Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ
Edited By:

Updated on: Apr 09, 2024 | 3:20 PM

ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಶುಕ್ಲ ಪ್ರತಿಪದಾ ದಿನದಂದು ಪ್ರಾರಂಭವಾಗಿದ್ದು ವರ್ಷವಿಡೀ ಶನಿ ಮತ್ತು ಮಂಗಳನ ಪ್ರಭಾವ ಇರುತ್ತದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

ವೈದಿಕ ಕ್ಯಾಲೆಂಡರ್ ಲೆಕ್ಕಾಚಾರದ ಪ್ರಕಾರ, ಹಿಂದೂ ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದಾದಿಂದ ಅಂದರೆ ಎ. 9 ರಂದು ಪ್ರಾರಂಭವಾಗಿದೆ. ಹಾಗಾಗಿ ಎಲ್ಲಾ ಉಪವಾಸ ಮತ್ತು ಹಬ್ಬಗಳನ್ನು ಇದರ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ಬಾರಿ ಹೊಸ ವರ್ಷ ರಾಜಯೋಗದಲ್ಲಿ ಆರಂಭಗೊಂಡಿರುವುದರಿಂದ ಬಹಳ ವಿಶೇಷವಾಗಿದೆ.

ಇದನ್ನೂ ಓದಿ: ಯುಗಾದಿ ಹಬ್ಬದ ದಿನ ಏನು ಮಾಡಬೇಕು, ಮಾಡಬಾರದು?

ಶುಭ ಯೋಗ, ರಾಜಯೋಗ;

ಈ ವರ್ಷ ಆಕಾಶ ಕ್ಷೇತ್ರದಲ್ಲಿ ರಾಜ ಮಂಗಳನಾದರೆ ಅವನ ಮಂತ್ರಿ ಪಟ್ಟ ಶನಿಯಾಗಿದ್ದಾನೆ. ಶುಕ್ರನು ಕಮಾಂಡರ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ ಹಾಗೂ ಈ ಸಂವತ್ಸರನ ವಾಹನ ಗೂಳಿ. ಜೊತೆಗೆ ಈ ಬಾರಿ ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭವಾಗಿದೆ. ಇದಲ್ಲದೆ, ವರ್ಷದ ಮೊದಲ ದಿನದಂದು ರೇವತಿ ಮತ್ತು ಅಶ್ವಿನಿ ನಕ್ಷತ್ರ ಬಂದಿರುವುದು ಕಾಕತಾಳೀಯವಾಗಿದೆ. ಈ ದಿನ, ಚಂದ್ರನು ಗುರುವಿನ ರಾಶಿಯಾದ ಮೀನ ರಾಶಿಯಲ್ಲಿರುತ್ತಾನೆ. ಶನಿ ದೇವರು ತನ್ನದೇ ರಾಶಿಯಾದ ಕುಂಭ ರಾಶಿಯಲ್ಲಿರುತ್ತಾನೆ. ಇವೆಲ್ಲವೂ ಹೊಸ ವರ್ಷದ ಹೊಸತನಕ್ಕೆ ಮುನ್ನುಡಿ ಬರೆದಿದೆ. ಅಲ್ಲದೆ ವರ್ಷಪೂರ್ತಿ ಒಳ್ಳೆಯ ದಿನಗಳಿವೆ ಎಂಬುದನ್ನು ಸೂಚಿಸುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us