AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Simha Sankranthi: ಸಿಂಹ ಸಂಕ್ರಾಂತಿಗೂ ಹೊಸ್ತಿಲ ಪೂಜೆಗೂ ಏನು ಸಂಬಂಧ?

ಸಂಕ್ರಾಂತಿ ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೆಜ್ಜೆ ಇಡುವುದು ಎಂದರ್ಥ. ಒಟ್ಟು ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಅಗುತ್ತವೆ. ಹಾಗಿದ್ದರೂ ಸಿಂಹ ಸಂಕ್ರಾಂತಿಯ ವಿಶೇಷತೆ ಏನು? ಇಲ್ಲಿದೆ ವಿಶೇಷ ಮಾಹಿತಿ.

Simha Sankranthi: ಸಿಂಹ ಸಂಕ್ರಾಂತಿಗೂ ಹೊಸ್ತಿಲ ಪೂಜೆಗೂ ಏನು ಸಂಬಂಧ?
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 07, 2024 | 9:51 PM

Share

ಹಬ್ಬಗಳನ್ನು ಸಾಮಾನ್ಯವಾಗಿ ಆಚರಿಸುವುದು ಚಾಂದ್ರಮಾನದ ಪ್ರಕಾರ. ಚೈತ್ರ ವೈಶಾಖಾದಿ ಮಾಸಗಳ ಆಧಾರದ ಮೇಲೆ ಆಚರಿಸುವುದು. ಚಂದ್ರನ ಗತಿಯನ್ನು ಅನುಸರಿಸಿ ಹಬ್ಬಗಳ ಆಚರಣೆ ಇರಲಿದೆ. ಆದರೆ ಸಂಕ್ರಾಂತಿಗಳು ಅಥವಾ ಸಂಕ್ರಮಣಗಳು ಸೂರ್ಯನ ಆಧಾರದ ಮೇಲೆ ಆಗುವಂಥವಾಗಿವೆ.

ಇದು ಯಾಕೆ ವಿಶೇಷ?

ಸಂಕ್ರಾಂತಿ ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೆಜ್ಜೆ ಇಡುವುದು ಎಂದರ್ಥ. ಒಟ್ಟು ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಅಗುತ್ತವೆ. ಹಾಗಿದ್ದರೂ ಸಿಂಹ ಸಂಕ್ರಾಂತಿಯ ವಿಶೇಷತೆ ಏನು?

ಗ್ರಹ ಮಂಡಲದಲ್ಲಿ ಎಲ್ಲ ಗ್ರಹಗಳಿಗೂ ಎರಡು ರಾಶಿಗಳಿವೆ. ಸೂರ್ಯ ಮತ್ತು ಚಂದ್ರರಿಗೆ ಒಂದೇ ರಾಶಿ. ಸೂರ್ಯನ ಆಧಿಪತ್ಯದ ರಾಶಿ ಸಿಂಹ ರಾಶಿ.

ಸೂರ್ಯನಿಗೇಕೆ ಪ್ರಾಮುಖ್ಯ ಕೊಡುವುದು?

ಆಧುನಿಕರ ಪ್ರಕಾರ ಸೂರ್ಯನು ಒಂದು ನಕ್ಷತ್ರ. ಆದರೆ ಭಾರತೀಯರ ಪ್ರಕಾರ ಸೂರ್ಯ ಗ್ರಹ ಮಾತ್ರವಲ್ಲ ದೇವತೆ ಕೂಡ‌. ಸೂರ್ಯನಿಗೆ ಬೇರೆ ಹೆಸರುಗಳಿವೆ. ಕರ್ಮಸಾಕ್ಷೀ ಜಗಚ್ಚಕ್ಷು ಮುಂತಾದ ಹೆಸರುಗಳು ಇವೆ. ಜ್ಯೋತಿಷ್ಯ ಪ್ರಕಾರ ಸೂರ್ಯ ಗ್ರಹ ನಾಯಕ. ಹಾಗೆಯೇ ಅವನು ಆತ್ಮಕಾರಣ ಎಂಬುದಾಗಿ ಕರಡಯುತ್ತಾರೆ. ಇಂತಹ ಸೂರ್ಯನು ವರ್ಷಕ್ಕೆ ಒಂದೇ ಬಾರಿ ತನ್ನ ಮನೆಗೆ ಪ್ರವೇಶ ಮಾಡುವುದು. ಜಗತ್ತನ್ನು ರಕ್ಷಿಸುವ ಮುನ್ನಡೆಸುವ ಸೂರ್ಯನು ಸ್ವಗೃಹವನ್ನು ಪ್ರವೇಶಿಸುವಾಗ ಮನುಷ್ಯರೂ ಕೂಡ ಸೂರ್ಯನು ತನ್ನ ಮನೆಗೆ ಪ್ರವೇಶಿದಂತೆ ಕಲ್ಪಿಸಿಕೊಳ್ಳುವುದು, ಆರಾಧಿಸಿ ಆನಂದಿಸುವುದು ವಿಶೇಷ.

ಆರೋಗ್ಯಂ ಭಾಸ್ಕರಾದಿಚ್ಛೇತ್ ಎನ್ನುತ್ತಾರೆ ಪ್ರಾಚೀನರು. ಸ್ವರಾಶಿಗೆ ಬರುವ ಸೂರ್ಯನನ್ನು ಆರಾಧಿಸಿ, ಆರೋಗ್ಯವನ್ನು ಕೊಡುವಂತೆ ಬೇಡುವುದು ಉಚಿತ. ಇನ್ನು ಸೂರ್ಯನು ಆತ್ಮಕಾರಕನಾದ ಕಾರಣ, ಆತ್ಮಸ್ಥೈರ್ಯ, ಆತ್ಮಬಲ, ಆತ್ಮವಿಶ್ವಾಸವನ್ನು ಪಡೆದುಕೊಂಡು ಜೀವನದಲ್ಲಿ ಸಂತೋಷದಿಂದ ಇರಲೂ ಅನುಕೂಲಕರವಾಗಿದೆ.

ಪ್ರಪಂಚದ ಇರುವಿಕೆ ಕಾರಣನಾದ ಸೂರ್ಯನಿಗೆ ಕೃತಜ್ಞತೆಯನ್ನು ತೋರಿಸುವುದು, ತಮ್ಮ ಮನೆಗೆ ಸೂರ್ಯನ ಪ್ರವೇಶವಾಗಿ, ಆತನಿಂದ ಆಗುವ ಸಕಲ ಮಂಗಲವೂ ಆಗಲಿ ಎನ್ನುವುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಸೂರ್ಯನೇ ಕಾಣಿಸದ ಹಾಗೆ ವಾತಾವರಣವಿರುವಾಗ ಈ ಹಬ್ಬದ ಆಚರಣೆ ಬಹಳ ವಿಶೇಷ.

ಸೂರ್ಯನ ಪ್ರವೇಶ ಎಂದು?

ಸಿಂಹ ರಾಶಿಯನ್ನು ಸೂರ್ಯನು ಪ್ರವೇಶಿಸುವುದು ಆಗಸ್ಟ್ ೧೬ನೇ ತಾರೀಖಿನಂದು, ರಾತ್ರಿ ೭:೪೫ ಗಂಟೆಗೆ. ಹಾಗಾಗಿ ೧೭ ರಂದು ಬೆಳಗ್ಗೆ ಸಿಂಹ ಸಂಕ್ರಮಣದ ಪೂಜೆ ಮಾಡಬೇಕು‌.

ಏನು ಮಾಡುವುದು?

ಸ್ನಾನ ಮಾಡಿ, ಶುದ್ಧವಸ್ತ್ರ ಧರಿಸಿ, ಹೊಸ್ತಿಲನ್ನು ತೊಳೆದು ರಂಗವಲ್ಲಿಯನ್ನು ಹಾಕಿ, ಬಾಗಿಲನ್ನು ಅಲಂಕರಿಸಿ, ಸೂರ್ಯನಾರಾಯಣ ಆಗಮನದ ನಿರೀಕ್ಷೆಯನ್ನು ಮಾಡಬೇಕು. ಅಂದಿನ ಸೂರ್ಯೋದಯವು ೬:೨೦ ಕ್ಕೆ ಆಗಲಿದೆ. ಈ ಸಮಯಕ್ಕೆ ಸಿದ್ಧರಿರಬೇಕು. ಸೂರ್ಯನಿಗೆ ಪ್ರಿಯವಾದ ಎಕ್ಕೆ ಹೂವಿನಿಂದ ಅಲಂಕಾರ ಪೂಜೆಯನ್ನು ಮಾಡುವುದು, ಗೋಧಿಯ ಪಾಯಸದ ನೈವೇದ್ಯವು ಸೂರ್ಯನಿಗೆ ಪ್ರಿಯವಾದುದಾಗಿದೆ.

-ಲೋಹಿತ ಹೆಬ್ಬಾರ್ – 8762924271

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್