TTD Dhana Prasadam: ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?

TV9 Digital Desk

| Edited By: ಸಾಧು ಶ್ರೀನಾಥ್​

Updated on: Sep 02, 2021 | 3:09 PM

ಬೆಟ್ಟದಂತಹ ಚಿಲ್ಲರೆ ಸಮಸ್ಯೆಯಿಂದ ಹೊರ ಬರಲು ಟಿಟಿಡಿ ಹೊಸ ಐಡಿಯಾ ಮಾಡಿದೆ. ಅದುವೇ ‘ಶ್ರೀವಾರಿ ಧನ ಪ್ರಸಾದ’ ವಿನಿಯೋಗ. ಅಂದರೆ ಭಕ್ತರು ನೋಟು ಕೊಟ್ಟು ಈ ನಾಣ್ಯದ ಪ್ಯಾಕೆಟ್​ಗಳನ್ನು (coins) ಖರೀದಿಸಬಹುದು. ಒಂದೊಂದು ಪ್ಯಾಕೆಟ್​​​ನಲ್ಲಿ 50, 100 ಮತ್ತು 500 ರೂಪಾಯಿ ಮೌಲ್ಯದ ನಾಣ್ಯಗಳು ಇರುತ್ತವೆ.

TTD Dhana Prasadam: ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?
ತಿಮ್ಮಪ್ಪ ಭಕ್ತರಿಗಾಗಿ ಮತ್ತೊಂದು ಪ್ರಸಾದ ಬಿಡುಗಡೆ, ಏನಿದು ಧನ ಪ್ರಸಾದ ಮಹಾತ್ಮೆ?

ತಿರುಪತಿ ತಿಮ್ಮಪ್ಪನ ವತಿಯಿಂದ ಆರಂಭದಿಂದಲೂ ಭಕ್ತರಿಗಾಗಿ ಭಕ್ತಿ ಪ್ರಧಾನ ಮತ್ತು ಭುಕ್ತಿ ಪ್ರಧಾನ ಲಡ್ಡು ವಿತರಣೆ ನಿರಂತರವಾಗಿ ನಡೆದಿದೆ. ಈಗ ತಿಮ್ಮಪ್ಪನ ಭಕ್ತರಿಗಾಗಿ ತಿರುಮಲ ತಿರುಪತಿ ಆಡಳಿತ ಮಂಡಳಿ (ಟಿಟಿಡಿ) ಮತ್ತೊಂದು ಪ್ರಸಾದ ಬಿಡುಗಡೆ ಮಾಡಿದೆ. ಅದುವೇ ಧನ ಪ್ರಸಾದ! ಏನಿದರ ಮಹಾತ್ಮೆ? ತಿಳಿಯೋಣ ಬನ್ನೀ.

ತಿರುಮಲ ತಿರುಪತಿ ಆಡಳಿತ ಮಂಡಳಿಯು ತಿಮ್ಮಪ್ಪನ ಭಕ್ತರಿಗಾಗಿ ಮತ್ತೊಂದು ವಿನೂತನ ಪ್ರಸಾದವನ್ನು ಬಿಡುಗಡೆ ಮಾಡಿದೆ. ಆದರೆ ಅದು ತಿನ್ನುವುದಲ್ಲ. ‘ಶ್ರೀವಾರಿ ಧನ ಪ್ರಸಾದ’ ಹೆಸರಿನಲ್ಲಿ (Dhana Prasadam) ಚಿಲ್ಲರೆ ನಾಣ್ಯಗಳ ಪ್ಯಾಕೆಟ್ ವಿತರಣೆ​ ಇದಾಗಿದ್ದು, ಅದರಲ್ಲಿ ಅರಿಶಿಣ ಮತ್ತು ಕುಂಕುಮವನ್ನಿಟ್ಟು ಭಕ್ತರಿಗೆ ಬುಧವಾರದಿಂದ ವಿತರಿಸಲು ಆರಂಭಿಸಿದೆ.

ಭಕ್ತರು ತಿಮ್ಮಪ್ಪನ ಹುಂಡಿಯಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸಿರುವ ನಾಣ್ಯಗಳನ್ನು ಮತ್ತೆ ಭಕ್ತರಿಗೆ ‘ಶ್ರೀವಾರಿ ಧನ ಪ್ರಸಾದ’ ಹೆಸರಿನಲ್ಲಿ ವಿತರಿಸಲಾಗುವುದು. ತಿಮ್ಮಪ್ಪನ ಹುಂಡಿಗೆ ಭಕ್ತರು ಕಾಣಿಕೆ ರೂಪದಲ್ಲಿ ಪ್ರತಿ ದಿನ 10-20 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಇಷ್ಟೊಂದು ಮೌಲ್ಯದ ನಾಣ್ಯಗಳನ್ನು ಟಿಟಿಡಿ ಖಾತೆಯಲ್ಲಿ ಬ್ಯಾಂಕ್​​ಗಳು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿವೆ. ಹಾಗಾಗಿ ಟಿಟಿಡಿ (Tirumala Tirupati Devasthanams-TTD) ಬಳಿ ಚಿಲ್ಲರೆ ನಾಣ್ಯಗಳು ಬೆಟ್ಟದಂತೆ ಗುಡ್ಡೆಯಾಗುತ್ತಿದೆ. ಸದ್ಯಕ್ಕೆ 5 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ಟಿಟಿಡಿ ಬಳಿ ಶೇಖರಣೆಯಾಗಿದೆ.

100 ರೂ ನಾಣ್ಯಗಳ ಪ್ಯಾಕೆಟ್ ಬೆಲೆ 100 ರೂಪಾಯಿ:

ಈ ಬೆಟ್ಟದಂತಹ ಸಮಸ್ಯೆಯಿಂದ ಹೊರ ಬರಲು ಟಿಟಿಡಿ ಹೊಸ ಐಡಿಯಾ ಮಾಡಿದೆ. ಅದುವೇ ‘ಶ್ರೀವಾರಿ ಧನ ಪ್ರಸಾದ’ ವಿನಿಯೋಗ. ಅಂದರೆ ಭಕ್ತರು ನೋಟು ಕೊಟ್ಟು ಈ ನಾಣ್ಯದ ಪ್ಯಾಕೆಟ್​ಗಳನ್ನು (coins) ಖರೀದಿಸಬಹುದು. ಒಂದೊಂದು ಪ್ಯಾಕೆಟ್​​​ನಲ್ಲಿ 50, 100 ಮತ್ತು 500 ರೂಪಾಯಿ ಮೌಲ್ಯದ ನಾಣ್ಯಗಳು ಇರುತ್ತವೆ. ತಿಮ್ಮಪ್ಪನ ದೇವಸ್ಥಾನದ ಬಳಿ ಕೌಂಟರ್​​ನಲ್ಲಿ, ದೇವಸ್ಥಾನದ ಅತಿಥಿ ಗೃಹಗಳಲ್ಲಿ ಈ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತದೆ.​​

ಗಮನಾರ್ಹವೆಂದರೆ ಅತಿಥಿ ಗೃಹಗಳಲ್ಲಿ (accommodation) ತಂಗುವ ಭಕ್ತರು ಅಡ್ವಾನ್ಸ್​ ರೂಪದಲ್ಲಿ ಹಣ (advance paid) ಕಟ್ಟಬೇಕಾಗುತ್ತದೆ. ಆ ಅಡ್ವಾನ್ಸ್​ ಹಣವನ್ನು ವಾಪಸ್​ ಮಾಡುವಾಗ ನೋಟು ಕೊಡುವುದಿಲ್ಲ. ಬದಲಿಗೆ, ನಾಣ್ಯದ ಪ್ಯಾಕೆಟ್​ಗಳನ್ನು (refund) ನೀಡಲಾಗುತ್ತದೆ. ಸದ್ಯಕ್ಕೆ ಒಂದು ರೂಪಾಯಿ ನಾಣ್ಯದ ಪ್ಯಾಕೆಟ್​​​ಗಳನ್ನು ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ 2 ರೂ ಮತ್ತು 5 ರೂ ನಾಣ್ಯಗಳನ್ನು ಸಹ ವಿತರಿಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಿರುಪತಿ ಲಡ್ಡುಗಳಿಗೆ ಶತಮಾನಗಳ ಇತಿಹಾಸವಿದೆ, ಪ್ರಸಾದದ ರೂಪದಲ್ಲಿ ಸಿಗುವ ಲಡ್ಡು ದೇವಸ್ಥಾನದ ಅಡುಗೆ ಕೋಣೆಯಲ್ಲಿ ತಯಾರಾಗುತ್ತದೆ

(TTD introduced coins as Dhana Prasadam to lord venkateswara tirupati pilgrims)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada