AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs KKR Prediction Playing XI: ಸೋಲಿನ ಸುಳಿಯಲ್ಲಿರುವ ಉಭಯ ತಂಡಗಳಲ್ಲಿ ಬದಲಾವಣೆ ಖಚಿತ! ಯಾರಿಗೆ ಅವಕಾಶ?

DC vs KKR Prediction Playing XI IPL 2022: ಪಾಯಿಂಟ್ ಪಟ್ಟಿಯಲ್ಲಿ ರಿಷಬ್ ಪಂತ್ ನೇತೃತ್ವದ ಈ ತಂಡ ಏಳನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ಅದಕ್ಕಿಂತ ಒಂದು ಸ್ಥಾನ ಕೆಳಗಿದೆ. ಕೋಲ್ಕತ್ತಾದೊಂದಿಗಿನ ಸಮಸ್ಯೆಯೆಂದರೆ ತಂಡವು ತನ್ನ ಸರಿಯಾದ ಆಡುವ 11 ಅನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

DC vs KKR Prediction Playing XI: ಸೋಲಿನ ಸುಳಿಯಲ್ಲಿರುವ ಉಭಯ ತಂಡಗಳಲ್ಲಿ ಬದಲಾವಣೆ ಖಚಿತ! ಯಾರಿಗೆ ಅವಕಾಶ?
KKR vs DC IPL 2022
TV9 Web
| Edited By: |

Updated on: Apr 27, 2022 | 6:56 PM

Share

ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಈ ಆವೃತ್ತಿಯಲ್ಲಿ ಹೊಸ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಆಡುತ್ತಿದ್ದು, ಗುರುವಾರ ತಮ್ಮ ಹಳೆಯ ತಂಡದ ವಿರುದ್ಧ ಆಡಬೇಗಿದೆ. ಐಪಿಎಲ್ 2022 (IPL 2022) ನಲ್ಲಿ ಈ ಎರಡೂ ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಕಳೆದ ಕೆಲವು ಋತುಗಳಲ್ಲಿ ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದರು ಆದರೆ ಈ ಋತುವಿನಲ್ಲಿ ಡೆಲ್ಲಿ ಅವರನ್ನು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಅವರನ್ನು ಕೋಲ್ಕತ್ತಾ ಹರಾಜಿನಲ್ಲಿ ಬಾರಿ ಬೆಲೆಗೆ ಖರೀದಿಸಿತ್ತು. ಈ ಋತುವಿನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಡೆಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ ಈಗ ಅಯ್ಯರ್ ಅವರ ಕಣ್ಣು ಸೇಡು ತೀರಿಸಿಕೊಳ್ಳಲಿದೆ.

ಸದ್ಯ ದೆಹಲಿಯ ಪರಿಸ್ಥಿತಿ ಚೆನ್ನಾಗಿಲ್ಲ. ತಂಡಕ್ಕೆ ತಿಳಿದಿರುವ ರೀತಿಯ ಪ್ರದರ್ಶನ ನೀಡಲು ಇನ್ನೂ ಸಾಧ್ಯವಾಗಿಲ್ಲ. ಅವರ ದುರ್ಬಲ ಮಧ್ಯಮ ಕ್ರಮಾಂಕವೇ ಇದಕ್ಕೆ ದೊಡ್ಡ ಕಾರಣ. ಪಾಯಿಂಟ್ ಪಟ್ಟಿಯಲ್ಲಿ ರಿಷಬ್ ಪಂತ್ ನೇತೃತ್ವದ ಈ ತಂಡ ಏಳನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ಅದಕ್ಕಿಂತ ಒಂದು ಸ್ಥಾನ ಕೆಳಗಿದೆ. ಕೋಲ್ಕತ್ತಾದೊಂದಿಗಿನ ಸಮಸ್ಯೆಯೆಂದರೆ ತಂಡವು ತನ್ನ ಸರಿಯಾದ ಆಡುವ 11 ಅನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ದೆಹಲಿಯಲ್ಲಿ ಈ ಬದಲಾವಣೆ ಖಚಿತ ದೆಹಲಿಯ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಇಬ್ಬರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ತಂಡ್ ಮಧ್ಯಮ ಕ್ರಮಾಂಕವು ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಸರ್ಫರಾಜ್ ಖಾನ್‌ಗೂ ಅವಕಾಶಗಳು ಸಿಕ್ಕರೂ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಲಲಿತ್ ಯಾದವ್ ಮೊದಲ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಂತರ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಪಂತ್ ಈ ಇಬ್ಬರನ್ನೂ ಹೊರಗಿಡಬಹುದು. ಅವರಿಗೆ ಉತ್ತಮ ಆಯ್ಕೆಗಳಿವೆ. ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಭಾರತದ U-19 ಸ್ಟಾರ್ ಯಶ್ ಧುಲ್ ಅವರೊಂದಿಗೆ ಪ್ರಭಾವ ಬೀರಿದ ಶ್ರೀಕರ್ ಭರತ್ ಅವರನ್ನು ಬದಲಾಯಿಸಬಹುದು. ರಿಪ್ಪಲ್ ಪಟೇಲ್​ಗೂ ಸಹ ಅವಕಾಶ ನೀಡಬಹುದು.

ಕೋಲ್ಕತ್ತಾ ಯಾರನ್ನು ಹೊರಗಿಡುತ್ತದೆ? ಕೋಲ್ಕತ್ತಾದ ಪ್ರಮುಖ ಆಟಗಾರರು ಈ ಋತುವಿನಲ್ಲಿ ವಿಶೇಷವಾಗಿ ಏನನ್ನೂ ಮಾಡಲಿಲ್ಲ. ವರುಣ್ ಚಕ್ರವರ್ತಿಯಿಂದ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾವರೆಗೆ ಎಲ್ಲರೂ ಈ ಋತುವಿನಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಯ್ಯರ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರು. ಉದಾಹರಣೆಗೆ, ಕೊನೆಯ ಪಂದ್ಯದಲ್ಲಿ, ಪ್ಯಾಟ್ ಕಮ್ಮಿನ್ಸ್ ಅವರನ್ನು ಹೊರಗಿಟ್ಟು ಟಿಮ್ ಸೌಥಿಗೆ ಅವಕಾಶ ನೀಡಲಾಯಿತು.ಹೀಗಾಗಿ ಈ ಪಂದ್ಯದಲ್ಲಿ ವರುಣ್ ಬದಲಿಗೆ ಅನುಕೂಲ್ ರಾಯ್​ಗೆ ಅವಕಾಶ ಹಾಕಬಹುದು. ಅದೇ ಸಮಯದಲ್ಲಿ ಹರ್ಷಿತ್ ರಾಣಾ ಕೂಡ ಆಯ್ಕೆಯಾಗಬಹುದು.

ಎರಡೂ ತಂಡಗಳ ಸಂಭಾವ್ಯ ಆಟ-11

ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವ್ ಮಾವಿ, ಅನುಕುಲ್ ರಾಯ್.

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಡೇವಿಡ್ ವಾರ್ನರ್, ಕೆಎಸ್ ಭರತ್/ಯಶ್ ಧುಲ್, ರೋಮ್‌ವೈನ್ ಪೊವೆಲ್, ರಿಪ್ಪಲ್ ಪಟೇಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್

ಇದನ್ನೂ ಓದಿ:Virat Kohli: ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ಬಿಸಿಸಿಐನಿಂದಲೂ ಬರೆ! ಟಿ20 ತಂಡಕ್ಕೆ ವಿರಾಟ್ ಆಯ್ಕೆ ಅನುಮಾನ?

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್