AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ!

ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು.

ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ!
ಈ ವಸ್ತು ಯಾವುದೇ ಸ್ಥಿತಿಯಲ್ಲಿ ದೊರೆತರೂ ಪಡೆದುಕೊಳ್ಳಿ, ಅದನ್ನು ತೆಗೆದುಕೊಳ್ಳುವಾಗ ಸಮಾಜದ ಬಗ್ಗೆ ಚಿಂತಿಸಬೇಡಿ
TV9 Web
| Edited By: ಸಾಧು ಶ್ರೀನಾಥ್​|

Updated on: May 20, 2022 | 6:06 AM

Share

ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ-ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯ ಹೇಳುವಂತೆ ಯಾರೇ ಆಗಲಿ ತಮ್ಮ ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬಾರದು. ಇಲ್ಲವಾದರೆ ದಂಪತಿಯ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ! ಅವು ಯಾವುವು?

  1. ಸುಳ್ಳು ಹೇಳುವುದು: ಗಂಡ-ಹೆಂಡತಿ ಒಬ್ಬರಿಗೊಬ್ಬರು ಸುಳ್ಳುಗಳನ್ನು ಹೇಳುವುದಕ್ಕೆ ಆರಂಭಿಸಿದರೆ ಅದು ಅವರಿಬ್ಬರ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.. ಅವರ ವೈವಾಹಿಕ ಜೀವನದಲ್ಲಿ ಕಂದಕ ಏರ್ಪಡುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಜೀವನ ಸಂಗಾತಿಯ ನಂಬಿಕೆ ಕಳೆದುಕೊಳ್ಳುತ್ತಾರೆ. ಪತಿ-ಪತ್ನಿ ಮಧ್ಯೆ ಅನುಮಾನದ ಪೆಡಂಭೂತ ಹುಟ್ಟಿಕೊಳ್ಳುತ್ತದೆ. ಅದು ಅವರಿಬ್ಬರ ಸಂಬಂಧದ ಮೇಲೆ ತೀವ್ರತರ ಪರಿಣಾಮ ಬೀರುತ್ತದೆ.
  2. ದಾಂಪತ್ಯದ ಸಂಬಂಧದಲ್ಲಿ ಪರಕೀಯರು: ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದರೆ ಅದು ಹೇಗೆ ಧಗಧಗ ಎಂದು ಹೊತ್ತಿ ಉರಿಯುತ್ತದೋ ಹಾಗೆ ಗಂಡ ಹೆಂಡತಿ ಮಧ್ಯೆ ಮನಸ್ತಾಪ, ಮಿನಿಸು ತಲೆದೋರಿದ್ದಾಗ ಸುಳ್ಳುಗಳ ಸರಮಾಲೆ ಆಹುತಿಗೆ ಹಾಕಿದರೆ ಅದು ಸಂಬಂಧದಲ್ಲಿ ವಿಕೋಪಕ್ಕೆ ಹೋಗುತ್ತದೆ. ದಾಂಪತ್ಯ ಸಮತೋಲನ ಕಳೆದುಕೊಳ್ಳುತ್ತದೆ. ಆಗ ದಾಂಪತ್ಯದ ಸಂಬಂಧದಲ್ಲಿ ಪರಕೀಯರು ಪ್ರವೇಶ ಪಡೆಯುತ್ತಾರೆ.
  3. ರಹಸ್ಯಗಳನ್ನು ಹಂಚಿಕೊಳ್ಳುವುದು: ಗಂಡ ಹೆಂಡತಿ ಮಧ್ಯೆ ಕೆಲವು ಸರಹದ್ದುಗಳು ಇರುತ್ತವೆ. ಆ ಪರಿಧಿ ಮೀರಿದರೆ ಸಂಬಂಧ ಹಳಸುತ್ತದೆ. ಅವರವರ ರಹಸ್ಯಗಳನ್ನು ಅವರವರ ಬಳಿಯೇ ಕಾಯ್ದುಕೊಳ್ಳಬೇಕು. ಗಂಡ ಹೆಂಡತಿ ತಮ್ಮ ದಾಂಪತ್ಯ ರಹಸ್ಯಗಳನ್ನು ಪರಕೀಯರ ಬಳಿ ಹೇಳಿಕೊಳ್ಳಬಾರದು. ಅದು ಬಾಳ ಸಂಗಾತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಇದರಿಂದ ಬಾಳ ಸಂಗಾತಿಯನ್ನು ಬಹಳ ಘಾಸಿಗೊಳಿಸಿದಂತಾಗುತ್ತದೆ.
  4. ಪರಸ್ಪರ ಅವಮಾನಕ್ಕೆ ಗುರಿಯಾಗಿಸುವುದು: ಗಂಡ ಹೆಂಡತಿ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿಕೊಳ್ಳಬಾರದು. ಆ ಸಂದರ್ಭಗಳಲ್ಲಿ ಬಾಳ ಸಂಗಾತಿಯನ್ನು ಕೀಳಾಗಿ ನೋಡಿದರೆ ಅದು ಖಂಡಿತಾ ಕೆಟ್ಟ ಪರಿಣಾಮ ಬೀರುತ್ತದೆ. ಅದು ದಂಪತ್ಯದ ಮೇಲೆ ಪ್ರಭಾವ ಬೀರುತ್ತದೆ. ಬಲಹೀನತೆಗಳನ್ನು ಮುಂದಿಟ್ಟಿಕೊಂಡು ಆಡಿಕೊಳ್ಳತೊಡಗಿದರೆ ಅದು ದಾಂಪತ್ಯಕ್ಕೆ ಕೊಳ್ಳಿಯಿಟ್ಟಂತಾಗುತ್ತದೆ. ಅಲ್ಲಿಂದ ಬಾಂಧವ್ಯ ಕರಗುತ್ತಾ ಬರುತ್ತದೆ. ಹಾಗಾಗಿ ಪರಸ್ಪರ ಗೌರವ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.
  5. ಮೂರನೆಯ ವ್ಯಕ್ತಿಗೆ ಅವಕಾಶ: ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ದಾಂಪತ್ಯದಲ್ಲಿ ನಿಯತ್ತು, ಚಿತ್ತಶುದ್ಧಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ದಂಪತಿ ಮಧ್ಯೆ ಮೂರನೆಯ ವ್ಯಕ್ತಿ ನುಸುಳಿದರೆ ಆ ದಾಂಪತ್ಯ ಬಂಧ ಹೆಚ್ಚು ಕಾಲ ಉಳಿಯಲಾರದು. ಅಷ್ಟೇ ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು.

ತೆಲುಗಿನಲ್ಲಿ ಈ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!