AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರುಗಾಳಿ ಎಬ್ಬಿಸಲು ಒಪ್ಪಂದ ಮಾಡಿಕೊಂಡ ಕ್ರಿಸ್ ಗೇಲ್; 22 ದಿನಗಳ ಕಾಲ ಬೌಲರ್​ಗಳು ನಿದ್ದೆಗೆಡುವುದು ಖಂಡಿತ!

Legends League Cricket: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಅನ್ನು 17 ಸೆಪ್ಟೆಂಬರ್ 2022 ರಿಂದ ಆಯೋಜಿಸಲಾಗುವುದು. ಈ ಪಂದ್ಯಾವಳಿಯು 4 ತಂಡಗಳ ನಡುವೆ ಆಡಲಾಗುತ್ತದೆ ಮತ್ತು ಅಕ್ಟೋಬರ್ 8 ರಂದು ಕೊನೆಗೊಳ್ಳುತ್ತದೆ. ಅದೇನೆಂದರೆ, ಈ ಕ್ರಿಕೆಟ್ ಲೀಗ್ ಇಡೀ 22 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಕ್ರಿಸ್ ಗೇಲ್ ಅಬ್ಬರಿಸುವ ನಿರೀಕ್ಷೆ ಇದೆ.

ಬಿರುಗಾಳಿ ಎಬ್ಬಿಸಲು ಒಪ್ಪಂದ ಮಾಡಿಕೊಂಡ ಕ್ರಿಸ್ ಗೇಲ್; 22 ದಿನಗಳ ಕಾಲ ಬೌಲರ್​ಗಳು ನಿದ್ದೆಗೆಡುವುದು ಖಂಡಿತ!
ಇದುವರೆಗೆ ಟಿ20 ಮಾದರಿಯಲ್ಲಿ 11,000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು ಕೇವಲ ಮೂವರು ಮಾತ್ರ. ಈ ಬ್ಯಾಟ್ಸ್‌ಮನ್‌ಗಳು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಪೊಲಾರ್ಡ್​, ಪಾಕಿಸ್ತಾನದ ಶೋಯೆಬ್ ಮಲಿಕ್ ಆಗಿದ್ದಾರೆ. ಈ ಮೂವರು ಇದುವರೆಗೆ ಟಿ20ಯಲ್ಲಿ 11,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ
ಪೃಥ್ವಿಶಂಕರ
|

Updated on: Aug 05, 2022 | 7:50 PM

Share

IPL 2022 ರಲ್ಲಿ ಕ್ರಿಸ್ ಗೇಲ್ (Chris Gayle) ಅಬ್ಬರ ಇರಲಿಲ್ಲ ಹೀಗಾಗಿ ಅಭಿಮಾನಿಗಳು ನಿರಾಶೆಗೊಂಡಿದ್ದರು. ಆದರೆ ಭಾರತೀಯ, ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಆ ನಿರಾಶೆ ಈಗ ದೂರವಾಗುತ್ತದೆ. ಏಕೆಂದರೆ, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (Universe boss Chris Gayle) ಅವರು ಬ್ಯಾಟ್‌ನೊಂದಿಗೆ ಬೌಲರ್‌ಗಳ ನಿದ್ದೆಗೆಡಿಸಲು ಭಾರತಕ್ಕೆ ಬರುತ್ತಿದ್ದಾರೆ. ಇಲ್ಲ, ಐಪಿಎಲ್ ಅಲ್ಲ ಆದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (Legends League cricket) ಭಾಗವಹಿಸಲು ಗೇಲ್ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಈ ಲೀಗ್‌ನ ಸಂಘಟಕರು ಹಂಚಿಕೊಂಡಿದ್ದಾರೆ. ಇದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್ ಆಗಿದ್ದು ಇದರಲ್ಲಿ ಕೆರಿಬಿಯನ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೊದಲ ಬಾರಿಗೆ ಆಡಲಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಅನ್ನು 17 ಸೆಪ್ಟೆಂಬರ್ 2022 ರಿಂದ ಆಯೋಜಿಸಲಾಗುವುದು. ಈ ಪಂದ್ಯಾವಳಿಯು 4 ತಂಡಗಳ ನಡುವೆ ಆಡಲಾಗುತ್ತದೆ ಮತ್ತು ಅಕ್ಟೋಬರ್ 8 ರಂದು ಕೊನೆಗೊಳ್ಳುತ್ತದೆ. ಅದೇನೆಂದರೆ, ಈ ಕ್ರಿಕೆಟ್ ಲೀಗ್ ಇಡೀ 22 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಕ್ರಿಸ್ ಗೇಲ್ ಅಬ್ಬರಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ
Image
CWG 2022: 17 ಬಾರಿ ಸೋಲಿಸಿರುವ ಈ ಬಲಿಷ್ಠ ತಂಡ ಹರ್ಮನ್​ಪ್ರೀತ್ ಪಡೆಗೆ ಸೆಮಿಫೈನಲ್ ಎದುರಾಳಿ..!
Image
CWG 2022 Day 8 Schedule: ಕುಸ್ತಿ, ಟೇಬಲ್ ಟೆನ್ನಿಸ್​, ಬ್ಯಾಡ್ಮಿಂಟನ್; 8ನೇ ದಿನ ಭಾರತದ ಪದಕ ಭೇಟೆ ಹೇಗಿರಲಿದೆ?
Image
CWG 2022 Hockey: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ ಪುರುಷ ಹಾಕಿ ತಂಡ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ದೊಡ್ಡ ಮುಖ

ಅಂತರಾಷ್ಟ್ರೀಯ ಕ್ರಿಕೆಟ್ ತೊರೆದಿರುವ ಕ್ರಿಕೆಟಿಗರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಾರೆ. ಕ್ರಿಸ್ ಗೇಲ್ ಎರಡನೇ ಆವೃತ್ತಿಯ ದೊಡ್ಡ ಮುಖವಾಗಿದ್ದಾರೆ, ಅವರನ್ನು ಹೊರತುಪಡಿಸಿ ಮೊಹಮ್ಮದ್ ಕೈಫ್, ಆರ್‌ಪಿ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಚಾಮಿಂದಾ ವಾಸ್ ಅವರಂತಹ ಕ್ರಿಕೆಟಿಗರು ಕೂಡ ಆಗಲಿದ್ದಾರೆ. ಈ ಎಲ್ಲಾ ಆಟಗಾರರು ಲೀಗ್‌ನಲ್ಲಿ ಆಡಲು ತಮ್ಮ ಲಭ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಗೇಲ್ ಸೇರ್ಪಡೆಯಿಂದ ಲೀಗ್‌ನ ಆಟವೇ ಬದಲಾಗಲಿದೆ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ, “ಕ್ರಿಸ್ ಗೇಲ್ ಅವರ ಸೇರ್ಪಡೆಯೊಂದಿಗೆ ನಮ್ಮ ಲೀಗ್​ಗೆ ಈಗ ಹೊಸ ಹುರುಪು ಬಂದಿದೆ. ಈ ಟೂರ್ನಿಯಲ್ಲಿ ಈಗ ಇನ್ನಷ್ಟು ಸ್ಫೋಟಕ ಕ್ರಿಕೆಟ್ ಕಾಣಿಸಲಿದೆ. ಅಭಿಮಾನಿಗಳು ಮತ್ತು ಕ್ರಿಕೆಟ್ ನೋಡುತ್ತಿರುವವರು ಈಗ ಲೆಜೆಂಡ್ಸ್ ಲೀಗ್‌ನಲ್ಲಿ ಹೆಚ್ಚಿನ ಬೆಂಕಿಯ ಶಕ್ತಿಯನ್ನು ನೋಡುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಜೊತೆಗೆ ಅಭಿಮಾನಿಗಳು ಮೊದಲಿಗಿಂತ ಹೆಚ್ಚು ಮನರಂಜನೆಯ ಕ್ರಿಕೆಟ್ ಅನ್ನು ನೋಡುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​