AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶವ ಯಾತ್ರೆಯನ್ನು ನೋಡುವುದು ಶುಭವೋ, ಅಶುಭವೋ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ಮನುಷ್ಯನ ಮರಣದ ನಂತರ ಶವವನ್ನು ನೋಡುವುದನ್ನು ಕೆಲವರು ಅ ಶುಭವೆಂದು ಭಾವಿಸುತ್ತಾರೆ ಹಾಗೂ ಕೆಲವರು ಶುಭವೆಂದು ಭಾವಿಸುತ್ತಾರೆ. ಆದ್ರೆ ಶವ ಯಾತ್ರೆ ನೋಡಿದ್ರೆ ಅನೇಕ ಶುಭ ಫಲಗಳು ಪ್ರಾಪ್ತಿಯಾಗಲಿವೆ ಎಂದು ಹೇಳಲಾಗುತ್ತೆ.

ಶವ ಯಾತ್ರೆಯನ್ನು ನೋಡುವುದು ಶುಭವೋ, ಅಶುಭವೋ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಶವ ಯಾತ್ರೆ
TV9 Web
| Edited By: ಆಯೇಷಾ ಬಾನು|

Updated on: Jul 19, 2022 | 6:45 AM

Share

ಜಗತ್ತಿನಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸಾವಿನಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ. ಜನನದ ಬಳಿಕ ಮರಣ ಇದ್ದೇ ಇದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣದ ನಂತ್ರ ಆತ್ಮ ಪಂಚ ಭೂತಗಳಲ್ಲಿ ಲೀನವಾಗುತ್ತೆ. ಬಳಿಕ ಅದೇ ಆತ್ಮ ಪುನರ್ಜನ್ಮ ಪಡೆಯುತ್ತೆ ಎಂದು ಹೇಳಲಾಗುತ್ತೆ. ಆದ್ರೆ ಮನುಷ್ಯನ ಮರಣದ ನಂತರ ಶವವನ್ನು ನೋಡುವುದನ್ನು ಕೆಲವರು ಅ ಶುಭವೆಂದು ಭಾವಿಸುತ್ತಾರೆ ಹಾಗೂ ಕೆಲವರು ಶುಭವೆಂದು ಭಾವಿಸುತ್ತಾರೆ. ಆದ್ರೆ ಶವ ಯಾತ್ರೆ ನೋಡಿದ್ರೆ ಅನೇಕ ಶುಭ ಫಲಗಳು ಪ್ರಾಪ್ತಿಯಾಗಲಿವೆ ಎಂದು ಹೇಳಲಾಗುತ್ತೆ.

ಆಕಸ್ಮಿಕವಾಗಿ ಶವ ಯಾತ್ರೆ ನೋಡಿದರೆ ಏನು ಮಾಡಬೇಕು?

ನಾವು ಹೊರಗಡೆ ಹೋಗುವಾಗ ಆಕಸ್ಮಿಕವಾಗಿ ನಮ್ಮ ಮುಂದೆ ಶವಯಾತ್ರೆ ಹೋದರೆ, ಅಥವಾ ನಾವು ಹೋಗುವ ದಾರಿಯಲ್ಲಿ ಎಲ್ಲೂ ಮನೆಯ ಮುಂದೆ ಶವ ಇಟ್ಟಿದ್ದರೆ ಸಾಮಾನ್ಯವಾಗಿ ಅದನ್ನು ನೋಡಿದ ವ್ಯಕ್ತಿ ಶವಕ್ಕೆ ಕೈ ಮುಗಿಯುತ್ತಾನೆ. ಶಿವಶಿವ ಎಂದು ಶಿವ ನಾಮ ಜಪಿಸ್ತಾನೆ. ದೇವರನ್ನು ನೆನೆಪಿಸಿಕೊಂಡು ಒಳ್ಳೆಯದಕ್ಕಾಗಿ ಬೇಡುತ್ತಾನೆ. ಇದಕ್ಕೆ ಬಲವಾದ ಕಾರಣವಿದೆ. ಸಾವನ್ನಪ್ಪಿದ ವ್ಯಕ್ತಿ ತನ್ನ ಜೊತೆ ತನ್ನ ಶವಕ್ಕೆ ನಮಸ್ಕರಿಸಿದ ವ್ಯಕ್ತಿಯ ನೋವು, ದುಃಖವನ್ನೆಲ್ಲ ಕೊಂಡೊಯ್ಯುತ್ತಾನಂತೆ. ಶವ ಯಾತ್ರೆ ನೋಡಿದ ವೇಳೆ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು, ಶಿವನ ಧ್ಯಾನ ಮಾಡಿದ್ರೆ ಸಾವನ್ನಪ್ಪಿದ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಸಿಗಲಿದೆಯಂತೆ. ಹೀಗಾಗಿ ಶವ ಯಾತ್ರೆಯನ್ನು ನೋಡುವುದು ಕೆಟ್ಟದಲ್ಲ ಎಂದು ಭಾವಿಸಲಾಗಿದೆ. ದೇವರ ಬಳಿ ಹೋಗುವ ಆತ್ಮವು, ಶವವನ್ನು ನೋಡಿ ಕೈ ಮುಗಿಯುವ ವ್ಯಕ್ತಿಯ ಕಷ್ಟ, ಸಮಸ್ಯೆಗಳನ್ನು ತೆಗೆದುಕೊಂಡು ಹೋಗುತ್ತದಂತೆ.

ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಶವ ಯಾತ್ರೆ ನೋಡುವುದು ಶುಭ ಎಂದು ಪರಿಗಣಿಸಲಾಗಿದೆ. ಶವ ಯಾತ್ರೆ ನೋಡಿದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ. ದುಃಖ ದೂರವಾಗುವುದಲ್ಲದೆ, ಮನಸ್ಸಿನ ಆಸೆ ಪೂರೈಸುತ್ತದೆಯೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಮನುಷ್ಯ ಬದುಕಿದ್ದಾಗ ಕೊಡುವ ಬೆಲೆಯನ್ನೂ ಸತ್ತ ಮೇಲೆ ಮಣ್ಣಾಗುವವರೆಗೂ ಕೊಡಬೇಕು. ಆದ್ರೆ ಸಾಮಾನ್ಯವಾಗಿ ಸತ್ತ ಮೇಲೆ ಆ ಮನುಷ್ಯನನ್ನು ಮೃತ ದೇಹ ಎಂದು ಪರಿಗಣಿಸುತ್ತೇವೆ. ಇದು ಎಂತಹ ವಿಪರ್ಯಾಸ ಅಲ್ವಾ.

Follow Us
ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ಶಾಸಕ ಸ್ಥಾನ ಸಿಗುತ್ತಾ?
ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ಶಾಸಕ ಸ್ಥಾನ ಸಿಗುತ್ತಾ?
ವಿನಯ್ ಕುಲಕರ್ಣಿಗೆ ಜಾಮೀನು: ಸುಪ್ರೀಂ ಮೊರೆ ಹೋಗುತ್ತೇವೆಂದ ಹೋರಾಟಗಾರ
ವಿನಯ್ ಕುಲಕರ್ಣಿಗೆ ಜಾಮೀನು: ಸುಪ್ರೀಂ ಮೊರೆ ಹೋಗುತ್ತೇವೆಂದ ಹೋರಾಟಗಾರ
ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್​​ಎಸ್​​ ಬಳಿ ಬಿಜೆಪಿಗರ ಪ್ರತಿಭಟನೆ
ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್​​ಎಸ್​​ ಬಳಿ ಬಿಜೆಪಿಗರ ಪ್ರತಿಭಟನೆ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ