Vastu Gift Guide: ವಾಸ್ತು ಪ್ರಕಾರ ಯಾವ ವಸ್ತು ಉಡುಗೊರೆಯಾಗಿ ನೀಡುವುದು ಒಳ್ಳೆಯದು?

ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡುವುದು ನಮ್ಮ ಸಂಪ್ರದಾಯ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ಉಡುಗೊರೆಗಳು ಹೆಚ್ಚು ಶುಭ ಮತ್ತು ಸಮೃದ್ಧಿ ತರುತ್ತವೆ ಎಂಬುದನ್ನು ತಿಳಿಯಿರಿ. ಬೆಳ್ಳಿ, ಆನೆ-ಆಮೆ ಪ್ರತಿಮೆಗಳು, ಮಣ್ಣಿನ ವಿಗ್ರಹಗಳು ಮತ್ತು ಶ್ರೀ ಯಂತ್ರವು ಮನೆಗೆ ಸಕಾರಾತ್ಮಕ ಶಕ್ತಿ, ಸಂಪತ್ತು ಮತ್ತು ಆರ್ಥಿಕ ಸುಧಾರಣೆ ತರುತ್ತವೆ ಎಂದು ನಂಬಲಾಗಿದೆ.

Vastu Gift Guide: ವಾಸ್ತು ಪ್ರಕಾರ ಯಾವ ವಸ್ತು ಉಡುಗೊರೆಯಾಗಿ ನೀಡುವುದು ಒಳ್ಳೆಯದು?
Vastu Gift Guide

Updated on: Nov 22, 2025 | 4:45 PM

ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡಿ ಶುಭ ಕೋರುವುದು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಒಂದು ಸಂಪ್ರದಾಯ. ಆದರೆ ಶುಭ ಸಂದರ್ಭಗಳಲ್ಲಿ ಯಾವ ರೀತಿಯ ಉಡುಗೊರೆಗಳನ್ನು ಕೊಡಬೇಕು ಮತ್ತು ಕೊಡಬಾರದು ಎಂಬುದರ ಬಗ್ಗೆ ವಾಸ್ತು ಶಾಸ್ತ್ರವು ಹೇಳುತ್ತದೆ. ಆದ್ದರಿಂದ ಮುಂದಿನ ಸಲ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳಿಗೆ ಹೋಗುವಾಗ ಯಾವ ರೀತಿಯ ಉಡುಗೊರೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳ್ಳಿ:

ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿಯನ್ನು ಉಡುಗೊರೆಯಾಗಿ ನೀಡುವುದು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುವ ಒಂದು ಮಾರ್ಗವಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ವಿವಾಹಿತ ದಂಪತಿಗಳು ಅಥವಾ ಪ್ರೇಮಿಗಳು ಪರಸ್ಪರ ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ನೀಡಿದರೆ, ಅದು ಅವರ ಪ್ರೇಮ ಸಂಬಂಧಗಳನ್ನು ಸುಧಾರಿಸುತ್ತದೆ.

ಆನೆ ಮತ್ತು ಆಮೆ ಪ್ರತಿಮೆ:

ವಾಸ್ತು ಪ್ರಕಾರ, ಆನೆ ಮತ್ತು ಆಮೆಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡುವುದರಿಂದ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಆನೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. ಆಮೆ ನಕಾರಾತ್ಮಕ ಶಕ್ತಿಯನ್ನು ಓಡಿಸಿ ಮನೆಗೆ ಸಂತೋಷ ಮತ್ತು ಯಶಸ್ಸನ್ನು ತರುತ್ತದೆ.

ಇದನ್ನೂ ಓದಿ: ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಅಪಾಯಕಾರಿಯೇ? ವಿಜ್ಞಾನ ಹೇಳುವುದೇನು?

ಮಣ್ಣಿನ ವಿಗ್ರಹ:

ಮಣ್ಣಿನಿಂದ ಮಾಡಿದ ಯಾವುದೇ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು ತುಂಬಾ ಶುಭ. ಈ ಉಡುಗೊರೆ ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಇದು ಹೆಚ್ಚುತ್ತಿರುವ ಆದಾಯದ ಸಂಕೇತವೆಂದು ಸಹ ಪರಿಗಣಿಸಲಾಗುತ್ತದೆ.

ಶ್ರೀ ಯಂತ್ರ:

ವಾಸ್ತು ಪ್ರಕಾರ, ಜೇಡಿಮಣ್ಣಿನಿಂದ ಮಾಡಿದ ಶ್ರೀ ಯಂತ್ರವನ್ನು ಉಡುಗೊರೆಯಾಗಿ ನೀಡುವುದು ಶುಭ. ಏಕೆಂದರೆ ಅದು ಆರ್ಥಿಕ ಲಾಭ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಅದನ್ನು ನೀಡುವುದು ಅಥವಾ ಸ್ವೀಕರಿಸುವುದು ಶುಭ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Sat, 22 November 25

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us