AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಮಿತ ಓವರ್​ ಸರಣಿಗಳಿಂದ ವಾರ್ನರ್ ಹೊರಗೆ, ಕಮ್ಮಿನ್ಸ್​ಗೆ ವಿಶ್ರಾಂತಿ

ಎರಡನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ತೊಡೆಸಂದಿ ಗಾಯಕ್ಕೊಳಗಾಗಿರುವ ಆಸ್ಟ್ರೇಲಿಯಾದ ಆರಂಭ ಆಟಗಾರ ಡೇವಿಡ್ ವಾರ್ನರ್ ಚೇತರಿಸಿಕೊಳ್ಳಲು ಕನಿಷ್ಠ 2-3 ವಾರ ಬೇಕು ಎಂದು ಕ್ರಿಕೆಟ್​ ಆಸ್ಟ್ರೇಲಿಯ ತಿಳಿಸಿದೆ.

ಸೀಮಿತ ಓವರ್​ ಸರಣಿಗಳಿಂದ ವಾರ್ನರ್ ಹೊರಗೆ, ಕಮ್ಮಿನ್ಸ್​ಗೆ ವಿಶ್ರಾಂತಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2020 | 8:32 PM

Share

ಅಸ್ಟ್ರೇಲಿಯ ವಿರುದ್ಧ ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಭಾರತೀಯ ಟೀಮಿಗೆ ಒಂದು ಸಂತೋಷದ ಸಂಗತಿ ಸಿಕ್ಕಿದೆ. ರವಿವಾರದಂದು ಸಿಡ್ನಿಯಲ್ಲಿ ನಡೆದ ಎರಡನೆ ಒಂದು ದಿನದ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ತೊಡೆಸಂದಿ ನೋವಿಗೀಡಾದ ಸ್ಫೋಟಕ ಆರಂಭ ಆಟಗಾರ ಡೇವಿಡ್ ವಾರ್ನರ್ ಬುಧವಾರ ನಡೆಯಬೇಕಿರುವ ಮೂರನೆ ಒಂದು ದಿನದ ಪಂದ್ಯ ಮತ್ತು ಅದಾದ ನಂತರ ನಡೆಯುವ ಮೂರು ಟಿ20 ಪಂದ್ಯಗಳನ್ನು ಆಡಲಾರರು. ಡಿಸೆಂಬರ್ 17ರಂದು ಆರಂಭವಾಗಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಅವರು ಭಾಗಿಯಾಗುವುದು ಕೂಡ ಅನುಮಾನಾಸ್ಪದವಾಗಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯ (ಸಿಎ) ತಿಳಿಸಿದೆ.

ಪ್ಯಾಟ್ ಕಮ್ಮಿನ್ಸ್

ಓದುಗರಿಗೆ ಗೊತ್ತಿರುವಂತೆ ರವಿವಾರದಂದು ಭಾರತ ಬ್ಯಾಟ್ ಮಾಡುತ್ತಿದ್ದಾಗ, ನಾಲ್ಕನೆ ಓವರ್​ನಲ್ಲಿ ಶಿಖರ್ ಧವನ್ ಬಾರಿಸಿದ ಚೆಂಡನ್ನು ಫೀಲ್ಡ್ ಮಾಡುವ ಪ್ರಯತ್ನದಲ್ಲಿ ಡೈವ್ ಮಾಡಿದ ವಾರ್ನರ್ ತೊಡೆಸಂದಿ ನೋವಿಗೊಳಗಾಗಿ ಜೊತೆ ಆಟಗಾರರ ಸಹಾಯದಿಂದ ಮೈದಾನದಿಂದಾಚೆ ಬರಬೇಕಾಯಿತು. ಅವರಿಗಾಗಿರುವ ಗಾಯ ತೀವ್ರ ಸ್ವರೂಪದ್ದೆಂದು ಸಿಎ ಹೇಳಿದ್ದು ಅವರ ಗುಣಮುಖರಾಗಲು 2-3 ವಾರ ಬೇಕಾಗಬಹುದೆಂದು ಗೊತ್ತಾಗಿದೆ. ಈ ಪಂದ್ಯದಲ್ಲಿ ಅವರು 77 ಎಸೆತಗಳಲ್ಲಿ 83 ರನ್ ಬಾರಿಸಿ ನಾಯಕ ಆರನ್ ಫಿಂಚ್​ ಅವರೊಂದಿಗೆ ಮತ್ತೊಂದು ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.

ಏತನ್ಮಧ್ಯೆ, ಟೆಸ್ಟ್ ಪಂದ್ಯಗಳು ಶುರುವಾಗುವ ಮೊದಲು ವಿಶ್ರಾಂತಿ ಪಡೆಯುವುದಕ್ಕೋಸ್ಕರ ವೇಗದ ಬೌಲರ್ ಪ್ಯಾಟ್​ ಕಮ್ಮಿನ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆಯೆಂದು ಸಿಎ ತಿಳಿಸಿದೆ. ಟಿ20 ಪಂದ್ಯಗಳಲ್ಲಿ ಆಡಲಿರುವ ಅತಿಥೇಯರ ತಂಡಕ್ಕೆ ಡಾರ್ಸಿ ಶಾರ್ಟ್​ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಮೂರನೆ ಹಾಗೂ ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಬುಧವಾರದಂದು ಕ್ಯಾನ್​ಬೆರಾದಲ್ಲಿ ನಡೆಯಲಿದೆ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್