AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2012 ಡೆಕ್ಕನ್ ಚಾರ್ಜರ್ಸ್ ವಜಾ ಪ್ರಕರಣ: ಡಿಸಿಎಚ್​ಎಲ್​ಗೆ ಬಿಸಿಸಿಐ ಪರಿಹಾರ ರೂಪದಲ್ಲಿ ರೂ. 4,880 ಕೋಟಿ ನೀಡಬೇಕಿಲ್ಲವೆಂದ ಬಾಂಬೆ ಹೈಕೋರ್ಟ್​

ಆರ್ಬಿಟ್ರೇಟರ್ ಅವರು ಡಿಎಚ್​ಸಿಎಲ್​ಗೆ ಆಗಿರುವ ಹಾನಿಗೆ ರೂ 600 ಕೋಟಿ ಮತ್ತು ಪರಿಹಾರದ ಮೊತ್ತವಾಗಿ ರೂ 4.150 ಕೋಟಿ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದರು. ಅವರ ತೀರ್ಪನ್ನು ಬಿಸಿಸಿಐ ಬಾಂಬೆ ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು.

2012 ಡೆಕ್ಕನ್ ಚಾರ್ಜರ್ಸ್ ವಜಾ ಪ್ರಕರಣ: ಡಿಸಿಎಚ್​ಎಲ್​ಗೆ ಬಿಸಿಸಿಐ ಪರಿಹಾರ ರೂಪದಲ್ಲಿ ರೂ. 4,880 ಕೋಟಿ ನೀಡಬೇಕಿಲ್ಲವೆಂದ ಬಾಂಬೆ ಹೈಕೋರ್ಟ್​
ಡೆಕ್ಕನ್ ಚಾರ್ಜರ್ಸ್ ತಂಡ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jun 16, 2021 | 4:41 PM

Share

ಮುಂಬೈ:  ಹಿಂದೆ ಇಂಡಿಯನ್ ಪ್ರಿಮೀಯರ್ ಲೀಗ್ ಭಾಗವಾಗಿದ್ದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥೆಯ (ಡಿಸಿಎಚ್​ಎಲ್) ಡೆಕ್ಕನ್ ಚಾರ್ಜರ್ಸ್ (ಡಿಸಿ) ಟೀಮನ್ನು ಟೂರ್ನಿಯಿಂದ ವಜಾ ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಸಿಎಚ್​ಎಲ್ ಸಂಸ್ಥೆಗೆ ರೂ 4,800 ಕೋಟಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಧೀಶರೊಬ್ಬರು ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಕೋರ್ಟಿನ ತೀರ್ಪು ಕ್ರಿಕೆಟ್​ ಮಂಡಳಿಗೆ ನಿರಾಳವಾಗಿಸಿರುವುದರಲ್ಲಿ ಸಂದೇಹವಿಲ್ಲ. ಬಿಸಿಸಿಐ, ಡೆಕ್ಕನ್ ಚಾರ್ಜರ್ಸ್ ತಂಡವನ್ನು ಟರ್ಮಿನೇಟ್​ ಮಾಡಿದ್ದು ಕಾನೂನುಬದ್ಧವೇ ಅಥವಾ ಕಾನೂನುಬಾಹಿರವೇ ಎನ್ನುವುದನ್ನು ಖಚಿತಪಡಿಸಲು 2012ರಲ್ಲಿ ನಿಯುಕ್ತಿಗೊಳಿಸಿದ್ದ ನ್ಯಾಯಾಧೀಶರೊಬ್ಬರ ತೀರ್ಪನ್ನು ನ್ಯಾಯಮೂರ್ತಿ ಗೌತಮ್ ಎಸ್ ಪಟೇಲ್ ಅವರ ಏಕ-ಸದಸ್ಯ ಪೀಠವು ಬದಿಗಿರಿಸಿದೆ.

ಡಿಸಿಎಚ್​ಎಲ್​ ಸಂಸ್ಥೆಗೆ ಬಿಸಿಸಿಐ ರೂ 30 ಕೋಟಿ ನೀಡುವುದು ಬಾಕಿಯಿದ್ದು ಕ್ರಿಕೆಟ್ ಮಂಡಳಿ ಆ ಮೊತ್ತವನ್ನು ಬಡ್ಡಿ ಸಮೇತ ನೀಡಬೇಕೆಂದು ತೀರ್ಪನ್ನು ನೀಡುವ ಸಂದರ್ಭದಲ್ಲಿ ಪೀಠವು ಹೇಳಿತು. ಕಳೆದ ವರ್ಷ ಜುಲೈನಲ್ಲಿ ಹೈಕೋರ್ಟ್ ನಿಯುಕ್ತಿಗೊಳಿಸಿದ್ದ ಆರ್ಬಿಟ್ರೇಟರ್, ಐಪಿಎಲ್​ನ ಎಂಟು ಟೀಮುಗಳಲ್ಲಿ ಒಂದಾಗಿದ್ದ ಡೆಕ್ಕನ ಚಾರ್ಜರ್ಸ್ ಪರ ತೀಪನ್ನು ಪ್ರಕಟಿಸಿ ಬಿಸಿಸಿಐ ಟೀಮನ್ನು ವಜಾ ಮಾಡಿದ್ದು ಅಕ್ರಮ ಅಂತ ಹೇಳಿ ರೂ. 4,800 ಪರಿಹಾರ ಮತ್ತು ಅದರ ಮೇಲಿನ ಬಡ್ಡಿಯನ್ನು ನೀಡಬೇಕೆಂದು ಎಂದು ತೀರ್ಪು ನೀಡಿದ್ದರು.

ಆರ್ಬಿಟ್ರೇಟರ್ ಅವರು ಡಿಎಚ್​ಸಿಎಲ್​ಗೆ ಆಗಿರುವ ಹಾನಿಗೆ ರೂ 600 ಕೋಟಿ ಮತ್ತು ಪರಿಹಾರದ ಮೊತ್ತವಾಗಿ ರೂ 4.150 ಕೋಟಿ ನೀಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದರು. ಅವರ ತೀರ್ಪನ್ನು ಬಿಸಿಸಿಐ ಬಾಂಬೆ ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು.

ಬಿಸಿಸಿಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರ್ಬಿಟ್ರೇಷನ್ ನ್ಯಾಯಮಂಡಳಿಯು ವಿಚಾರಣೆಯನ್ನು ಬಿಸಿಸಿಐ ಮತ್ತು ಡಿಸಿಎಚ್​ಎಲ್ ನಡುವೆ ಆಗಿದ್ದ ಕರಾರಿಗೆ ತದ್ವಿರುದ್ಧವಾಗಿ ನಡೆಸಿದೆ, ಟೀಮಿನ ಆಟಗಾರರರಿಗೆ ಮತ್ತು ಸಪೋರ್ಟ್ ಸ್ಟಾಫ್​ ಮಾಡಿದ ಪೇಮೆಂಟ್​ಗಳನ್ನು ಅದು ಸರಿಯಾಗಿ ಮಾಡಿದ್ದರೆ ಬಿಸಿಸಿಐ ಮಾಡಿದ ಟರ್ಮಿನೇಚನ್ ತಪ್ಪೆನಿಸುತಿತ್ತು ಎಂದು ವಾದಿಸಿದರು. ಆದರೆ ಆರ್ಬಿಟ್ರೇಷನ್ ನ್ಯಾಯಮಂಡಳಿಯು ಕರಾರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅದನ್ನು ತಾನೇ ಪುನಃ ಬರೆಯುವ ಹಂತಕ್ಕೆ ಹೋಗಿದ್ದು ಆಟಗಾರರಿಗೆ ಮತ್ತು ಸಪೋರ್ಟ್​ ಸ್ಟಾಫ್​ಗೆ ಬಿಸಿಸಿಐ ಹಣ ಪಾವತಿಸಿಬೇಕಿತ್ತು ಎಂದು ಹೇಳಿದೆ ಅಂತ ಮೆಹ್ತಾ ಅವರು ಹೈಕೋರ್ಟ್​ ಪೀಠಕ್ಕೆ ತಿಳಿಸಿದರು.

ಬಿಸಿಸಿಐ ರೂ 4,150 ಕೋಟಿಗಳನ್ನು ಯಾವ ಕಾರಣಕ್ಕೆ ಡಿಸಿಎಚ್​ಎಲ್​ಗೆ ನೀಡಬೇಕು ಎನ್ನುವುದನ್ನು ಹೇಳದೆ ಆರ್ಬಿಟ್ರೇಷನ್ ನ್ಯಾಯಮಂಡಳಿಯು ಬಹಳ ದೊಡ್ಡ ಪ್ರಮಾದ ಎಸಗಿದೆ. ಆ ಮೊತ್ತವನ್ನು ನಿರ್ಣಯಿಸುವುದರ ಹಿಂದೆ ಯಾವುದೇ ತರ್ಕ ಮತ್ತು ವಿಧಾನವಿಲ್ಲ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.

ಡಿಸಿಎಚ್​ಎಲ್ 2012 ರಲ್ಲಿ ಡೆಕ್ಕನ್ ಚಾರ್ಜರ್ಸ್​ ತಂಡಕ್ಕೆ ಯಶಸ್ವೀಯಾಗಿ ಬಿಡ್ ಮಾಡಿ ಡೆಕ್ಕನ್ ಚಾರ್ಜರ್ಸ್ ಮತ್ತು ಬಿಸಿಸಿಐ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಡಿಸಿಎಚ್​ಎಲ್​ ಮತ್ತು ಕ್ರಿಕೆಟ್ ಮಂಡಳಿ ನಡುವೆ ವ್ಯಾಜ್ಯ ಶುರುವಾಯಿತು. ಆದರೆ ಅದೇ ವರ್ಷ ಬಿಸಿಸಿಐ ಡಿಸಿಯನ್ನು ಟರ್ಮಿನೇಟ್​ ಮಾಡುವುದಕ್ಕೋಸ್ಕರ ಡಿಸಿಎಚ್​ಎಲ್​ಗೆ ಒಂದು ಶೋಕಾಸ್​ ನೋಟಿಸನ್ನು ಜಾರಿಮಾಡಿತು. ನೋಟೀಸಿಗೆ ಪ್ರತಿಕ್ರಿಯಿಸಲು ನೀಡಿದ್ದ 30 ದಿನಗಳ ಕಾಲಾವಧಿ ತೀರುವ ಒಂದು ದಿನ ಮೊದಲೇ ಡಿಸಿಯನ್ನು ಟರ್ಮಿನೇಟ್ ಮಾಡಿದ್ದು ಧೃಡಪಟ್ಟಿತು.

ವ್ಯಾಕುಲಗೊಂಡ ಡಿಸಿಎಚ್​ಎಲ್ ಸೆಪ್ಟಂಬರ್ 2012 ರಲ್ಲಿ ಬಿಸಿಸಿಐ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್​ ಮೊರೆ ಹೊಕ್ಕಿತು. ಪ್ರಕರಣದ ವಿಚಾರಣೆ ನಡೆಸಲು ಹೈಕೋರ್ಟ್ ಸುಪ್ರೀಮ್ ಕೋರ್ಟ್​ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ (ರಿ) ಅವರನ್ನು ಏಕೈಕ ಆರ್ಬಿಟ್ರೇಟರ್​ ಆಗಿ ನೇಮಕ ಮಾಡಿದ ನಂತರ ಅವರು ಕಳೆದ ಜುಲೈನಲ್ಲಿ ಡಿಎಚ್​ಸಿಎಲ್ ಪರ ತೀರ್ಪು ನೀಡಿದ್ದರು.

ಇದನ್ನೂ ಓದಿ: BCCI: ವಾರದೊಳಗೆ ಬಹುಮಾನದ ಹಣ ವಿತರಿಸಲಾಗುವುದು; ಮಾನ ಹರಾಜಾದ ಮೇಲೆ ಬುದ್ಧಿ ಕಲಿತ ಬಿಸಿಸಿಐ

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು