AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಘಾನ್​ Vs ಭಾರತ ಪಂದ್ಯದ ವೇಳೆ ಕಿರಿಕ್; ಸೂರ್ಯನ ಹೊಡೆತಕ್ಕೆ ರಶೀದ್ ಕೋಪ

ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್​ನಲ್ಲಿ ನೀಡಿದ್ದು ಕೇವಲ 26 ರನ್​ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್​ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್​ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು.

ಅಪ್ಘಾನ್​ Vs ಭಾರತ ಪಂದ್ಯದ ವೇಳೆ ಕಿರಿಕ್; ಸೂರ್ಯನ ಹೊಡೆತಕ್ಕೆ ರಶೀದ್ ಕೋಪ
ಸೂರ್ಯನ ಹೊಡೆತಕ್ಕೆ ರಶೀದ್ ಕೋಪ
ರಾಜೇಶ್ ದುಗ್ಗುಮನೆ
|

Updated on: Jun 21, 2024 | 7:40 AM

Share

2024ನೇ ಸಾಲಿನ ಟಿ20 ವಿಶ್ವಕಪ್​ನ ಸೂಪರ್ 8ನಲ್ಲಿ ಭಾರತ ಮೊದಲ ಪಂದ್ಯವನ್ನಾಡಿದೆ. ಲೀಗ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಅಪ್ಘಾನಿಸ್ತಾನ ತಂಡವನ್ನು ರೋಹಿತ್ ಶರ್ಮಾ (Rohit Sharma) ಪಡೆ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ವೇಳೆ ಸೂರ್ಯಕುಮಾರ್ ಹಾಗೂ ರಶೀದ್ ಖಾನ್ ಮಧ್ಯೆ ಕಿರಿಕ್ ಆಗಿತ್ತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್​ನಲ್ಲಿ ನೀಡಿದ್ದು ಕೇವಲ 26 ರನ್​ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್​ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್​ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು.

ರಶೀದ್ ಖಾನ್ ಅವರು ಎಸೆದ ಬಾಲ್​ಗಳಲ್ಲಿ ಆರು ಬೌಲ್​ಗಳನ್ನು ಸೂರ್ಯ ಅವರು ಎದುರಿಸಿದರು. ಈ ಪೈಕಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿದರು. ಎಲ್ಲವೂ ಸ್ವೀಪ್ ಶಾಟ್​ನಲ್ಲೇ ಹೊಡೆದರು. ಹೀಗಾಗಿ, ಪಂದ್ಯದ ಮಧ್ಯೆ ಇಬ್ಬರೂ ಮಾತುಕತೆ ನಡೆಸಿಕೊಂಡಿದ್ದಾರೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನ್ ಟೆಸ್ಟ್ ತಂಡ ಪ್ರಕಟ: ರಶೀದ್ ಖಾನ್ ಔಟ್..!

ಈ ವಿಡಿಯೋನ ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಕೆಲವರು ಇದನ್ನು ಮಾತಿನ ಚಕಮಕಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇದನ್ನು ಗೆಳೆತನದಲ್ಲಿ ನಡೆದ ಮಾತುಕತೆ ಎಂದಿದ್ದಾರೆ. ರಶೀದ್ ಖಾನ್​ಗೆ ಭಾರತೀಯ ಆಟಗಾರರ ಜೊತೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣ ಆಗಿರುವುದು ಐಪಿಎಲ್. ಹೀಗಾಗಿ, ಇಬ್ಬರೂ ಫ್ರೆಂಡ್​ಶಿಪ್​ನಲ್ಲಿ ಮಾತನಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು