AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್
ಮೈಕೆಲ್ ವಾನ್
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 16, 2021 | 1:36 AM

Share

ಇಂಗ್ಲೆಂಡ್​ನಲ್ಲಿ ನಡೆಯುವ ಕ್ರಿಕೆಟ್​ ಸರಣಿ ಮತ್ತು ಪಂದ್ಯಗಳಿಗೆ ಸಂಬಂಧಿಸಿದಂತೆ ಕ್ವಾರಂಟೀನ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂದು ಇಂಗ್ಲೆಂಡ್​ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಭಾರತದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ಮತ್ತ ಥ್ರೋ-ಇನ್ ಸ್ಪೆಷಲಿಸ್ಟ್ ದಯಾನಂದ್ ಗರಾನಿ ಇಂಗ್ಲೆಂಡ್​ನಲ್ಲಿ ಕೋವಿಡ್-19 ಸೋಂಕಿಗೊಳಗಾಗಿರುವುದು ವರದಿಯಾದ ನಂತರ ವಾನ್ ಅವರಿಂದ ಈ ಕಾಮೆಂಟ್ ಬಂದಿದೆ. ಪಂತ್ ಅವರು ಟೀಮ್ ಇಂಡಿಯಾ ಜೊತೆ ಗುರುವಾರದಂದು ಡುರ್ಹಮ್​ಗೆ ಪ್ರಯಾಣ ಬೆಳಸಲಿಲ್ಲ. ಡುರ್ಹಮ್​ನಲ್ಲಿ ವಿರಾಟ್​​ ಕೊಹ್ಲಿ ನೇತೃತ್ವದ ಭಾರತ ತಂಡ, ಸಂಯುಕ್ತ ಕೌಂಟಿ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

‘ಐಸೋಲೇಷನ್ ನಿಯಮಗಳು ಬದಲಾಗದಿದ್ದರೆ ಈಗ ಜಾರಿಯಲ್ಲಿರುವ 100 ಟೂರ್ನಿ ಮತ್ತು ಭಾರತ ಟೆಸ್ಟ್ ಸರಣಿ ಬಗ್ಗೆ ನನ್ನಲ್ಲಿ ಅತಂಕ ಉಂಟಾಗಿದೆ. @RishabhPant17 ಅವರ ಪ್ರಕರಣ ನಮ್ಮ ಕಣ್ಣ ಮುಂದಿದೆ. ಹಾಗೆಯೇ ಇನ್ನೂ ಸ್ವಲ್ಪ ಮುಂದಕ್ಕೆ ನಮ್ಮ ಯೋಚನೆಯನ್ನು ಹರಿಬಿಟ್ಟರೆ, ಆಶಸ್ ಸರಣಿ ತೀವ್ರ ಪ್ರಭಾವಕ್ಕೊಳಗಾಗಬಹದೆಂದು ನಾನು ಬಾವಿಸುತ್ತೇನೆ| ಕ್ವಾರಂಟೀನ್ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದೆ,’ ಎಂದು ವಾನ್ ಹೇಳಿದ್ದಾರೆ.

ಏತನ್ಮಧ್ಯೆ, ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಪಂತ್ ಅವರಿಗೆ ಸೋಂಕು ತಗುಲಿದ ನಂತರ ಪ್ರತಿಕ್ರಿಯಿಸಿದ್ದು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಭಜ್ಜಿ ತಮ್ಮ ಟ್ವೀಟ್​ನಲ್ಲಿ, ‘ಗೆಟ್ ವೆಲ್ ಸೂನ್ ಚಾಂಪಿಯನ್ @RishabhPant17,’ ಅಂತ ಹೇಳಿದ್ದಾರೆ

ರೈನಾ ಸಹ ತಮ್ಮ ಟ್ವಿಟ್ಟರ್​ನಲ್ಲಿ ಗೆಟ್ ವೆಲ್ ಸೂನ್ ಎಂದು ಹೇಳಿ ತಮ್ಮ ಮತ್ತು ಪಂತ್ ಅವರ ಫೋಟೋ ಹಾಕಿದ್ದಾರೆ.

ಇದನ್ನೂ ಓದಿ: Rishabh Pant: ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ಗೆ ಕೊರೋನಾ: ಭೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು