ಕಾಗೆಗಳಿಗೆ ಪಿಂಡ ಇಡುವುದೇಕೆ? ಈ ಸಂಪ್ರದಾಯಕ್ಕೂ ಶ್ರೀರಾಮನಿಗೂ ಇದೆ ಸಂಬಂಧ!

Pinda Food to Crow: ಆ ಘಟನೆಯ ನಂತರ ಕಾಗೆಗಳಿಗೆ ಆಹಾರ ನೀಡಿದರೆ ಪೂರ್ವಜರು ಸುಖವಾಗಿರುತ್ತಾರೆ ಎಂದು ಶ್ರೀರಾಮ ವರವನ್ನು ನೀಡಿದ. ಅಂದಿನಿಂದ ಪೂರ್ವಜರ ಜೊತೆಗೆ ಕಾಗೆಗಳಿಗೆ ಪಿಂಡ ರೂಪದಲ್ಲಿ ಆಹಾರ ನೀಡುವ ಸಂಪ್ರದಾಯ ಪ್ರಾರಂಭವಾಯಿತು ಎಂಬ ನಂಬಿಕೆಯಿದೆ. ಆದ್ದರಿಂದ ಪಿತೃ ಪಕ್ಷದ ಸಮಯದಲ್ಲಿ ಕಾಗೆಗಳಿಗೆ ಆಹಾರ ನೀಡಲು ವಿಶೇಷ ಒತ್ತು ನೀಡಲಾಗುತ್ತದೆ.

ಕಾಗೆಗಳಿಗೆ ಪಿಂಡ ಇಡುವುದೇಕೆ? ಈ ಸಂಪ್ರದಾಯಕ್ಕೂ ಶ್ರೀರಾಮನಿಗೂ ಇದೆ ಸಂಬಂಧ!
ಕಾಗೆಗಳಿಗೆ ಪಿಂಡ ಇಡುವುದೇಕೆ? ಈ ಸಂಪ್ರದಾಯಕ್ಕೂ ಶ್ರೀರಾಮನಿಗೂ ಏನು ಸಂಬಂಧ?
Follow us
| Updated By: ಸಾಧು ಶ್ರೀನಾಥ್​

Updated on: Jun 01, 2024 | 7:13 AM

ಪಿತೃಪಕ್ಷದ ಸಮಯದಲ್ಲಿ ಪೂರ್ವಜರನ್ನು ಸಮಾಧಾನಪಡಿಸಲು ಮತ್ತು ಹಿರಿಯರ ಆಶೀರ್ವಾದ ಪಡೆಯಲು ಕಾಗೆಗಳಿಗೆ ಪಿಂಡ ರೂಪದಲ್ಲಿ ಆಹಾರ (Pinda Food) ನೀಡುವ ಸಂಪ್ರದಾಯವಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂರ್ವಜರು ಕಾಗೆಗಳಿಗೆ ಆಹಾರ ನೀಡುವ ಮೂಲಕ ತೃಪ್ತರಾಗುತ್ತಾರೆ. ಸಂತೋಷವಾಗುತ್ತದೆ. ರಾಮಚರಿತಮಾನಸದಲ್ಲಿ ಈ ಸಂಪ್ರದಾಯದ ಬಗ್ಗೆ ಒಂದು ಕಥೆಯಿದೆ (Spiritual). ರಾಮಚರಿತಮಾನಸ (Lord Ram) ಮಹಾಕಾವ್ಯದಲ್ಲಿ ಏನು ಹೇಳಿದ್ದಾರೆ ತಿಳಿಯೋಣ.

ದಂತಕಥೆಯ ಪ್ರಕಾರ ಶ್ರೀ ರಾಮಚರಿತ ಮಾನಸ ಕಥೆಯ ಪ್ರಕಾರ, ಒಮ್ಮೆ ರಾಮನು ಸೀತೆಯ ಬಳಿ ಕುಳಿತು ಸೀತಾದೇವಿಯ ತಲೆಗೂದಲನ್ನು ಹೂವುಗಳಿಂದ ಅಲಂಕರಿಸುತ್ತಿದ್ದನು. ಆಗ ಅಲ್ಲಿ ಇಂದ್ರದೇವನ ಮಗ ಜಯಂತ ಇದ್ದ. ರಾಮನು ತನ್ನ ಹೆಂಡತಿಯ ಜಡೆಯಲ್ಲಿ ಹೂವುಗಳನ್ನು ಹಾಕುವ ದೃಶ್ಯವನ್ನು ನೋಡಿ, ಅವನು ನಿಜವಾಗಿಯೂ ವಿಷ್ಣುವಿನ ಅವತಾರವೇ ಎಂದು ಅನುಮಾನಿಸಿದನು. ಇದಲ್ಲದೆ, ಆತ ತನ್ನ ಅನುಮಾನ ಪರಿಹರಿಸಿಕೊಳ್ಳಲು ಬಯಸಿದ. ಶ್ರೀರಾಮನನ್ನು ಪರೀಕ್ಷಿಸುವ ಉದ್ದೇಶದಿಂದ ಜಯಂತ ಕಾಗೆಯ ರೂಪವನ್ನು ತಾಳಿದನು. ಅವನು ತನ್ನ ಚೂಪಾದ ಮೂಗಿನಿಂದ ಸೀತಾದೇವಿಯ ಪಾದಗಳನ್ನು ಗಾಯಗೊಳಿಸಿದನು. ಸೀತಾದೇವಿಯ ಪಾದಗಳಲ್ಲಿ ರಕ್ತ ಸುರಿಯತೊಡಗಿತು.

ಸೀತೆಯ ಕಾಲಿಗೆ ಆದ ಗಾಯವನ್ನು ಕಂಡ ರಾಮನು ಬಹಳ ಕೋಪಗೊಂಡು ಕಾಗೆಗೆ ಪಾಠ ಕಲಿಸಲು ಬಾಣವನ್ನು ಪ್ರಯೋಗಿಸಿದನು. ರಾಮನು ಬಾಣ ಬಿಡುವುದನ್ನು ನೋಡಿ ಜಯಂತನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಮೊದಲು ಬ್ರಹ್ಮಲೋಕಕ್ಕೆ, ನಂತರ ಶಿವಲೋಕಕ್ಕೆ ಓಡಿದನು. ಆದರೆ ಬ್ರಹ್ಮ ಮತ್ತು ಶಿವನ ಹೊರತಾಗಿ ಯಾವ ದೇವತೆಗಳೂ ಜಯಂತನಿಗೆ ಸಹಾಯ ಮಾಡಲಾರರು.

Also Read: Apara Ekadashi 2024 -ಜ್ಯೇಷ್ಠ ಮಾಸದಲ್ಲಿ ಅಪರ, ನಿರ್ಜಲ ಏಕಾದಶಿ 2 ದಿನ: ಯಾರು, ಯಾವಾಗ ಆಚರಿಸಬೇಕು? ಇಲ್ಲಿದೆ ಸ್ಪಷ್ಟ ಮಾಹಿತಿ

ಭಗವಾನ್ ರಾಮನ ಆಶ್ರಯ ಬೇಡಿದ ಜಯಂತನು ಎಲ್ಲೆಡೆ ಹೋಗಿ ಬೇಸರಗೊಂಡನು. ಯಾರೂ ಆತನಿಗೆ ಸಹಾಯ ಮಾಡಲಿಲ್ಲ. ಕೊನೆಗೆ ಸಹಾಯಕ್ಕಾಗಿ ತನ್ನ ತಂದೆ ಭಗವಾನ್ ಇಂದ್ರನ ಬಳಿಗೆ ಹೋದನು. ರಾಮನ ಬಾಣದಿಂದ ನಿನ್ನನ್ನು ರಕ್ಷಿಸಲು ರಾಮನೇ ಸಾಧ್ಯ ಎಂದು ಇಂದ್ರ ದೇವನು ಸಹ ವಾಪಸ್ ಕಳಿಸಿದನು. ಆದ್ದರಿಂದ ಕೊನೆಗೂ ರಾಮನನ್ನು ಆಶ್ರಯಿಸಲು ಮುಂದಾದ. ಇದಾದ ನಂತರ ಜಯಂತು ಓಡಿ ಬಂದು ಶ್ರೀರಾಮನ ಪಾದಕ್ಕೆ ಬಿದ್ದು ಕ್ಷಮೆಗಾಗಿ ಪ್ರಾರ್ಥಿಸತೊಡಗಿದ.

ಕರ್ಮದ ಫಲ: ತಾನು ಹೊಡೆದ ಬಾಣವನ್ನು ಶೂನ್ಯಗೊಳಿಸಲಾಗದು… ಆದರೆ ಅದರಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ತನ್ನನ್ನು ಸಂಧಿಸಿದ ಜಯಂತನಿಗೆ ಶ್ರೀರಾಮನು ಹೇಳಿದನು. ಆಗ ಜಯಂತನ ಒಂದು ಕಣ್ಣಿಗೆ ಬಾಣ ಬಡಿದು ಅದು ಮುರಿದು ಹೋಯಿತು. ಆ ದಿನದಿಂದ ಕಾಗೆಗಳು ಒಂದೇ ಕಣ್ಣಿನಿಂದ ನೋಡುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: June 2024 Festival Calendar – ಜೂನ್ 2024  ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಕಾಗೆಗೆ ವರದಾನ ನೀಡಿದ ರಾಮ: ಈ ಘಟನೆಯ ನಂತರ ಕಾಗೆಗಳಿಗೆ ಆಹಾರ ನೀಡಿದರೆ ಪೂರ್ವಜರು ಸುಖವಾಗಿರುತ್ತಾರೆ ಎಂದು ಶ್ರೀರಾಮ ವರವನ್ನು ನೀಡಿದ. ಅಂದಿನಿಂದ ಪೂರ್ವಜರ ಜೊತೆಗೆ ಕಾಗೆಗಳಿಗೆ ಪಿಂಡ ರೂಪದಲ್ಲಿ ಆಹಾರ ನೀಡುವ ಸಂಪ್ರದಾಯ ಪ್ರಾರಂಭವಾಯಿತು ಎಂಬ ನಂಬಿಕೆಯಿದೆ. ಆದ್ದರಿಂದ ಪಿತೃ ಪಕ್ಷದ ಸಮಯದಲ್ಲಿ ಕಾಗೆಗಳಿಗೆ ಆಹಾರ ನೀಡಲು ವಿಶೇಷ ಒತ್ತು ನೀಡಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ