AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಯುವತಿಯೊಬ್ಬಳು ಬಾಬರ್ ಆಜಂ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎನ್ನುತ್ತಿದ್ದಾಳೆ

ಭಾರತ ಕ್ರಿಕೆಟ್ ಟೀಮಿನ ನಾಯಕ ವಿರಾಟ್ ಕೊಹ್ಲಿಯನ್ನು ತನ್ನ ರೋಲ್ ಮಾಡೆಲ್ ಎಂದು ಹೇಳುವ ಪಾಕಿಸ್ತಾನ ಕ್ರಿಕೆಟ್ ಟೀಮಿನ ನಾಯಕ ಬಾಬರ್ ಆಜಂ ವೈಯಕ್ತಿಕ ಬದುಕಿನಲ್ಲೂ ಕೊಹ್ಲಿಯನ್ನು ಅನುಕರಿಸಿದ್ದರೆ ಪಾಕಿಸ್ತಾನದ ಯುವತಿಯೊಬ್ಬಳು ಮಾಡುತ್ತಿರುವ ಆಪಾದನೆಗಳಿಗೆ ಈಡಾಗುವ ಪರಿಸ್ಥಿತಿ ಎದುರಿಸುತ್ತಿರಲಿಲ್ಲ.

ಪಾಕಿಸ್ತಾನದ ಯುವತಿಯೊಬ್ಬಳು ಬಾಬರ್ ಆಜಂ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎನ್ನುತ್ತಿದ್ದಾಳೆ
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 30, 2020 | 7:43 PM

Share

ಬಾಬರ್ ಆಜಂ

ವಿಶ್ವದ ಅಗ್ರಮಾನ್ಯ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಪಾಕಿಸ್ತಾನ ಕ್ರಿಕೆಟ್​ ಟೀಮಿನ ನಾಯಕ ಬಾಬರ್ ಆಜಂ ಭಾರಿ ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ಪಾಕಿಸ್ತಾನದ ಯುವತಿಯೊಬ್ಬಳು ಆತನಿಂದ ತನಗೆ ಮೋಸವಾಗಿದೆ, ತನ್ನನ್ನು 10 ವರ್ಷಗಳ ಕಾಲ, ಮಾನಸಿಕವಾಗಿ, ಲೈಂಗಿಕವಾಗಿ ಶೋಷಿಸಿ, ಗರ್ಭಿಣಿಯಾಗಿಸಿ ಕೈಬಿಟ್ಟಿದ್ದಾನೆ ಎಂದು ಗಂಭೀರವಾದ ಆರೋಪಗಳನ್ನು ಮಾಡಿದ್ದಾಳೆ.

ರವಿವಾರದಂದು 24ನ್ಯೂಸ್ ಹೆಚ್​ಡಿ ಹೆಸರಿನ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೆಸರು ಹೇಳಿಕೊಳ್ಳಲಿಚ್ಛಿಸದ ಲಾಹೋರಿನ ಈ ಯುವತಿ, ‘‘ನನ್ನ ಬದುಕನ್ನು ನರಕವಾಗಿಸಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಪಾಕಿಸ್ತಾನ ಕ್ರಿಕೆಟ್​ ಟೀಮಿನ ಕ್ಯಾಪ್ಟನ್ ಬಾಬರ್ ಆಜಂ. ಕ್ರಿಕೆಟ್​ ಜಗತ್ತಿಗೆ ಅವನು ಗೊತ್ತಾಗುವ ಮೊದಲಿನಿಂದಲೂ ನಾವಿಬ್ಬರು ಪರಿಚಿತರು. ಆದರೆ ಅವನು ನನಗೆ ಮೋಸ ಮಾಡುತ್ತಾನೆ ಅಂತ ನಾನು ಅಂದುಕೊಂಡಿರಲಿಲ್ಲ,’’ ಎಂದು ಅನಾಮಧೇಯ ಯುವತಿ ಹೇಳಿದ್ದಾಳೆ.

‘‘ನಾವಿಬ್ಬರೂ ಶಾಲಾ ದಿಗಳಿಂದಲೇ ಸ್ನೇಹಿತರು ಮತ್ತು ಒಂದೇ ಬಡಾವಣೆಯಲ್ಲಿ ಬೆಳೆದವರು. 2010ರಲ್ಲೇ ಅವನು ನನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಾಗ ನಾನು ಸಂತೋಷದಿಂದ ಒಪ್ಪಿಕೊಂಡೆ. ಸಮಯ ಕಳೆದಂತೆ ನಮ್ಮ ನಡುವೆ ಅನ್ಯೋನ್ಯತೆ ಬೆಳೆಯಿತು ಮತ್ತು ನಾವು ಮದುವೆಯಾಗುವ ಯೋಚನೆಯನ್ನು ಮಾಡಿದೆವು. ಆದರೆ ನಮ್ಮಿಬ್ಬರ ಕುಟಂಬಗಳು ಮದುವೆಯನ್ನು ವಿರೋಧಿಸಿದವು. ಹಾಗಾಗಿ ನಾವು ಕೋರ್ಟ್​ನಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದೆವು. 2011ರಲ್ಲಿ ನಾನು ಮನೆಬಿಟ್ಟು ಬರುವಂತೆ ಪುಸಲಾಯಿಸಿ ಅದಕ್ಕೆ ಸಹಾಯವನ್ನೂ ಬಾಬರ್ ಮಾಡಿದ. ಅಲ್ಲಿಂದಾಚೆ ಅವನು ನನ್ನನ್ನು ಬಾಡಿಗೆ ಮನೆಗಳಲ್ಲಿರಿಸಿದ. ನಾನು ಮದುವೆಗೆ ಒತ್ತಾಯಿಸಿದಾಗಲೆಲ್ಲ ಯಾವುದಾದರೂ ನೆಪ ಹೇಳಿ ಅದನ್ನು ಮುಂದೂಡುತ್ತಿದ್ದ,’’ ಅಂತ ಆ ಯುವತಿ ಹೇಳಿದ್ದಾಳೆ.

ಆ ಬಾಡಿಗೆ ಮನೆಗಳಲ್ಲೇ ಆಜಂ ತನ್ನನ್ನು ದೈಹಿಕವಾಗಿ ಹಿಂಸಿಸಿದ ಮತ್ತು ಲೈಂಗಿಕವಾಗಿಯೂ ಬಳಸಿಕೊಂಡ ಎಂದು ಆಕೆ ಗಂಭೀರವಾದ ಆಪಾದನೆ ಮಾಡಿದ್ದಾಳೆ.

ಮಾಧ್ಯಮದವರೊಂದಿಗೆ ಮಾತಾಡುತ್ತಿರುವ ಯುವತಿ

‘‘ಮದುವೆಯಾಗುವ ಭರವಸೆ ನೀಡಿ ಆಜಂ ನನ್ನನ್ನು ಲೈಂಗಿಕವಾಗಿ ಶೋಷಿಸಲಾರಂಭಿಸಿದ, ನಾನು ಮದುವೆ ಮಾತೆತ್ತಿದಾಗ ದೈಹಿಕ ಹಿಂಸೆ ನೀಡಿದ ಮತ್ತು ಬೆದರಿಕೆಗಳನ್ನೂ ಒಡ್ಡಿದ. ನಾನು ಗರ್ಭಿಣಿಯಾದ ವಿಷಯ ಗೊತ್ತಾದ ಮೇಲೆ ಅವನು ನನಗೆ ಹಿಂಸಿಸುವುದನ್ನು ಹೆಚ್ಚಿಸಿದ,’’ ಎಂದು ಆಕೆ ಹೇಳಿದ್ದಾಳೆ.

ಈಗ ಪಾಕಿಸ್ತಾನ ಟೀಮಿನೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಬರ್ ಆಜಂ ಈ ಅನಾಮಧೇಯ ಯುವತಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಹಾಗೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ (ಪಿಸಿಬಿ) ಯುವತಿಯ ಟಿವಿ ಸಂರ್ದಶನವನ್ನು ಕಡೆಗಣಿಸಿದೆ.

Published On - 5:40 pm, Mon, 30 November 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​