AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ

ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗೂ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹೀಗಾಗಿ ಬುಧವಾರವನ್ನು ಭಗವಾನ್ ಗಣೇಶನಿಗೆ ಅರ್ಪಿಸಲಾಗಿದೆ. ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನವೆಂದು ಹೇಳಲು ಒಂದು ದಂತ ಕಥೆ ಇದೆ.

Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ
ಗಣೇಶ
TV9 Web
| Edited By: |

Updated on: Sep 15, 2021 | 7:10 AM

Share

ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಶಿವ-ಪಾರ್ವತಿ ಪುತ್ರ ಗಣೇಶನನ್ನು ಶುಭ ಕಾರ್ಯದ ಆರಂಭದ ಮೊದಲು ಪೂಜಿಸಲಾಗುತ್ತೆ. ಪ್ರಥಮ ಪೂಜಿತ, ವಿಘ್ನಹರ್ತ ಗಣೇಶನನ್ನು ಬುಧವಾರದಂದು ಪೂಜಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ಬಲಪಡಿಸಬಹುದು ಹಾಗೂ ಗಣೇಶನ ಕೃಪೆಗೆ ಪಾತ್ರರಾಗಬಹುದು. ಹಾಗಾದ್ರೆ ಬನ್ನಿ ಬುಧವಾರದಂದು ಗಣೇಶನಿಗೆ ಏಕೆ ಪೂಜಿಸಲಾಗುತ್ತದೆ ಹಾಗೂ ಅದರ ಲಾಭದ ಬಗ್ಗೆ ಇಲ್ಲಿ ತಿಳಿಯಿರಿ.

ಬುಧವಾರದಂದು ಗಣೇಶನನ್ನು ಪೂಜಿಸುವುದೇಕೆ? ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗೂ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹೀಗಾಗಿ ಬುಧವಾರವನ್ನು ಭಗವಾನ್ ಗಣೇಶನಿಗೆ ಅರ್ಪಿಸಲಾಗಿದೆ. ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನವೆಂದು ಹೇಳಲು ಒಂದು ದಂತ ಕಥೆ ಇದೆ. ಅದೇನೆಂದರೆ ಪಾರ್ವತಿ ದೇವಿ ತನ್ನ ಕೈಯಾರೆ ಗಣೇಶನನ್ನು ಸೃಷ್ಟಿಸುವಾಗ ಬುಧ ದೇವರು ಕೂಡ ಕೈಲಾಸ ಪರ್ವತದಲ್ಲೇ ಇರುತ್ತಾನೆ. ಹೀಗಾಗಿ ಗಣೇಶನಿಗೆ ಬುಧವಾರದಂದು ಪೂಜಿಸಲಾಗುತ್ತೆ. ಅಲ್ಲದೆ ಬುಧವಾರವನ್ನು ಸೌಮ್ಯವಾರ ಎಂದೂ ಸಹ ಕರೆಯಲಾಗುತ್ತೆ. ಗಣೇಶನಿಗೆ ಸೌಮ್ಯತೆ ಇಷ್ಟವಾಗುತ್ತೆ. ಹೀಗಾಗಿ ಗಣೇಶನನ್ನು ಬುಧವಾರದಂದು ಪೂಜಿಸುವುದು ಮಂಗಳಕರವೆಂದು ಭಾವಿಸಲಾಗಿದೆ.

ಬುಧವಾರದಂದು ಗಣೇಶನ ಪೂಜೆ ಹೇಗಿರಬೇಕು ಉಪವಾಸ ಇಡಲು ಬಯಸುವವರು ಬುಧವಾರ ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ಉಪವಾಸ ಆಚರಿಸುವ ಸಂಕಲ್ಪ ಮಾಡಬೇಕು. ಬಳಿಕ ಗಣಪತಿ ಯಂತ್ರವನ್ನು ಸ್ಥಾಪಿಸಿ ಗಣೇಶನನ್ನು ಸ್ಮರಿಸಿಕೊಳ್ಳಬೇಕು. ಷೋಡಶೋಪಚಾರ ವಿಧಿಯೊಂದಿಗೆ ಗಣೇಶನನ್ನು ಪೂಜಿಸಬೇಕು. ದಂತಕಥೆಯನ್ನು ಪಠಿಸಿ ಮತ್ತು ಲಡ್ಡು, ಮೋದಕ ಮತ್ತು ಹಲ್ವಾವನ್ನು ಗಣೇಶನಿಗೆ ಅರ್ಪಿಸಬೇಕು. ಕೊನೆಗೆ ಆರತಿ ಮಾಡಿ ನಿಮ್ಮಿಂದ ತಿಳಿದೋ ತಿಳಿಯದೇ ಆದಂತಹ ತಪ್ಪುಗಳಿಗೆ ಕ್ಷಮೆ ಕೇಳಿಕೊಳ್ಳಿ.

ಮತ್ತೊಮ್ಮೆ ಸಂಜೆ ಸ್ನಾನ ಮಾಡಿ ಪೂಜೆ ಮಾಡಿ ಪ್ರಸಾದ ಸೇವಿಸುವ ಮೂಲಕ ಉಪವಾಸವನ್ನು ಮುರಿಯಬೇಕು. ಹಾಗೂ ನಿಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಗತಿಕರಿಗೆ ದಾನ ಮಾಡಬೇಕು. ಆಗಲೇ ಉಪವಾಸ ಸಂಪೂರ್ಣವಾಗುವುದು. ಇನ್ನು ಹಸಿರು ಬಣ್ಣದ ಬಟ್ಟೆ ಮತ್ತು ಹೆಸರು ಬೇಳೆಯನ್ನು ದಾನ ಮಾಡುವುದು ಶ್ರೇಷ್ಠ.

ಬುಧವಾರ ಗಣೇಶನ ಪೂಜೆಯಿಂದಾಗುವ ಪ್ರಯೋಜನಗಳು ಸಂಕಷ್ಟ ಹರ, ವಿಘ್ನಹರ ಗಣಪತಿಯನ್ನು ನಾವು ಆರಂಭಿಸುವ ಪ್ರತಿ ಕೆಲಸದ ಮೊದಲು ಪೂಜಿಸುತ್ತೇವೆ. ಯಾವುದೇ ಹೊಸ ಕೆಲಸವನ್ನು ಆರಂಭಿಸುವುದಕ್ಕೆ ಬುಧವಾರ ಒಳ್ಳೆದಿನ ಎನ್ನಲಾಗುತ್ತೆ. ಹೀಗಾಗಿ ಬುಧವಾರದ ಪೂಜೆಯಿಂದ ಮಂಗಳಕರವಾಗಿ ಎಲ್ಲಾ ಕಾರ್ಯಗಳು ನಡೆಯುತ್ತವೆ ಎನ್ನಲಾಗುತ್ತೆ. ಬುಧವಾರ ಗಣೇಶನನ್ನು ಪೂಜಿಸಿದರೆ ಜಾತಕದಲ್ಲಿ ಬುಧನ ಸ್ಥಾನವನ್ನು ಬಲಪಡಿಸಬಹುದು. ಉಪವಾಸ ಆಚರಿಸುವ ಮತ್ತು ಶ್ರದ್ಧೆ, ಭಕ್ತಿಯಿಂದ ಶುದ್ಧ ಆತ್ಮದಿಂದ ಗಣೇಶನನ್ನು ಪೂಜಿಸುವ ಜನರಿಗೆ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಸಂಪತ್ತನ್ನು ಭಗವಾನ್ ಗಣಪತಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ ಅವರ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಗಣೇಶ ನಿವಾರಿಸಿ ಸುಖಕರ ಜೀವನ ನೀಡುತ್ತಾನೆ. ಗಣೇಶನ ಪೂಜೆಯಿಂದ ಜ್ಞಾನ, ಬುದ್ಧಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?