AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Dev: ನೆನಪಿರಲಿ! ನಿಮ್ಮ ಈ 5 ಅಭ್ಯಾಸಗಳು ಶನಿ ದೇವರನ್ನು ಕೋಪಗೊಳ್ಳುವಂತೆ ಮಾಡುತ್ತದೆ

ಯಾರು ಶನಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೋ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅಂತವರಿಗೆ ಸದಾ ಆಶೀರ್ವಾದ ನೀಡುವ ಮೂಲಕ ಕಾಪಾಡುತ್ತಾನೆ. ಜೊತೆಗೆ ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ದೇವನ ಕೃಪೆಯಿಂದ ಬಡವ ಕೂಡ ರಾಜನಾಗುತ್ತಾನೆ. ಆದರೆ ಶನಿ ದೇವನು ಇಷ್ಟಪಡದ ಕೆಲವು ಅಭ್ಯಾಸಗಳಿವೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಶನಿ ದೇವ ಕೋಪಗೊಳ್ಳುತ್ತಾನೆ. ಆದ್ದರಿಂದ, ಈ ಕೆಲಸಗಳನ್ನು ತಿಳಿದೋ ತಿಳಿಯದೆಯೋ ಮಾಡಬಾರದು. ಅಂತಹ 5 ಅಭ್ಯಾಸಗಳು ಯಾವುದು? ತಿಳಿದುಕೊಳ್ಳಿ.

Shani Dev: ನೆನಪಿರಲಿ! ನಿಮ್ಮ ಈ 5 ಅಭ್ಯಾಸಗಳು ಶನಿ ದೇವರನ್ನು ಕೋಪಗೊಳ್ಳುವಂತೆ ಮಾಡುತ್ತದೆ
ಶನಿ ದೇವಾ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2024 | 10:35 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವರನ್ನು ಒಂಬತ್ತು ಗ್ರಹಗಳಲ್ಲಿ ಅತ್ಯಂತ ಬಲಿಷ್ಠ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆತ ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಕೆಟ್ಟ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೇ ಬಿಡುವುದಿಲ್ಲ . ಅದಕ್ಕಾಗಿಯೇ ಅವನನ್ನು ನ್ಯಾಯ ನೀಡುವ ದೇವರು ಎಂದು ಕರೆಯಲಾಗುತ್ತದೆ. ಆದ್ದರಿಂದ, ಶನಿಯನ್ನು ರಾಹು- ಕೇತುವಿಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗುತ್ತದೆ.

ಒಂಬತ್ತು ಗ್ರಹಗಳಿಗೆ ಹೋಲಿಸಿದರೆ, ಶನಿ ದೇವರು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಕೆಲವು ರಾಶಿಯ ಮೇಲೆ ಶನಿ ದೇವರ ಶುಭ ಮತ್ತು ಅಶುಭ ಪರಿಣಾಮಗಳು ದೀರ್ಘಕಾಲದವರೆಗೆ ಇರುತ್ತದೆ. ಆದರೆ ಶನಿ ದೇವರಿಗೆ ಹೆದರುವ ಅಗತ್ಯವಿಲ್ಲ. ಏಕೆಂದರೆ ಆತ ತಪ್ಪು ಕೆಲಸ ಮಾಡಿದವರನ್ನು ಮಾತ್ರ ಶಿಕ್ಷಿಸುತ್ತಾನೆ. ಯಾರು ಶನಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೋ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅಂತವರಿಗೆ ಸದಾ ಆಶೀರ್ವಾದ ನೀಡುವ ಮೂಲಕ ಕಾಪಾಡುತ್ತಾನೆ. ಜೊತೆಗೆ ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ದೇವನ ಕೃಪೆಯಿಂದ ಬಡವ ಕೂಡ ರಾಜನಾಗುತ್ತಾನೆ. ಶನಿ ದೇವನು ಇಷ್ಟಪಡದ ಕೆಲವು ಅಭ್ಯಾಸಗಳಿವೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಶನಿ ದೇವ ಕೋಪಗೊಳ್ಳುತ್ತಾನೆ. ಆದ್ದರಿಂದ, ಈ ಕೆಲಸಗಳನ್ನು ತಿಳಿದೋ ತಿಳಿಯದೆಯೋ ಮಾಡಬಾರದು. ಅಂತಹ 5 ಅಭ್ಯಾಸಗಳು ಯಾವುದು? ತಿಳಿದುಕೊಳ್ಳಿ.

ಇದನ್ನೂ ಓದಿ: ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್​​ ನಿರ್ಮಾಣ

ಶನಿ ದೇವನಿಗೆ ಇಷ್ಟವಾಗದ 5 ಅಭ್ಯಾಸಗಳಿವು;

ಹಿರಿಯರನ್ನು ಅವಮಾನಿಸುವುದು: ಹಿರಿಯರನ್ನು ಅಥವಾ ಅಸಹಾಯಕರನ್ನು ಅವಮಾನಿಸುವವರನ್ನು ಶನಿ ದೇವ ಶಿಕ್ಷಿಸುತ್ತಾನೆ ಯಾವಾಗಲೂ ಅವರ ಮೇಲೆ ಅವನ ವಕ್ರ ದ್ರಷ್ಠಿ ಇದ್ದೇ ಇರುತ್ತದೆ. ಜೊತೆಗೆ ಇಂತಹ ಕೆಲಸ ಮಾಡುವ ಜನರಿಗೆ ಸಮಾಜದಲ್ಲಿ ಎಂದಿಗೂ ಗೌರವ ಸಿಗುವುದಿಲ್ಲ. ತಮ್ಮ ಜೀವನದುದ್ದಕ್ಕೂ ನೋವನ್ನು ಎದುರಿಸಬೇಕಾಗುತ್ತದೆ.

ಕಾಲನ್ನು ತೂರಿಸಿ ಅಥವಾ ಎಳೆದು ನಡೆಯುವ ಅಭ್ಯಾಸ: ಕೆಲವರು ನಡೆಯುವಾಗ ತಮ್ಮ ಕಾಲುಗಳನ್ನು ನೆಲಕ್ಕೆ ತೂರಿಸಿ ಅಥವಾ ಚಪ್ಪಲಿಗಳನ್ನು ಎಳೆಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸ ಶನಿಗೆ ತುಂಬಾ ಕೋಪ ತರಿಸುವುದರಿಂದ ಈ ರೀತಿ ಮಾಡುವುದನ್ನು ತಕ್ಷಣ ಬಿಡಿ. ಇಲ್ಲದಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುತ್ತದೆ, ಮಾಡುತ್ತಿರುವ ಕೆಲಸವೂ ಹಾಳಾಗುತ್ತದೆ. ಇದಲ್ಲದೆ, ಸಾಲದ ಹೊರೆಯು ಹೆಚ್ಚುತ್ತದೆ.

ಕುಳಿತುಕೊಂಡಲ್ಲಿ ಕಾಲುಗಳನ್ನು ಅಲ್ಲಾಡಿಸುವುದು: ಕೆಲವರು ಕುಳಿತುಕೊಂಡಲ್ಲಿ ಕಾಲುಗಳನ್ನು ಅಲ್ಲಾಡಿಸುತ್ತಲೇ ಇರುತ್ತಾರೆ. ಈ ಅಭ್ಯಾಸ ಶುಭವಲ್ಲ. ಇದು ನಿಮ್ಮ ಕುಟುಂಬದ ಶಾಂತಿಯನ್ನು ಹದಗೆಡಿಸುತ್ತದೆ.

ಸಾಲವನ್ನು ಹಿಂದಿರುಗಿಸದಿರುವುದು: ಅಗತ್ಯವಿದ್ದಾಗ ಯಾರಿಂದಲಾದರೂ ಸಹಾಯ ಪಡೆಯುವುದು ಒಳ್ಳೆಯದು. ಆದರೆ ಸಾಲವನ್ನು ಹಿಂದಿರುಗಿಸದಿರುವುದು ಕೆಟ್ಟ ಅಭ್ಯಾಸ. ಹಣವನ್ನು ಎರವಲು ಪಡೆಯುವ ಮತ್ತು ಉದ್ದೇಶಪೂರ್ವಕವಾಗಿ ಹಣವನ್ನು ಹಿಂದಿರುಗಿಸದ ಜನರು ಶನಿ ನೀಡುವ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಎರವಲು ಪಡೆದ ಹಣವನ್ನು ಆದಷ್ಟು ಬೇಗ ಹಿಂದಿರುಗಿಸಲು ಪ್ರಯತ್ನಿಸಿ.

ಸ್ನಾನಗೃಹ ಮತ್ತು ಅಡುಗೆಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವುದು: ಯಾವಾಗಲೂ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಅಥವಾ ಸ್ನಾನಗೃಹವನ್ನು ಕೊಳಕಾಗಿಡುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಈ ಅಭ್ಯಾಸಗಳಿಂದಾಗಿ ಶನಿ ದೇವ ಕೂಡ ನಿಮ್ಮನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುತ್ತಾನೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್