AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಕಂಡ್ರೆ ಢವಢವ!

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಿಶ್ವದ ಘಟಾನುಘಟಿ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿರೋ ದಿಗ್ಗಜರು ಅಂದ್ರೂ ತಪ್ಪಾಗೋದಿಲ್ಲ. ಆದ್ರೆ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಎಸೆತ ಎದುರಿಸೋಕೆ ಮಾತ್ರ ಬಹಳ ಕಷ್ಟವಾಗುತ್ತದೆ ಅಂತಾ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಆ ಬೌಲರ್ ಯಾರು ಗೊತ್ತಾ? ಅಭಿಮಾನಿ ಹತ್ರ ಇನ್​ಸ್ಟಾಗ್ರಾಮ್ ಲೈವ್​ನಲ್ಲಿ ಅಂಜಿಕೆ ತೋಡಿಕೊಂಡ ಸ್ಮಿತ್​! […]

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಕಂಡ್ರೆ ಢವಢವ!
KUSHAL V
| Edited By: |

Updated on:Jun 18, 2020 | 2:44 PM

Share

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಿಶ್ವದ ಘಟಾನುಘಟಿ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿರೋ ದಿಗ್ಗಜರು ಅಂದ್ರೂ ತಪ್ಪಾಗೋದಿಲ್ಲ. ಆದ್ರೆ ಸ್ಟೀವನ್ ಸ್ಮಿತ್​ಗೆ ಆ ಬೌಲರ್​ನ ಎಸೆತ ಎದುರಿಸೋಕೆ ಮಾತ್ರ ಬಹಳ ಕಷ್ಟವಾಗುತ್ತದೆ ಅಂತಾ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಆ ಬೌಲರ್ ಯಾರು ಗೊತ್ತಾ?

ಅಭಿಮಾನಿ ಹತ್ರ ಇನ್​ಸ್ಟಾಗ್ರಾಮ್ ಲೈವ್​ನಲ್ಲಿ ಅಂಜಿಕೆ ತೋಡಿಕೊಂಡ ಸ್ಮಿತ್​!

ಇನ್​ಸ್ಟಾಗ್ರಾಮ್​ ಲೈವ್​ ಸೆಷನ್​ ವೇಳೆ ಸ್ಮಿತ್​ಗೆ ಅಭಿಮಾನಿಯೊಬ್ಬ ನಿಮಗೆ ಯಾವ ಬೌಲರ್​ನ ಎಸೆತ ಎದುರಿಸೋಕೆ ಕಷ್ಟವಾಗುತ್ತೆ ಅಂತಾ ಪ್ರಶ್ನೆ ಕೇಳಿದ್ದ. ಇದಕ್ಕೆ ಸ್ಮಿತ್ ನನಗೆ ಪಾಕಿಸ್ತಾನ ತಂಡದ ಯುವ ಫಾಸ್ಟ್​ ಬೌಲರ್​ ಮೊಹಮ್ಮದ್ ಅಮೀರ್​ನ ಬೌಲಿಂಗ್​ನ ಎದುರಿಸೋದು ಕೊಂಚ ಕಷ್ಟ ಎಂದು ಹೇಳಿದ್ದಾರೆ. ಮೊಹಮ್ಮದ್ ಅಮೀರ್ ನಾನು ಇಲ್ಲಿಯವರೆಗೆ ಎದುರಿಸಿರುವ ಅತ್ಯಂತ ಪ್ರತಿಭಾವಂತ ಬೌಲರ್ ಎಂದು ಭಾವಿಸುತ್ತೇನೆ ಅಂತಾ ತಮ್ಮ ಫ್ಯಾನ್​ ಹತ್ತಿರ ಸೆಷನ್​ ವೇಳೆ ಹಂಚಿಕೊಂಡರು.

‘ಕಮ್​ಬ್ಯಾಕ್’ ಬಾಯ್ ಮೊಹಮ್ಮದ್ ಅಮೀರ್ ಇಡೀ ಕ್ರಿಕೆಟ್ ಲೋಕವನ್ನೇ ಬೆಚ್ಚಿಬೀಳಿಸಿದ್ದ 2010ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಅಮೀರ್​ಗೆ 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ ಹೇರಲಾಗಿತ್ತು. ಹಾಗಿದ್ರೂ ನಿಷೇಧಾವಧಿ ಮುಗಿದ ಬಳಿಕ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಪಾಕಿಸ್ತಾನ ಪ್ರಪ್ರಥಮ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.

ಇದೀಗ ಖ್ಯಾತ ಬ್ಯಾಟ್ಸ್​ಮನ ಸ್ಮಿತ್​ ಅವರ ಪ್ರಶಂಸೆಯ ಮಾತುಗಳಿಂದ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.

Published On - 6:13 pm, Wed, 17 June 20

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್