AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!

ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.

ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
ಸಾರ್ವಕಾಲಿಕ ಸರಳ ಚಿಕಿತ್ಸೆ: ಕಾಯಿಲೆಯನ್ನು ಓಡಿಸುವ ಪುರಾತನ ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
TV9 Web
| Updated By: ಸಾಧು ಶ್ರೀನಾಥ್​|

Updated on: Mar 17, 2022 | 6:06 AM

Share

ದಿನ ನಿತ್ಯವೂ ಹಠ ತೊಟ್ಟು ಈ ಕೆಳಗಿನ ಭಾವನೆಗಳಿಗೆ ಅಂಕಿತವಾದರೆ ಮನಸ್ಸು ಪ್ರಸನ್ನವಾಗಿಯೇ ಇರುತ್ತದೆ. ಯಾವುದೇ ಟಾನಿಕ್ಕು, ಮಾತ್ರೆಗಿಂತ ಇದು ಹೆಚ್ಚು ಆರೋಗ್ಯಕಾರಿ. ಸದ್ಭಾವನೆಗಳಿಂದ ಆರೋಗ್ಯಕ್ಕೆ ಎಂದಿಗೂ ಕೆಡಕು ಆಗದು. ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವೋತೋಮುಖ ಏಳಿಗೆ ಸುಲಭ ಸಾಧ್ಯವಾಗಿ ಆಂತರಿಕ ಶಕ್ತಿ, ಚ್ಯೆತನ್ಯ ಹಾಗು ಸ್ಥಿರತೆ ಹೆಚ್ಚುತ್ತದೆ. ತನ್ಮೂಲಕ ಇತರರಲ್ಲೂ ಈ ಹೊಸತನ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಪುಟಿದೇಳುತ್ತದೆ.

  1. ಜೀವಿಗಳಲ್ಲಿ ಅನುಕಂಪ, ದಯೆ, ಸಹಾನುಭೂತಿಗಳನ್ನು ಬೆಳೆಸಿ, ಉಳಿಸಿಕೊಂಡಲ್ಲಿ ಆಂತರಿಕ ಸುಖಸಂತೋಷಗಳು ಹೆಚ್ಚುತ್ತವೆ ಮಾತ್ರವಲ್ಲ. ಎಲ್ಲ ಜೀರ್ಣ ರಸಗಳ ನಿರಾತಂಕ ಉತ್ಪಾದನೆಯಿಂದ ಸಂಬಂಧಿತ ರೋಗರುಜಿನಗಳು ದೂರ ಆಗುತ್ತವೆ.
  2. ಮಾತು ಕಡಿಮೆ, ಜಾಸ್ತಿ ದುಡಿಮೆ ಎಂಬ ತತ್ತ್ವದ ಅನ್ವಯ ಅನವಶ್ಯಕ ಮಾತುಕತೆ, ಕ್ಷುಲ್ಲಕ ವ್ಯವಹಾರಗಳನ್ನೂ ನಿಲ್ಲಿಸಿ ಕಾರ್ಯೋನ್ಮುಖರಾದಲ್ಲಿ ರೋಗಿಯಾಗಿ ನರಳುತ್ತಾ ಆಸ್ಪತ್ರೆಗೆ ಎಡತಾಕುವ ಪ್ರಮೇಯವೇ ಬಾರದು. ಬಂಗಾರದ ಬದುಕು ಕನ್ನಡಿಯೊಳಗಿನ ಗಂಟಿನಂತೆ ಎಂದೆಂದಿಗೂ ಆಗದು.
  3. ಪರೋಪಕಾರ ಗುಣ, ಉದಾರತೆ, ಉದಾತ್ತ ಮನೋಭಾವ ಹಾಗೂ ಸಹಕಾರ ಮನೋಭಾವವನ್ನು ದೇಹದ ಕಣಕಣದಲ್ಲೂ ತುಂಬಿಕೊಂಡು, ಹೃದಯದ ಮಿಡಿತದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ ಕಳ್ಳತನ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರಗಳ ಯಾವ ರೋಗವೂ ಬಂದು ಬಾಧಿಸದು.
  4. ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.
  5. ತಾಳಿದವ ಬಾಳಿಯಾನು ಎಂಬುದನ್ನು ನೆಚ್ಚಿ ಸಹನೆಯನ್ನು ಹೆಚ್ಚಿಸಿಕೊಂಡು ವರ್ತಿಸಿದಲ್ಲಿ ದೂರದೃಷ್ಟಿಯೊಂದಿಗೆ ಅಂತಃದೃಷ್ಟಿಯೂ ವೃದ್ಧಿಸಿ ಬಾಳು ಬೆಳಗುತ್ತಾ ಹೋದೀತು, ಜೀವನ ಜೇನಾದೀತು.
  6. ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂತಹ ವಿಷಮ ಪರಿಸ್ಥಿತಿ, ಸಂದಿಗ್ಧ ಸನ್ನಿವೇಶದಲ್ಲೂ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು. ಎಂತಹ ವಿಷಮ ಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು (ವಾಟ್ಸಪ್​ ಸಂದೇಶ)

ಕ್ರೌಡ್ ನಿಭಾಯಿಸಲಾಗದೆ ಮಾಲೀಕನಿಂದ ಅಂಗಡಿ ಕ್ಲೋಸ್!
ಕ್ರೌಡ್ ನಿಭಾಯಿಸಲಾಗದೆ ಮಾಲೀಕನಿಂದ ಅಂಗಡಿ ಕ್ಲೋಸ್!
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್