AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ್​ ಸಿಂಗ್-ಹಜೆಲ್​ ಕೀಚ್​​ ದಂಪತಿಗೆ ಗಂಡು ಮಗು; ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾರಿಂದ ಶುಭ ಹಾರೈಕೆ

ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಯುವರಾಜ್​ ಸಿಂಗ್ ಮತ್ತು ಹಜೆಲ್​ ಕೀಚ್​ ಹೇಳಿದ್ದಾರೆ.

ಯುವರಾಜ್​ ಸಿಂಗ್-ಹಜೆಲ್​ ಕೀಚ್​​ ದಂಪತಿಗೆ ಗಂಡು ಮಗು; ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾರಿಂದ ಶುಭ ಹಾರೈಕೆ
ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​
TV9 Web
| Edited By: |

Updated on: Jan 26, 2022 | 8:13 AM

Share

ಭಾರತದ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಮತ್ತು ನಟಿ ಹಜೆಲ್​ ಕೀಚ್ (Yuvraj Singh and Hazel Keech)​ ದಂಪತಿಗೆ ಮೊದಲ ಮಗು ಹುಟ್ಟಿದೆ. ತಮಗೆ ಗಂಡು ಮಗು ಹುಟ್ಟಿದ್ದನ್ನು ಯುವರಾಜ್​ ಸಿಂಗ್ ಸೋಷಿಯಲ್​ ಮೀಡಿಯಾ ಮೂಲಕ ಮಂಗಳವಾರ ತಿಳಿಸಿದ್ದಾರೆ. ಯುವರಾಜ್​ ಸಿಂಗ್​ ಕ್ರಿಕೆಟ್​​ನಲ್ಲಿ ತಮ್ಮ ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ ಮೂಲಕ ಹೆಸರು ಮಾಡಿದ್ದರು. ಆಲ್​ ರೌಂಡರ್​ ಎಂದೇ ಖ್ಯಾತರಾಗಿದ್ದರು. ಅದ್ಭುತ ಕ್ರಿಕೆಟ್​ ಆಟಗಾರರಲ್ಲೊಬ್ಬರಾಗಿದ್ದರು. ಆದರೆ ನಂತರ ಕ್ಯಾನ್ಸರ್​ ರೋಗಕ್ಕೆ ಒಳಗಾಗಿ, ಗುಣಮುಖರಾದರೂ, ತಂಡದಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ. ಹೀಗೆ ಹಲವು ಕಾರಣಗಳಿಂದ ಕ್ರಿಕೆಟ್​ ತೊರೆದಿದ್ದಾರೆ.   

ತಮಗೆ ಗಂಡು ಮಗು ಹುಟ್ಟಿದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ ಯುವರಾಜ್​ ಸಿಂಗ್​, ಇಂದು ನಮಗೆ ಗಂಡು ಮಗು ಹುಟ್ಟಿದೆ ಎಂಬ ವಿಷಯವನ್ನು ನಮ್ಮ ಫ್ಯಾನ್ಸ್​​, ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಲು ತುಂಬ ಉತ್ಸುಕರಾಗಿದ್ದೇವೆ.  ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ. ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ ಇಬ್ಬರೂ ಕೂಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಪ್ಪ-ಅಮ್ಮನಾದ ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ಗೆ ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾ, ಇರ್ಫಾನ್​ ಪಠಾಣ್​ ಸೇರಿ ಅನೇಕರು ಶುಭ ಹಾರೈಸಿದ್ದಾರೆ. ಅಂದಹಾಗೆ, ಯುವರಾಜ್​ ಸಿಂಗ್​ ಮತ್ತು ಹಜೆಲ್​ ವಿವಾಹ 2016ರಲ್ಲಿ ನಡೆದಿತ್ತು.

ಯುವರಾಜ್​ ಸಿಂಗ್​ ಮೊದಲ 2000ನೇ ಇಸ್ವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಯುವಿ ಎಂಬ ನಿಕ್​ ನೇಮ್​​ನಿಂದಲೇ ಖ್ಯಾತರಾಗಿದ್ದ ಅವರು, ಸುಮಾರು 40 ಟೆಸ್ಟ್​ಗಳು, 304 ಏಕದಿನ ಪಂದ್ಯಗಳು, 58 ಟಿ20 ಪಂದ್ಯಗಳನ್ನು ಆಡಿ, 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್​​ನಲ್ಲಂತೂ ಭರ್ಜರಿ ಮಿಂಚಿದ್ದ ಯುವರಾಜ್​ ಸಿಂಗ್​, ಪಂಜಾಬ್​ ಕಿಂಗ್ಸ್​, ಪುಣೆ ವಾರಿಯರ್ಸ್​, ಬೆಂಗಳೂರು ರಾಯಲ್ ಚಾಲೆಂಜರ್ಸ್​, ಸನ್​ರೈಸ್​ ಹೈದರಾಬಾದ್​, ಮುಂಬೈ ಇಂಡಿಯನ್ಸ್​ ತಂಡಗಳಲ್ಲಿ ಆಡಿದ್ದಾರೆ. ಇನ್ನು ಕ್ರಿಕೆಟ್​ ಜೀವನಕ್ಕೆ ಮರಳುವ ಬಗ್ಗೆ 2021ರಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ
ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ