AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!

ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.

ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
ಸಾರ್ವಕಾಲಿಕ ಸರಳ ಚಿಕಿತ್ಸೆ: ಕಾಯಿಲೆಯನ್ನು ಓಡಿಸುವ ಪುರಾತನ ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
TV9 Web
| Edited By: ಸಾಧು ಶ್ರೀನಾಥ್​|

Updated on: Mar 17, 2022 | 6:06 AM

Share

ದಿನ ನಿತ್ಯವೂ ಹಠ ತೊಟ್ಟು ಈ ಕೆಳಗಿನ ಭಾವನೆಗಳಿಗೆ ಅಂಕಿತವಾದರೆ ಮನಸ್ಸು ಪ್ರಸನ್ನವಾಗಿಯೇ ಇರುತ್ತದೆ. ಯಾವುದೇ ಟಾನಿಕ್ಕು, ಮಾತ್ರೆಗಿಂತ ಇದು ಹೆಚ್ಚು ಆರೋಗ್ಯಕಾರಿ. ಸದ್ಭಾವನೆಗಳಿಂದ ಆರೋಗ್ಯಕ್ಕೆ ಎಂದಿಗೂ ಕೆಡಕು ಆಗದು. ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವೋತೋಮುಖ ಏಳಿಗೆ ಸುಲಭ ಸಾಧ್ಯವಾಗಿ ಆಂತರಿಕ ಶಕ್ತಿ, ಚ್ಯೆತನ್ಯ ಹಾಗು ಸ್ಥಿರತೆ ಹೆಚ್ಚುತ್ತದೆ. ತನ್ಮೂಲಕ ಇತರರಲ್ಲೂ ಈ ಹೊಸತನ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಪುಟಿದೇಳುತ್ತದೆ.

  1. ಜೀವಿಗಳಲ್ಲಿ ಅನುಕಂಪ, ದಯೆ, ಸಹಾನುಭೂತಿಗಳನ್ನು ಬೆಳೆಸಿ, ಉಳಿಸಿಕೊಂಡಲ್ಲಿ ಆಂತರಿಕ ಸುಖಸಂತೋಷಗಳು ಹೆಚ್ಚುತ್ತವೆ ಮಾತ್ರವಲ್ಲ. ಎಲ್ಲ ಜೀರ್ಣ ರಸಗಳ ನಿರಾತಂಕ ಉತ್ಪಾದನೆಯಿಂದ ಸಂಬಂಧಿತ ರೋಗರುಜಿನಗಳು ದೂರ ಆಗುತ್ತವೆ.
  2. ಮಾತು ಕಡಿಮೆ, ಜಾಸ್ತಿ ದುಡಿಮೆ ಎಂಬ ತತ್ತ್ವದ ಅನ್ವಯ ಅನವಶ್ಯಕ ಮಾತುಕತೆ, ಕ್ಷುಲ್ಲಕ ವ್ಯವಹಾರಗಳನ್ನೂ ನಿಲ್ಲಿಸಿ ಕಾರ್ಯೋನ್ಮುಖರಾದಲ್ಲಿ ರೋಗಿಯಾಗಿ ನರಳುತ್ತಾ ಆಸ್ಪತ್ರೆಗೆ ಎಡತಾಕುವ ಪ್ರಮೇಯವೇ ಬಾರದು. ಬಂಗಾರದ ಬದುಕು ಕನ್ನಡಿಯೊಳಗಿನ ಗಂಟಿನಂತೆ ಎಂದೆಂದಿಗೂ ಆಗದು.
  3. ಪರೋಪಕಾರ ಗುಣ, ಉದಾರತೆ, ಉದಾತ್ತ ಮನೋಭಾವ ಹಾಗೂ ಸಹಕಾರ ಮನೋಭಾವವನ್ನು ದೇಹದ ಕಣಕಣದಲ್ಲೂ ತುಂಬಿಕೊಂಡು, ಹೃದಯದ ಮಿಡಿತದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ ಕಳ್ಳತನ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರಗಳ ಯಾವ ರೋಗವೂ ಬಂದು ಬಾಧಿಸದು.
  4. ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.
  5. ತಾಳಿದವ ಬಾಳಿಯಾನು ಎಂಬುದನ್ನು ನೆಚ್ಚಿ ಸಹನೆಯನ್ನು ಹೆಚ್ಚಿಸಿಕೊಂಡು ವರ್ತಿಸಿದಲ್ಲಿ ದೂರದೃಷ್ಟಿಯೊಂದಿಗೆ ಅಂತಃದೃಷ್ಟಿಯೂ ವೃದ್ಧಿಸಿ ಬಾಳು ಬೆಳಗುತ್ತಾ ಹೋದೀತು, ಜೀವನ ಜೇನಾದೀತು.
  6. ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂತಹ ವಿಷಮ ಪರಿಸ್ಥಿತಿ, ಸಂದಿಗ್ಧ ಸನ್ನಿವೇಶದಲ್ಲೂ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು. ಎಂತಹ ವಿಷಮ ಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು (ವಾಟ್ಸಪ್​ ಸಂದೇಶ)

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ