AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi 2022: ಅಂಗಾರಕ ಸಂಕಷ್ಟ ಚತುರ್ಥಿ; ಚಂದ್ರೋದಯದ ಸಮಯ, ಪೂಜಾ ವಿಧಾನದ ಕುರಿತ ಮಾಹಿತಿ ಇಲ್ಲಿದೆ

ಈ ಬಾರಿ ಸಂಕಷ್ಟ ಮಂಗಳವಾರ ಬಂದಿರುವುದರಿಂದ ಅಂಗಾರಕ ಸಂಕಷ್ಟಿಯೆಂದು ಕರೆಯಲಾಗುತ್ತದೆ. ಈ ಚತುರ್ಥಿಯನ್ನು ವಿಕಟ ಸಂಕಷ್ಟ ಚತುರ್ಥಿ, ಸಂಕಟ ಹರ ಚತುರ್ಥಿ ಎಂದೂ ಹೇಳಲಾಗುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಈ ವ್ರತವನ್ನು ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನುವುದು ನಂಬಿಕೆ.

Sankashti Chaturthi 2022: ಅಂಗಾರಕ ಸಂಕಷ್ಟ ಚತುರ್ಥಿ; ಚಂದ್ರೋದಯದ ಸಮಯ, ಪೂಜಾ ವಿಧಾನದ ಕುರಿತ ಮಾಹಿತಿ ಇಲ್ಲಿದೆ
ಗಣಪತಿ (ಸಾಂಕೇತಿಕ ಚಿತ್ರ)
TV9 Web
| Edited By: |

Updated on:Apr 19, 2022 | 11:42 AM

Share

ಇಂದು (ಏ.19) ಸಂಕಷ್ಟ ಚತುರ್ಥಿ (Sankashti Chaturthi). ಸಕಲ ಸಂಕಷ್ಟವನ್ನೂ ನಿವಾರಿಸುವ ವಿಘ್ನನಿವಾರಕನನ್ನು ಪೂಜಿಸುವ, ಆರಾಧಿಸುವ ಶುಭ ದಿನ. ಈ ದಿನದಂದು ಉಪವಾಸ ಮಾಡಿ, ಸಂಜೆ ಸೂರ್ಯಾಸ್ತದ ಬಳಿಕ ಗಣಪತಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ಪ್ರತೀ ತಿಂಗಳು ಕೃಷ್ಣ ಪಕ್ಷದ ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಸಂಕಷ್ಟಿಯ ಆಚರಣೆ ಮಾಡಲಾಗುತ್ತದೆ. ಅತ್ಯಂತ ಮಂಗಳಕರವಾದ ಈ ದಿನದಂದು ಸಾಕ್ಷಾತ್ ಶಿವನೇ ಮೊದಲು ಗಣೇಶನನ್ನು ಪೂಜಿಸಿದ ಎಂದು ನಂಬಲಾಗಿದೆ. ಈ ಬಾರಿ ಸಂಕಷ್ಟಿ ಮಂಗಳವಾರ ಬಂದಿರುವುದರಿಂದ ಅಂಗಾರಕ ಸಂಕಷ್ಟಿಯೆಂದು ಕರೆಯಲಾಗುತ್ತದೆ. ಈ ಚತುರ್ಥಿಯನ್ನು ವಿಕಟ ಸಂಕಷ್ಟ ಚತುರ್ಥಿ, ಸಂಕಟ ಹರ ಚತುರ್ಥಿ ಎಂದೂ ಹೇಳಲಾಗುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಈ ವ್ರತವನ್ನು ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನುವುದು ನಂಬಿಕೆ.

ಸಂಕಷ್ಟ ಚತುರ್ಥಿಯ ಸಮಯ, ಚಂದ್ರೋದಯದ ಕುರಿತ ವಿವರ:

ಅಂಗಾರಕ ಸಂಕಷ್ಟ ಚತುರ್ಥಿ: 2022 ರ ಏಪ್ರಿಲ್‌ 19 ರ ಮಂಗಳವಾರ ಸಂಕಷ್ಟ ಚತುರ್ಥಿ ವ್ರತ ಆಚರಿಸಲಾಗುತ್ತದೆ

ಚತುರ್ಥಿ ತಿಥಿ ಆರಂಭ: 2022, ಏಪ್ರಿಲ್‌ 19ರ ಮಂಗಳವಾರ ಸಂಜೆ 4:38 ರಿಂದ

ಚತುರ್ಥಿ ತಿಥಿ ಕೊನೆಗೊಳ್ಳುವ ಸಮಯ: ಏಪ್ರಿಲ್ 20ರ ಬುಧವಾರ ಮಧ್ಯಾಹ್ನ 1.52ಕ್ಕೆ

ಚಂದ್ರೋದಯದ ಸಮಯ: ಏಪ್ರಿಲ್ 19- ರಾತ್ರಿ 9.50ಕ್ಕೆ (ಬೆಂಗಳೂರಿನಲ್ಲಿ 9.16ಕ್ಕೆ ಚಂದ್ರೋದಯ)

ಪೂಜಾ ವಿಧಾನ ಹೀಗಿರಲಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿಗೆ ಮುಖ ಮಾಡಿ ಕುಳಿತು ಪೂಜೆ ಮಾಡಬೇಕು. ಸಂಕಷ್ಟಿಯಂದು ಮಾಡುವ ಪೂಜೆಯಿಂದ ನಮ್ಮೆಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಚತುರ್ಥಿಯಲ್ಲಿ ಸಾಮಾನ್ಯವಾಗಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಉಪವಾಸದೊಂದಿಗೆ ವ್ರತವನ್ನು ಆಚರಿಸಿದರೆ ಶ್ರೇಷ್ಠ.

ಸಂಕಷ್ಟಿಯಂದು ದಿನಪೂರ್ತಿ ಉಪವಾಸ ಆಚರಿಸುವ ಭಕ್ತರು ಹಣ್ಣುಗಳು, ಹಾಲು, ಕಡಲೆಕಾಯಿ ಮೊದಲಾದವುಗಳನ್ನು ಸೇವಿಸಬಹುದು. ಗಣೇಶನ ವಿಗ್ರಹ ಅಥವಾ ಫೋಟೋವನ್ನು ಹೂವು, ಕುಂಕುಮ, ದೂರ್ವೆಯಿಂದ ಅಲಂಕರಿಸಿ ಪೂಜಿಸಿ. ಗಣಪತಿ ಮಂತ್ರಗಳನ್ನು ಪಠಿಸುತ್ತಾ, ವ್ರತದ ಕಥೆಯನ್ನು ಅಥವಾ ಸಂಕಷ್ಟ ಚತುರ್ಥಿಯ ಕಥೆಯನ್ನು ಓದಿ ಸಂಕಷ್ಟಿ ಆಚರಿಸಿ. ಸಂಕಷ್ಟ ಚತುರ್ಥಿಯಂದು ಓಂ ಗಂ ಗಣಪತಯೇ ನಮಃ ಹಾಗೂ ಓಂ ವಕ್ರತುಂಡಾಯಂ ಮಂತ್ರದ ಮೂಲಕ ಪೂಜಿಸಬಹುದು.

ಇದನ್ನೂ ಓದಿ: Chanakya Niti: ಮಕ್ಕಳ ಯಶಸ್ಸನ್ನು ನೀವು ಬಯಸುವುದಾದರೆ ಅವರ ಪಾಲನೆಯಲ್ಲಿ ಈ ವಿಷಯಗಳನ್ನು ನೆನಪಿಡಿ- ಚಾಣಕ್ಯ ನೀತಿ

ಚಾಣಕ್ಯ ನೀತಿ: ನಿಮ್ಮನ್ನು ಶ್ರೇಷ್ಠರಾಗಿಸುತ್ತವೆ ಈ ಕೆಲಸಗಳು; ನಿಮ್ಮ ಕುಟುಂಬಕ್ಕೂ ಇದು ಶ್ರೇಯಸ್ಕರ

Published On - 11:40 am, Tue, 19 April 22

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ