‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ

Urvashi Rautela: ಆರ್‌ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಅಲ್ಲ. ಬದಲಿಗೆ ನನ್ನ ಸಹ ನಟ ರಾಮ್ ಪೋತಿನೇನಿ ಎಂದರ್ಥ. ಅಲ್ಲದೆ ರಿಷಬ್ ಪಂತ್ ಅವರನ್ನು ಆರ್‌ಪಿ ಎಂದೂ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಊರ್ವಶಿ ಹೇಳಿಕೊಂಡಿದ್ದಾರೆ.

‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
urvashi rautela, rishabh pant
Follow us
| Updated By: ಪೃಥ್ವಿಶಂಕರ

Updated on:Dec 03, 2022 | 6:07 PM

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Rishabh Pant and actress Urvashi Rautela) ನಡುವಿನ ವಿವಾದ ಇಷ್ಟಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಹಳ ದಿನಗಳಿಂದ ನಡೆಯುತ್ತಿರುವ ಈ ಇಬ್ಬರ ಟಾಕ್ ವಾರ್​ಗೆ ಹೊಸ ಆಯಾಮ ಸಿಕ್ಕಿದೆ. ವಾಸ್ತವವಾಗಿ ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನಟಿ ರೌಟೇಲಾ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ ತನಗಾಗಿ ಕಾಯುತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು. ಈ ಸಂದರ್ಶನವನ್ನು ನೋಡಿದ ನೆಟ್ಟಿಗರು ಆರ್​ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಎಂದು ಭಾವಿಸಿದ್ದರು. ಆಗಿನಿಂದ ಈ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಟಿ ಆರ್​ಪಿ ಪದದ ಅರ್ಥವನ್ನು ಬಹಿರಂಗಗೊಳಿಸಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ಆರ್​ಪಿ ಪದದ ಬಗ್ಗೆ ವಿವರಣೆ ನೀಡಿರುವ ಊರ್ವಶಿ, ಜನರು ನನ್ನ ಹೇಳಿಕೆಯನ್ನು ಈ ರೀತಿ ತಪ್ಪಾಗಿ ಅರ್ಥೈಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಆರ್‌ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಅಲ್ಲ. ಬದಲಿಗೆ ನನ್ನ ಸಹ ನಟ ರಾಮ್ ಪೋತಿನೇನಿ ಎಂದರ್ಥ. ಅಲ್ಲದೆ ರಿಷಬ್ ಪಂತ್ ಅವರನ್ನು ಆರ್‌ಪಿ ಎಂದೂ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಊರ್ವಶಿ ಹೇಳಿಕೊಂಡಿದ್ದಾರೆ.

ಊಹಪೋಹಗಳ ಬಗ್ಗೆ ಊರ್ವಶಿ ಉತ್ತರ

ಹಲವು ದಿನಗಳಿಂದ ರಿಷಬ್ ಪಂತ್ ಹಾಗೂ ಊರ್ವಶಿ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ಮಾತನಾಡಿದ ನಟಿ, ಜನರು ಕೇವಲ ವಿಷಯಗಳನ್ನು ಊಹಿಸಿಕೊಳ್ಳುತ್ತಾ ಅವುಗಳ ಬಗ್ಗೆ ಬರೆಯುತ್ತಾರೆ. ಇಂತಹ ವದಂತಿಗಳನ್ನು ನಂಬುವವರಿಗೆ ಸ್ವಲ್ಪ ವಿಶ್ಲೇಷಣೆ ಮಾಡಿ ಎಂದು ಹೇಳುತ್ತೇನೆ. ನೀವೇನನ್ನೂ ನೈಜವಾಗಿ ನೋಡದೆ ಕೇವಲ ಯಾರೋ ಒಬ್ಬ ಯೂಟ್ಯೂಬರ್ ಅಥವಾ ಬೇರೊಬ್ಬ ವ್ಯಕ್ತಿ ಹೇಳಿದನ್ನು ಅಷ್ಟೂ ಸುಲಭವಾಗಿ ಹೇಗೆ ನಂಬುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಪಂತ್ ಮತ್ತು ಊರ್ವಶಿ ನಡುವಿನ ವಿವಾದ ಎಲ್ಲರಿಗೂ ತಿಳಿದೇ ಇದೆ. ಈ ವಿವಾದದ ನಡುವೆಯೂ ಟಿ20 ವಿಶ್ವಕಪ್ ವೇಳೆ ಊರ್ವಶಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಆ ವೇಳೆ ಊರ್ವಶಿ ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಊರ್ವಶಿ ಅಲ್ಲಿಗೆ ಹೋಗಿದ್ದರಿಂದಲೇ ಪಂತ್ ಉತ್ತಮವಾಗಿ ಆಡಲಿಲ್ಲ ಎಂದು ಅನೇಕರು ಕಿಡಿಕಾರಿದ್ದರು.

ನಟರಿಗಿಂತ ಕ್ರಿಕೆಟಿಗರನ್ನು ಏಕೆ ಹೆಚ್ಚು ಗೌರವಿಸಲಾಗುತ್ತದೆ?

ಕ್ರಿಕೆಟಿಗರು ನಟರಿಗಿಂತ ಹೆಚ್ಚು ಗೌರವವನ್ನು ಪಡೆಯುತ್ತಾರೆ ಅಥವಾ ನಮಗಿಂತ ಹೆಚ್ಚು ಗಳಿಸುತ್ತಾರೆ ಎಂಬ ಹೋಲಿಕೆಗಳನ್ನು ನಾವು ಆಗಾಗ್ಗೆ ನೋಡುತ್ತೇವೆ. ಇದು ನನಗೆ ಬೇಸರ ತಂದಿದೆ. ಅವರು ದೇಶಕ್ಕಾಗಿ ಆಡುವುದರಿಂದ ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸುತ್ತಾರೆ ಎಂಬುದನ್ನು ನಾನು ಕೂಡ ಒಪ್ಪುತ್ತೇನೆ. ಆದರೆ ನಟರು ಕೂಡ ದೇಶಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಕಲಾವಿದರೂ ದೇಶವನ್ನು ಪ್ರತಿನಿಧಿಸಿದ್ದಾರೆ. ನಾನೇ ಎಷ್ಟು ಬಾರಿ ಮಾಡಿದ್ದೇನೆ. ಆದರೆ ಈ ಹೋಲಿಕೆ ನನಗೆ ಇಷ್ಟವಿಲ್ಲ ಎಂದಿದ್ದಾರೆ.

ರಿಷಬ್ ಪಂತ್ ಟೀಸಿಂಗ್​ಗೆ ಪ್ರತಿಕ್ರಿಯೆ

ಹಲವು ಬಾರಿ ರಿಷಬ್ ಮೈದಾನದಲ್ಲಿ ಆಡುವಾಗ ಊರ್ವಶಿ ಹೆಸರನ್ನು ಬಳಸಿ ಹಲವಾರು ಅಭಿಮಾನಿಗಳು ಪಂತ್​ರನ್ನು ರೇಗಿಸಿದ ಸಾಕಷ್ಟು ನಿದರ್ಶನಗಳಿವೆ. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಊರ್ವಶಿ, ಈ ದೇಶವನ್ನು ಪ್ರತಿನಿಧಿಸುವ ಯಾರನ್ನಾದರೂ ಗೌರವಿಸಬೇಕು. ಅವರನ್ನು ಸರಕಿನಂತೆ ಪರಿಗಣಿಸಬಾರದು. ಅವರನ್ನು ನಿಮ್ಮ ನೆರೆಹೊರೆಯವರಂತೆ ನಡೆಸಿಕೊಳ್ಳಬೇಡಿ. ಇಂತಹ ವರ್ತನೆಯನ್ನು ಬೇರೊಬ್ಬರ ಖಾಸಗಿ ಜೀವನದಲ್ಲಿ ಇಣುಕುವುದು ಎನ್ನುತ್ತಾರೆ. ನನಗೆ ಇಂತಹ ವರ್ತನೆಗಳು ಕೊಂಚವು ಇಷ್ಟವಿಲ್ಲ ಎಂದಿದ್ದಾರೆ.

ಇಷ್ಟು ದಿನ ಮೌನ ವಹಿಸಿದ್ದೇಕೆ?

ರಿಷಭ್ ಪಂತ್ ಜೊತೆಗಿನ ಅಫೇರ್ ಬಗ್ಗೆ ಇಷ್ಟು ದಿನ ಮೌನ ವಹಿಸಿದ್ದೇಕೆ ಎಂದು ಕೇಳಿದಾಗ, ನನ್ನ ಬಗ್ಗೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ಜೀವನದ ಒಂದು ಭಾಗವಾಗಿದೆ. ಇದು ಒಂದು ಟ್ರೆಂಡ್‌ ಆಗಿದ್ದು, ಇದರ ಸುಳಿಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಗುರಿಯಾಗಿರುತ್ತಾರೆ. ಪ್ರಧಾನಿ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಜೀವನದಲ್ಲಿ ನಾವು ಯೋಚಿಸಬೇಕಾದ ಇನ್ನೂ ಅನೇಕ ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಕೆಲಸದತ್ತ ಗಮನ ಹರಿಸಲು ನಾನು ಆದ್ಯತೆ ನೀಡುತ್ತೇನೆ ಎಂದು ಟ್ರೋಲರ್‌ಗಳಿಗೆ ಊರ್ವಶಿ ಉತ್ತರಿಸಿದರು.

Published On - 5:56 pm, Sat, 3 December 22

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು