AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂತ್​ಗೆ ಬೌಂಡರಿ ನಿರಾಕರಿಸಿದ ಐಸಿಸಿಯ ಡಿಆರ್​ಎಸ್ ನಿಯಮ ಪುನರ್​ಪರಿಶೀಲಿಸಬೇಕು: ಆಕಾಶ್ ಚೋಪ್ರಾ

40 ನೇ ಓವರ್​ನಲ್ಲಿ ಟಾಮ್ ಕರನ್ ಅವರ ಎಸೆತವೊಂದು ಪಂತ್ ಅವರ ಪ್ಯಾಡ್​ಗೆ ತಾಕಿ ಫೈನ್​ಲೆಗ್ ಬೌಂಡರಿ ಗೆರೆ ದಾಟಿತು. ಅ ಎಸೆತ ವಿಕೆಟ್​ಗೆ ಅಪ್ಪಳಿಸುತ್ತಿತ್ತು ಅಂತ ಭಾವಿಸಿದ ಕರನ್ ಎಲ್​ಬಿ ಗೆ ಮನವಿ ಮಾಡಿದಾಗ ಅವರ ಮನವಿಯನ್ನು ಮೇನ್ ಅಂಪೈರ್ ಪುರಸ್ಕರಿಸಿದರು.

ಪಂತ್​ಗೆ ಬೌಂಡರಿ ನಿರಾಕರಿಸಿದ ಐಸಿಸಿಯ ಡಿಆರ್​ಎಸ್ ನಿಯಮ ಪುನರ್​ಪರಿಶೀಲಿಸಬೇಕು: ಆಕಾಶ್ ಚೋಪ್ರಾ
ರಿಷಭ್ ಪಂತ್
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 26, 2021 | 11:06 PM

Share

ಪುಣೆ: ಡಿಆರ್​ಎಸ್​ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ನಿಯಮಗಳು ಮತ್ತೊಮ್ಮೆ ಚರ್ಚೆಗೊಳಗಾಗಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪುಣೆಯಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್ ರಿಷಬ್ ಪಂತ ಅವರಿಗೆ ಬೌಂಡರಿಯನ್ನು ನಿರಾಕರಿಸಿದ ಡೆಡ್ ಬಾಲ್ ನಿಯಮ ವಿವೇಚನೆರಹಿತವಾದ್ದದ್ದು ಎಂದು ಭಾರತದ ಮಾಜಿ ಆರಂಭ ಆಟಗಾರ ಮತ್ತು ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿದ್ದ್ದಾರೆ. ಇಂಥದ್ದೇ ಸಂದರ್ಭ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್​ ಪಂದ್ಯದಲ್ಲಾದರೆ ಆಗ ಯಾವ ನಿರ್ಣಯ ತೆಗೆದುಕೊಳ್ಳಲಾಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 66 ರನ್ ಗಳಿಸಿ ಔಟಾದ ನಂತರ ರಿಷಭ್ ಪಂತ್ ಬ್ಯಾಟ್​ ಮಾಡಲು ಕ್ರೀಸಿಗೆ ಆಗಮಿಸಿದ್ದರು.

40 ನೇ ಓವರ್​ನಲ್ಲಿ ಟಾಮ್ ಕರನ್ ಅವರ ಎಸೆತವೊಂದು ಪಂತ್ ಅವರ ಪ್ಯಾಡ್​ಗೆ ತಾಕಿ ಫೈನ್​ಲೆಗ್ ಬೌಂಡರಿ ಗೆರೆ ದಾಟಿತು. ಅ ಎಸೆತ ವಿಕೆಟ್​ಗೆ ಅಪ್ಪಳಿಸುತ್ತಿತ್ತು ಅಂತ ಭಾವಿಸಿದ ಕರನ್ ಎಲ್​ಬಿ ಗೆ ಮನವಿ ಮಾಡಿದಾಗ ಅವರ ಮನವಿಯನ್ನು ಮೇನ್ ಅಂಪೈರ್ ಪುರಸ್ಕರಿಸಿದರು. ಆದರೆ, ಅಂಪೈರ್ ನಿರ್ಧಾರವನ್ನು ಪಂತ್ ಪ್ರಶ್ನಿಸಿದ್ದರಿಂದ ಡಿಆರ್​ಎಸ್ ಮೊರೆ ಹೋಗಲಾಯಿತು. ರೀಪ್ಲೇಗಳು ಬಾಲ್ ಪಂತ್ ಅವರ ಬ್ಯಾಟಿಗೆ ತಾಕಿದ್ದನ್ನು ಸ್ಪಷ್ಟಪಡಿಸಿದವು.

ಡಿಆರ್​ಎಸ್​ ನಿಯಮದೊಂದಿಗೆ ವ್ಯವಹರಿಸುವ ಐಸಿಸಿ ಆಡುವ ನಿಯಮ ಕ್ಲಾಸ್ 3.7 ಅಪೆಂಡಿಕ್ಸ್ ಡಿ ಪ್ರಕಾರ, ‘ಆಟಗಾರನೊಬ್ಬನ ಮನವಿಯ ಮೇರೆಗೆ ರಿವ್ಯೂ ತೆಗೆದುಕೊಂಡಾಗ ಔಟ್​ ಎಂದಿದ್ದ ಮೂಲ ನಿರ್ಣಯ ನಾಟ್​ ಔಟ್​ ಆಂತಾದರೆ, ಮೂಲ ನಿರ್ಣಯ ಔಟ್​ ಆಗಿದ್ದರಿಂದ ಆ ಬಾಲ್ ಡೆಡ್ ಆಗಿರುತ್ತದೆ.’

ರಿವ್ಯೂ, ಬ್ಯಾಟಿಂಗ್ ಮಾಡುವ ತಂಡಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸುವುದರಿಂದ ಅದಕ್ಕೆ ಯಾವುದೇ ರನ್ ಸಿಗುವುದಿಲ್ಲ. ಯಾಕೆಂದರೆ, ಒಮ್ಮೆ ಫೀಲ್ಡ್ ಅಂಪೈರ್ ಔಟ್ ಎಂದು ನಿರ್ಣಯ ನೀಡಿದ ನಂತರ ಆ ಬಾಲು ಡೆಡ್ ಎಂದು ಪರಿಗಣಿಸಲಾಗುತ್ತದೆ,’ ಎಂದು ನಿಯಮ ಹೇಳುತ್ತದೆ.

ಸದರಿ ನಿಯಮವನ್ನು ಆಕಾಶ್ ತನ್ನ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಪ್ರಶ್ನಿಸಿದ್ದಾರೆ. ವಿಶ್ವಕಪ್​ ಫೈನಲ್​ನಲ್ಲಿ ಇಂಥ ಘಟನೆ ನಡೆದರೆ ಐಸಿಸಿ ಏನು ಮಾಡಲಿದೆ, ಎಂದು ಅವರು ಕೇಳಿದ್ದಾರೆ.

‘ಅಂಪೈರ್ ಎಸಗಿದ ಘೋರ ಪ್ರಮಾದಕ್ಕೆ ಪಂತ್ 4 ರನ್ ಕಳೆದುಕೊಳ್ಳುವಂತಾಯಿತು. ಇಂಥ ಪ್ರಮಾದಗಳು 101010364 ಸಲ ಆಗಿವೆ. ಒಂದು ಪಕ್ಷ ಇದೇ ಪ್ರಮಾದ ವಿಶ್ವಕಪ್​ ಪೈನಲ್​ ಪಂದ್ಯದ ಕೊನೆ ಎಸೆತದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮಿಗೆ 2 ರನ್ ಬೇಕಿದ್ದಾಗ ಜರುಗಿದರೆ ಹೇಗೆ? ಯೋಚಸಿ, ಯೋಚಿಸಿ,’ ಅಂತ ಆಕಾಶ್ ಟ್ವೀಟ್ ಮಾಡಿದ್ದಾರೆ

ಪವರ್​-ಹಿಟ್ಟಿಂಗ್​ನ ಅಮೋಘ ಪ್ರದರ್ಶನ ನೀಡಿದ ಪಂತ್ ಶುಕ್ರವಾರದ ಪಂದ್ಯದಲ್ಲಿ, ಟಾಮ್ ಕರನ್​ಗೆ ವಿಕೆಟ್​ ಒಪ್ಪಿಸುವ ಮೊದಲು 40 ಎಸೆತಗಳಲ್ಲಿ 77 ರನ್ ಬಾರಿಸಿದರು. ಭಾರತ ನಿಗದಿತ 50 ಓವರ್​ಗಳಲ್ಲಿ 336/6 ರನ್​ಗಳ ಭಾರೀ ಮೊತ್ತ ಪೇರಿಸಲು ಪಂತ್ ಇನ್ನಿಂಗ್ಸ್ ನಿರ್ಣಾಯಕ ಪಾತ್ರ ನಿರ್ವಹಿಸಿತು.

ಇದನ್ನೂ ಓದಿ: India vs England | ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಭಾರತಕ್ಕೆ ಜಟಿಲವಾಗಲಿದೆ: ಆಕಾಶ್ ಚೋಪ್ರಾ

Published On - 11:04 pm, Fri, 26 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ