ (Libra): ಸಾಮರಸ್ಯ ಮತ್ತು ಪ್ರೀತಿಯನ್ನು ಬಯಸುವ ಇವರಿಗೆ ತಿಳಿ ನೀಲಿ, ಬಿಳಿ, ಗುಲಾಬಿ ಅಥವಾ ಹಸಿರು ಬಣ್ಣದ ರಾಖಿ ಶುಭ.
- ವೃಶ್ಚಿಕ ರಾಶಿ (Scorpio): ಆಳವಾದ ಭಾವನೆ ಹೊಂದಿರುವ ಈ ರಾಶಿಯವರಿಗೆ ಗಾಢ ಕೆಂಪು, ಮರೂನ್ ಅಥವಾ ಗಾಢ ಕಂದು ಬಣ್ಣ ಶ್ರೇಷ್ಠ.
- ಧನು ರಾಶಿ (Sagittarius): ಆಶಾವಾದ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ ಹಳದಿ, ಕೇಸರಿ ಅಥವಾ ನೇರಳೆ ರಾಖಿ ಆಯ್ಕೆ ಮಾಡಬಹುದು.
- ಮಕರ ರಾಶಿ (Capricorn): ಜವಾಬ್ದಾರಿ ಮತ್ತು ತಾಳ್ಮೆ ಹೊಂದಿರುವ ಇವರಿಗೆ ಗಾಢ ನೀಲಿ, ಬೂದು ಅಥವಾ ಕಡು ಹಸಿರು ಬಣ್ಣ ಶುಭ ಫಲ ನೀಡುತ್ತದೆ.
- ಕುಂಭ ರಾಶಿ (Aquarius): ಸೃಜನಶೀಲತೆ ಮತ್ತು ಸ್ವತಂತ್ರ ಆಲೋಚನೆಗೆ ಆಕಾಶ ನೀಲಿ, ಎಲೆಕ್ಟ್ರಿಕ್ ನೀಲಿ ಅಥವಾ ನೇರಳೆ ಬಣ್ಣದ ರಾಖಿ ಸೂಕ್ತ.
- ಮೀನ ರಾಶಿ (Pisces): ದಯೆ ಮತ್ತು ಶಾಂತ ಸ್ವಭಾವದ ಈ ರಾಶಿಯವರಿಗೆ ತಿಳಿ ಹಳದಿ, ಲ್ಯಾವೆಂಡರ್ ಅಥವಾ ಸಮುದ್ರ ಹಸಿರು ರಾಖಿ ಉತ್ತಮ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ರಾಖಿ ಆಚರಣೆಯ ನಿಜವಾದ ಆಧ್ಯಾತ್ಮಿಕ ಮಹತ್ವ:
ರಾಶಿಗೆ ಅನುಗುಣವಾಗಿ ಬಣ್ಣವನ್ನು ಆಯ್ಕೆ ಮಾಡುವುದು ಜ್ಯೋತಿಷ್ಯದ ಒಂದು ಭಾಗವಾಗಿದ್ದರೂ, ರಕ್ಷಾ ಬಂಧನದ ನಿಜವಾದ ಸಂದೇಶವೆಂದರೆ ಸಹೋದರ-ಸಹೋದರಿಯರ ನಡುವಿನ ಅಪಾರ ಪ್ರೀತಿ, ಅನ್ಯೋನ್ಯತೆ ಮತ್ತು ರಕ್ಷಣೆಯ ಭರವಸೆ. ರಾಖಿ ಕಟ್ಟುವಾಗ ದೇವರಲ್ಲಿ ಪ್ರಾಮಾಣಿಕವಾಗಿ ಪ್ರಾರ್ಥಿಸಿ, ಸಹೋದರನಿಗೆ ಯಶಸ್ಸು ಹಾಗೂ ಖುಷಿಯನ್ನು ಬಯಸುವುದೇ ಈ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ