AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರ್ಮಿಕ ನಂಬಿಕೆಯ ೧೦೮ ಸಂಖ್ಯೆಯಲ್ಲಿ ಅಡಗಿದ ಸತ್ಯವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

ನೂರಾ ಎಂಟು ಸಂಖ್ಯೆ ಎಲ್ಲರಿಗೂ ಚಿರಪರಿಚಿತ. ದೇವಾಲಯದಲ್ಲಿ ಇದಕ್ಕೆ ದೊಡ್ಡ ಫಲಕವನ್ನು ಕೂಡ ಕಾಣಬಹುದು. ದೇವರಿಗೆ ಅಷ್ಟೋತ್ತರ ಶತನಾಮಾವಳಿಗಳಿಂದ ಅರ್ಚನೆ ಎಂಬುದು ಇರುತ್ತದೆ. ಏಕೆ ಒಂದುನೂರಾ ಎಂಟು? ಯಾಕೆ ಬೇರೆ ಸಂಖ್ಯೆ ಇಲ್ಲವೇ? ಎನ್ನುವುದು ಎಷ್ಟೋ ಜನರಿಗೆ ತಿಳಿಯದೇ ಇರುವುದು.

ಧಾರ್ಮಿಕ ನಂಬಿಕೆಯ ೧೦೮ ಸಂಖ್ಯೆಯಲ್ಲಿ ಅಡಗಿದ ಸತ್ಯವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ
Significance of 108
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 22, 2024 | 6:25 PM

Share

ಭಾರತೀಯರಿಗೆ ವ್ಯಕ್ತಿ, ವಸ್ತು, ನದಿ, ಪರ್ವತ, ಮರ ಇವುಗಳು ಮಾತ್ರ ವಿಶೇಷವಲ್ಲ. ಅಕ್ಷರಗಳೂ ವಿಶೇಷ, ಸಂಖ್ಯೆಗಳೂ ವಿಶೇಷವೇ. ಎಲ್ಲದರಲ್ಲಿಯೂ ಮಹತ್ತ್ವವನ್ನು ಕಾಣುವುದು, ಅದಕ್ಕೆ ಯೋಗ್ಯವಾದ ಚೌಕಟ್ಟನ್ನು ರೂಪಿಸಿಕೊಳ್ಳುವುದು ಅತಿ ಮಹತ್ತ್ವದ್ದು. ಶೂನ್ಯದಿಂದ ಆರಂಭಿಸಿ ಅನಂತದವರೆಗೂ ಪ್ರತಿಯೊಂದು ಸಂಖ್ಯೆಗೂ ತತ್ತ್ವವನ್ನು ಹೇಳುವುದು, ಇಟ್ಟಿರುವುದು ಮತ್ತೆಲ್ಲೂ ಸಿಗದು. ಸಂಖ್ಯೆ ಮೂಲಕ ಜೀವನಕ್ಕೆ ಅರ್ಥವನ್ನು ಕೊಡುವುದೂ ಇಲ್ಲಿನ ಕ್ರಮ. ಶೂನ್ಯ ಪರಮಾತ್ಮ, ಎರಡು ಪ್ರಕೃತಿ ಪುರುಷ, ಮೂರು ತ್ರಿಮೂರ್ತಿ, ನಾಲ್ಕು ವೇದ, ಐದು ಪಂಚಭೂತ, ಆರು ವರ್ಗ, ಏಳು ಲೋಕ, ಎಂಟು ವಸುಗಣ, ಐಶ್ವರ್ಯ, ಒಂಭತ್ತು ದುರ್ಗೆಯರು, ನಾಗರು, ಹೀಗೆ ಸಂಖ್ಯೆಗೆಲ್ಲ ಜೀವನಕ್ಕೆ ಬೇಕಾದ ಸಂಗತಿಗಳೇ ಇವೆ. ಕೆಲವು ಸಂಖ್ಯಾವಿಶೇಷವನ್ನು ನೋಡೋಣ…

ನೂರಾ ಎಂಟು ಸಂಖ್ಯೆ ಎಲ್ಲರಿಗೂ ಚಿರಪರಿಚಿತ. ದೇವಾಲಯದಲ್ಲಿ ಇದಕ್ಕೆ ದೊಡ್ಡ ಫಲಕವನ್ನು ಕೂಡ ಕಾಣಬಹುದು. ದೇವರಿಗೆ ಅಷ್ಟೋತ್ತರ ಶತನಾಮಾವಳಿಗಳಿಂದ ಅರ್ಚನೆ ಎಂಬುದು ಇರುತ್ತದೆ. ಏಕೆ ಒಂದುನೂರಾ ಎಂಟು? ಯಾಕೆ ಬೇರೆ ಸಂಖ್ಯೆ ಇಲ್ಲವೇ? ಎನ್ನುವುದು ಎಷ್ಟೋ ಜನರಿಗೆ ತಿಳಿಯದೇ ಇರುವುದು.

ನೂರಾ ಎಂಟು ಎನ್ನುವ ಸಂಖ್ಯೆ ಅನೇಕ ವಿಚಾರಗಳನ್ನು ತನ್ನೊಳಗೆ ಇಟ್ಟುಕೊಂಡಿದೆ ಎಂಬ ಸತ್ಯ ನಿಮಗೆ ಅಚ್ಚರಿ ಮೂಡಿಸಬಹುದು.

ಏನಿದು ೧೦೮?

ಧಾರ್ಮಿಕ ನಂಬಿಕೆಯಲ್ಲಿ ಇದು ಬಹಳ ಮುಖ್ಯವಾದ ಸಂಖ್ಯೆ. ಇದು ಹೇಗೆ ಆಗುತ್ತದೆ ಎಂದರೆ ಒಂದು ಕ್ರಮ ಹೀಗಿದೆ. ಅಶ್ವಿನೀ ಮೊದಲಾದ ನಕ್ಷತ್ರಗಳು ಇಪ್ಪತ್ತೇಳು. ಒಂದು ನಕ್ಷತ್ರಕ್ಕೆ ೪ ಪಾದಗಳು ಎಂಬುದು ಪ್ರಸಿದ್ಧ. ಇಪ್ಪತ್ತೇಳು ಮತ್ತು ನಾಲ್ಕನ್ನು ಗುಣಿಸಿದಾಗ ಬರುವ ಸಂಖ್ಯೆ ನೂರಾ ಎಂಟು. ನಕ್ಷತ್ರಗಳು ಮನುಷ್ಯನಿಗೆ ಅತಿ ಮುಖ್ಯವಾದುದು. ಎಲ್ಲ ಆಚರಣೆಗಳನ್ನೂ ನಕ್ಷತ್ರದ ಪ್ರಕಾರವಾಗಿಯೇ ನೋಡುವುದು ಪದ್ಧತಿ. ಅನುಕೂಲ ಪ್ರತಿಕೂಲದ ದಿನಗಳನ್ನು ನೋಡುವುದು ನಕ್ಷತ್ರಗಳ ಆಧಾರದ ಮೇಲೆಯೇ. ಹಾಗಾಗಿ ಎಲ್ಲವನ್ನೂ ನೂರಾ ಎಂಟಕ್ಕೆ ಮಾಡಿಕೊಳ್ಳುವುದು.

ಇನ್ನೊಂದು ಕ್ರಮ ಯಾವುದೆಂದರೆ ಅರವತ್ತು ಸಂವತ್ಸರ, ಹನ್ನೆರಡು ರಾಶಿ, ಇಪ್ಪತ್ತೇಳು ನಕ್ಷತ್ರ ಮತ್ತು ಒಂಭತ್ತು ಗ್ರಹಗಳನ್ನು ಕೂಡಿಸಿದಾಗ ಬರುವ ಮೊತ್ತ. ಮನುಷ್ಯನ ಜೀವನವು ಸಂವತ್ಸರಚಕ್ರದಲ್ಲಿ ಸಿಲುಕಿರುತ್ತದೆ, ಗ್ರಹಗಳು ಜನ್ಮಾಂತರದ ಶುಭಾಶುಭಗಳನ್ನು ತಿಳಿಸುತ್ತವೆ, ರಾಶಿಗಳು ವರ್ತಮಾನದಲ್ಲಿ ಇರುವ ಸ್ಥಿತಿಯನ್ನು ಹೇಳುತ್ತವೆ, ನಕ್ಷತ್ರಗಳು ಸ್ವಭಾವವನ್ನೂ ಮಾಡು ಕರ್ಮಕ್ಕೆ ಶುದ್ಧಕಾಲವನ್ನೂ ತಿಳಿತ್ತವೆ. ಈ ನಾಲ್ಕರ ಸಮಾಗಮವೇ ಒಂದುನೂರಾ ಎಂಟು.

ಆದ್ದರಿಂದ ೧೦೮ ನಿತ್ಯ ಜೀವನಕ್ಕೆ ಸಮೀಪವಾದ ಸಂಖ್ಯೆಯಾಗಿದೆ. ಹಾಗಾಗಿ ಧಾರ್ಮಿಕವಾದ ಏನೇ ಕಾರ್ಯವನ್ನು ಮಾಡಿದರೂ ೧೦೮ ಅಥವಾ ಆ ಸಂಖ್ಯೆಯ ಅರ್ಧ, ಕಾಲು ಭಾಗವನ್ನೂ ಸ್ವೀಕರಿಸುವುದು ಕ್ರಮವಾಗಿದೆ.

– ಲೋಹಿತ ಹೆಬ್ಬಾರ್ – 8762924271

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​