AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan Somvar 2025: ಶ್ರಾವಣ ಸೋಮವಾರದಂದು ಈ 5 ಕೆಲಸ ಮಾಡಿ; ಯಾವುದೇ ಸಂಶಯವಿಲ್ಲದೇ ಇಷ್ಟಾರ್ಥಗಳು ಈಡೇರುತ್ತವೆ

2025ನೇ ಶ್ರಾವಣ ಮಾಸವು ಜುಲೈ 23 ರಿಂದ ಆಗಸ್ಟ್ 8 ರವರೆಗೆ ಇದೆ. ಪ್ರತಿ ಸೋಮವಾರವನ್ನು ಶ್ರಾವಣ ಸೋಮವಾರವಾಗಿ ಆಚರಿಸಲಾಗುತ್ತದೆ. ಶಿವನ ಪೂಜೆಗೆ ಇದು ಪವಿತ್ರ ದಿನ. ಜಲಾಭಿಷೇಕ, ದೀಪಾರಾಧನೆ, 5 ಧಾನ್ಯಗಳ ನೈವೇದ್ಯ, ಕಲಶ ಪೂಜೆ ಮತ್ತು ಮಂತ್ರ ಪಠಣೆ ಮುಖ್ಯ ವಿಧಿಗಳು. ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

Shravan Somvar 2025: ಶ್ರಾವಣ ಸೋಮವಾರದಂದು ಈ 5 ಕೆಲಸ ಮಾಡಿ; ಯಾವುದೇ ಸಂಶಯವಿಲ್ಲದೇ ಇಷ್ಟಾರ್ಥಗಳು ಈಡೇರುತ್ತವೆ
Shravan Somvar
ಅಕ್ಷತಾ ವರ್ಕಾಡಿ
|

Updated on:Jul 24, 2025 | 10:27 AM

Share

ಈ ವರ್ಷ ಅಂದರೆ 2025 ರ ಶ್ರಾವಣ ಮಾಸ ಜುಲೈ 23 ರಿಂದ ಪ್ರಾರಂಭವಾಗಿ ಆಗಸ್ಟ್ 8 ರಂದು ಕೊನೆಗೊಳ್ಳಲಿದೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಸೋಮವಾರವನ್ನು ಶ್ರಾವಣ ಸೋಮವಾರವೆಂದು ಆಚರಿಸಲಾಗುತ್ತದೆ. ಶ್ರಾವಣ ಸೋಮವಾರವು ಶಿವನ ಆರಾಧನೆಗೆ ಮೀಸಲಾದ ಮಂಗಳಕರ ದಿನವಾಗಿದೆ. ಈ ದಿನದಂದು ಶಿವನಿಗೆ ಕೆಲವೊಂದು ವಸ್ತುಗಳನ್ನು ಅರ್ಪಿಸುವುದು ಅತ್ಯಂತ ಶುಭಕರವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.

ಜಲಾಭಿಷೇಕ:

ಶಿವನನ್ನು ಪೂಜಿಸುವ ಪ್ರಮುಖ ವಿಧಾನವೆಂದರೆ ಜಲಾಭಿಷೇಕ, ಅದು ಇಲ್ಲದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ಶ್ರಾವಣ ಸೋಮವಾರದ ಸಮಯದಲ್ಲಿ, ಶಿವಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕ ಮಾಡಬೇಕು. ನೀರಿನ ಜೊತೆಗೆ, ನೀವು ಗಂಗಾ ಜಲ, ಹಾಲು, ತುಪ್ಪ, ಮೊಸರು, ಜೇನುತುಪ್ಪ ಇತ್ಯಾದಿಗಳನ್ನು ಸೇರಿಸಿ ಅಭಿಷೇಕ ಮಾಡಬಹುದು.

ದೀಪ ಹಚ್ಚಿ:

ಶ್ರಾವಣ ಸೋಮವಾರದಂದು ಸಂಜೆ ಶಿವ ದೇವಾಲಯಕ್ಕೆ ಭೇಟಿ ನೀಡಿ ಶುದ್ಧ ಮನಸ್ಸಿನಿಂದ ದೀಪ ಹಚ್ಚಬೇಕು. ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದರೆ, ಸಂಜೆ ಶಿವಲಿಂಗದ ಬಳಿ ದೀಪ ಹಚ್ಚಲು ಮರೆಯದಿರಿ.

5 ವಿಧದ ಧಾನ್ಯಗಳನ್ನು ಅರ್ಪಿಸಿ:

ಶ್ರಾವಣ ಸೋಮವಾರದಂದು ಶಿವಲಿಂಗದ ಮೇಲೆ ಶಿವಮುತ್ತಿಯನ್ನು ಅರ್ಪಿಸಬೇಕು. ಇದು ಮುಖ್ಯವಾಗಿ ತೊಗರಿ ಬೇಳೆ, ಅಕ್ಕಿ, ಗೋಧಿ, ಎಳ್ಳು ಮತ್ತು ಹೆಸರುಬೇಳೆ ಮುಂತಾದ 5 ವಿಧದ ಧಾನ್ಯಗಳನ್ನು ಒಳಗೊಂಡಿದೆ. ಇದನ್ನು ಅರ್ಪಿಸುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಹಳೆಯದಾದ ದೇವರ ಫೋಟೋಗಳನ್ನು ಅಲ್ಲಲ್ಲಿ ಎಸೆಯಬೇಡಿ ಈ ದೇವಾಲಯಕ್ಕೆ ತಂದುಕೊಡಿ

ಕಲಶ ತುಂಬಿಸಿ:

ಶ್ರಾವಣ ಸೋಮವಾರದಂದು, ಶಿವ ದೇವಾಲಯದಲ್ಲಿರುವ ತಾಮ್ರದ ಕಲಶದಲ್ಲಿ ಗಂಗಾ ಜಲವನ್ನು ತುಂಬಿಸಿ, ಅದಕ್ಕೆ ಅಕ್ಷತೆ, ಬಿಳಿ ಹೂವುಗಳು ಮತ್ತು ಶ್ರೀಗಂಧವನ್ನು ಸೇರಿಸಿ ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಶಿವಲಿಂಗಕ್ಕೆ ಅರ್ಪಿಸಿ.

ಮಂತ್ರಗಳನ್ನು ಪಠಿಸಿ:

ಶ್ರಾವಣ ಸೋಮವಾರದಂದು ಉಪವಾಸ ಮಾಡಿ ಮತ್ತು ಸಾಧ್ಯವಾದಷ್ಟು ಮಂತ್ರಗಳನ್ನು ಪಠಿಸಿ. ಈ ದಿನದಂದು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 24 July 25

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್