AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಘಾನ್​ Vs ಭಾರತ ಪಂದ್ಯದ ವೇಳೆ ಕಿರಿಕ್; ಸೂರ್ಯನ ಹೊಡೆತಕ್ಕೆ ರಶೀದ್ ಕೋಪ

ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್​ನಲ್ಲಿ ನೀಡಿದ್ದು ಕೇವಲ 26 ರನ್​ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್​ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್​ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು.

ಅಪ್ಘಾನ್​ Vs ಭಾರತ ಪಂದ್ಯದ ವೇಳೆ ಕಿರಿಕ್; ಸೂರ್ಯನ ಹೊಡೆತಕ್ಕೆ ರಶೀದ್ ಕೋಪ
ಸೂರ್ಯನ ಹೊಡೆತಕ್ಕೆ ರಶೀದ್ ಕೋಪ
ರಾಜೇಶ್ ದುಗ್ಗುಮನೆ
|

Updated on: Jun 21, 2024 | 7:40 AM

Share

2024ನೇ ಸಾಲಿನ ಟಿ20 ವಿಶ್ವಕಪ್​ನ ಸೂಪರ್ 8ನಲ್ಲಿ ಭಾರತ ಮೊದಲ ಪಂದ್ಯವನ್ನಾಡಿದೆ. ಲೀಗ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಅಪ್ಘಾನಿಸ್ತಾನ ತಂಡವನ್ನು ರೋಹಿತ್ ಶರ್ಮಾ (Rohit Sharma) ಪಡೆ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ವೇಳೆ ಸೂರ್ಯಕುಮಾರ್ ಹಾಗೂ ರಶೀದ್ ಖಾನ್ ಮಧ್ಯೆ ಕಿರಿಕ್ ಆಗಿತ್ತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಶೀದ್ ಖಾನ್ ಅವರು ಎಕಾನಮಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಓವರ್​ನಲ್ಲಿ ನೀಡಿದ್ದು ಕೇವಲ 26 ರನ್​ಗಳು. ಇಷ್ಟೇ ಅಲ್ಲ ರಿಷಭ್ ಪಂತ್, ವಿರಾಟ್ ಕೊಹ್ಲಿ, ಶಿವಮ್ ದೂಬೆ ವಿಕೆಟ್​ನ ಪಡೆದು ತಂಡಕ್ಕೆ ನೆರವಾದರು. ಸೂರ್ಯಕುಮಾರ್ ಯಾದವ್​ಗೆ ಬೌಲ್ ಹಾಕುವಾಗ ಮಾತ್ರ ರಶೀದ್ ಖಾನ್ ವಿಫಲರಾಗುತ್ತಿದ್ದರು.

ರಶೀದ್ ಖಾನ್ ಅವರು ಎಸೆದ ಬಾಲ್​ಗಳಲ್ಲಿ ಆರು ಬೌಲ್​ಗಳನ್ನು ಸೂರ್ಯ ಅವರು ಎದುರಿಸಿದರು. ಈ ಪೈಕಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿದರು. ಎಲ್ಲವೂ ಸ್ವೀಪ್ ಶಾಟ್​ನಲ್ಲೇ ಹೊಡೆದರು. ಹೀಗಾಗಿ, ಪಂದ್ಯದ ಮಧ್ಯೆ ಇಬ್ಬರೂ ಮಾತುಕತೆ ನಡೆಸಿಕೊಂಡಿದ್ದಾರೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನ್ ಟೆಸ್ಟ್ ತಂಡ ಪ್ರಕಟ: ರಶೀದ್ ಖಾನ್ ಔಟ್..!

ಈ ವಿಡಿಯೋನ ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಕೆಲವರು ಇದನ್ನು ಮಾತಿನ ಚಕಮಕಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇದನ್ನು ಗೆಳೆತನದಲ್ಲಿ ನಡೆದ ಮಾತುಕತೆ ಎಂದಿದ್ದಾರೆ. ರಶೀದ್ ಖಾನ್​ಗೆ ಭಾರತೀಯ ಆಟಗಾರರ ಜೊತೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣ ಆಗಿರುವುದು ಐಪಿಎಲ್. ಹೀಗಾಗಿ, ಇಬ್ಬರೂ ಫ್ರೆಂಡ್​ಶಿಪ್​ನಲ್ಲಿ ಮಾತನಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More