AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್
ಮೈಕೆಲ್ ವಾನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2021 | 1:36 AM

ಇಂಗ್ಲೆಂಡ್​ನಲ್ಲಿ ನಡೆಯುವ ಕ್ರಿಕೆಟ್​ ಸರಣಿ ಮತ್ತು ಪಂದ್ಯಗಳಿಗೆ ಸಂಬಂಧಿಸಿದಂತೆ ಕ್ವಾರಂಟೀನ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂದು ಇಂಗ್ಲೆಂಡ್​ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಭಾರತದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ಮತ್ತ ಥ್ರೋ-ಇನ್ ಸ್ಪೆಷಲಿಸ್ಟ್ ದಯಾನಂದ್ ಗರಾನಿ ಇಂಗ್ಲೆಂಡ್​ನಲ್ಲಿ ಕೋವಿಡ್-19 ಸೋಂಕಿಗೊಳಗಾಗಿರುವುದು ವರದಿಯಾದ ನಂತರ ವಾನ್ ಅವರಿಂದ ಈ ಕಾಮೆಂಟ್ ಬಂದಿದೆ. ಪಂತ್ ಅವರು ಟೀಮ್ ಇಂಡಿಯಾ ಜೊತೆ ಗುರುವಾರದಂದು ಡುರ್ಹಮ್​ಗೆ ಪ್ರಯಾಣ ಬೆಳಸಲಿಲ್ಲ. ಡುರ್ಹಮ್​ನಲ್ಲಿ ವಿರಾಟ್​​ ಕೊಹ್ಲಿ ನೇತೃತ್ವದ ಭಾರತ ತಂಡ, ಸಂಯುಕ್ತ ಕೌಂಟಿ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

‘ಐಸೋಲೇಷನ್ ನಿಯಮಗಳು ಬದಲಾಗದಿದ್ದರೆ ಈಗ ಜಾರಿಯಲ್ಲಿರುವ 100 ಟೂರ್ನಿ ಮತ್ತು ಭಾರತ ಟೆಸ್ಟ್ ಸರಣಿ ಬಗ್ಗೆ ನನ್ನಲ್ಲಿ ಅತಂಕ ಉಂಟಾಗಿದೆ. @RishabhPant17 ಅವರ ಪ್ರಕರಣ ನಮ್ಮ ಕಣ್ಣ ಮುಂದಿದೆ. ಹಾಗೆಯೇ ಇನ್ನೂ ಸ್ವಲ್ಪ ಮುಂದಕ್ಕೆ ನಮ್ಮ ಯೋಚನೆಯನ್ನು ಹರಿಬಿಟ್ಟರೆ, ಆಶಸ್ ಸರಣಿ ತೀವ್ರ ಪ್ರಭಾವಕ್ಕೊಳಗಾಗಬಹದೆಂದು ನಾನು ಬಾವಿಸುತ್ತೇನೆ| ಕ್ವಾರಂಟೀನ್ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದೆ,’ ಎಂದು ವಾನ್ ಹೇಳಿದ್ದಾರೆ.

ಏತನ್ಮಧ್ಯೆ, ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಪಂತ್ ಅವರಿಗೆ ಸೋಂಕು ತಗುಲಿದ ನಂತರ ಪ್ರತಿಕ್ರಿಯಿಸಿದ್ದು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಭಜ್ಜಿ ತಮ್ಮ ಟ್ವೀಟ್​ನಲ್ಲಿ, ‘ಗೆಟ್ ವೆಲ್ ಸೂನ್ ಚಾಂಪಿಯನ್ @RishabhPant17,’ ಅಂತ ಹೇಳಿದ್ದಾರೆ

ರೈನಾ ಸಹ ತಮ್ಮ ಟ್ವಿಟ್ಟರ್​ನಲ್ಲಿ ಗೆಟ್ ವೆಲ್ ಸೂನ್ ಎಂದು ಹೇಳಿ ತಮ್ಮ ಮತ್ತು ಪಂತ್ ಅವರ ಫೋಟೋ ಹಾಕಿದ್ದಾರೆ.

ಇದನ್ನೂ ಓದಿ: Rishabh Pant: ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ಗೆ ಕೊರೋನಾ: ಭೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ