
ಭಾರತ ಕ್ರಿಕೆಟ್ ಅಲ್ಲಿ ಪಾಂಡ್ಯ ಬ್ರದರ್ಸ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಮೊದಲು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇವರು ಒಟ್ಟಾಗಿ ಆಡಿದ್ದರು. ಈಗ ಕೃನಾಲ್ ಬೆಂಗಳೂರು ಪರ ಆಡುತ್ತಿದ್ದರೆ, ಹಾರ್ದಿಕ್ ಮುಂಬೈ ತಂಡದಲ್ಲೇ ಮುಂದುವರಿದಿದ್ದಾರೆ. ಇಬ್ಬರೂ ಬೇರೆ ತಂಡದಲ್ಲಿದ್ದರೂ ಬಾಂಧವ್ಯ ಹಾಗೆಯೇ ಮುಂದುವರಿದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರ ಮಧ್ಯೆ ಈಗ ಕಿರಿಕ್ ಆಗಿದೆ ಎನ್ನಲಾಗಿದೆ. ಈ ವಿಷಯವಾಗಿ ಕೃನಾಲ್ ಅವರು ಮೌನ ಮುರಿದಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಈ ಮೊದಲು ನತಾಶಾ ಜೊತೆ ವಿವಾಹ ಆಗಿ ವಿಚ್ಛೇದನ ಪಡೆದರು. ಈಗ ಹಾರ್ದಿಕ್ ಅವರು ಮಹಿಕಾ ಶರ್ಮಾ ಜೊತೆ ಸುತ್ತಾಡುತ್ತಿದ್ದಾರೆ. ಮಹಿಕಾ ಸಿಕ್ಕ ಬಳಿಕ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿದೆ ಎಂದು ವರದಿ ಆಗಿದೆ. ಹಾರ್ದಿಕ್-ಕೃನಾಲ್ ಬೇರೆ ಆಗಲು ಮಹಿಕಾ ಕಾರಣ ಎಂಬ ವದಂತಿಯೂ ಇದೆ. ಈ ಮೊದಲು ಮುಂಬೈ vs ಆರ್ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸಿದ್ದರು. ಇದು ಕೂಡ ಚರ್ಚೆಯನ್ನು ಹುಟ್ಟುಹಾಕಿತ್ತು. ಅಭಿಮಾನಿಗಳಲ್ಲಿ ವದಂತಿ ಹೆಚ್ಚುವಂತೆ ಮಾಡಿತ್ತು.
ಕೃನಾಲ್ ಅವರು ಈಗ ಆರ್ಸಿಬಿ ಇನ್ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆ ಮಾತನಾಡಿದ್ದಾರೆ. ‘ಕಳೆದ ವರ್ಷ ನೀವು ನನಗೆ ಸಂದರ್ಶನ ನೀಡಿಲ್ಲ’ ಎಂದು ಮಿಸ್ಟರ್ ನ್ಯಾಗ್ಸ್ ಹೇಳಿದರು. ಇದಕ್ಕೆ ಉತ್ತರಿಸಿದ ಕೃನಾಲ್, ‘ನಾನು ಆರ್ಸಿಬಿ ಕುಟುಂಬದ ಜೊತೆ ಇದ್ದೆ’ ಎಂದರು. ‘ನಾನು ಕೂಡ ಆರ್ಸಿಬಿ ಕುಟುಂಬದ ಸದಸ್ಯನೇ. ನೀವು ಆರ್ಸಿಬಿ ಕುಟುಂಬದ ಜೊತೆ ಇದ್ದಿದ್ದರಿಂದ ಆರ್ಸಿಬಿ ಕುಟುಂಬದ ಮತ್ತೊಬ್ಬ ಸದಸ್ಯನ ಭೇಟಿ ಮಾಡಲು ಆಗಿಲ್ಲ ಅಲ್ಲವೇ’ ಎಂದು ಮರು ಪ್ರಶ್ನಿಸಿದರು ನ್ಯಾಗ್ಸ್.
ಇದನ್ನೂ ಓದಿ: ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
‘ನಿಮ್ಮ ಕುಟುಂಬದಲ್ಲಿ ಹಲವು ಸದಸ್ಯರು ಇರುತ್ತಾರೆ. ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ’ ಎಂದರು ಕೃನಾಲ್. ‘ನಿಮ್ಮ ಸಹೋದರನ ರೀತಿಯಾ’ ಎಂದು ನ್ಯಾಗ್ಸ್ ಕೇಳುತ್ತಿದ್ದಂತೆ ಕೃನಾಲ್ ನಕ್ಕರು. ‘ಫೈಟ್ ಏನಾದರೂ ನಡೆಯುತ್ತಿದೆಯಾ? ದಯವಿಟ್ಟು ಹೇಳಿ. ವ್ರೆಸ್ಲಿಂಗ್ನಲ್ಲಿ ಕೇನ್ ಹಾಗೂ ಅಂಡರ್ಟೇಕರ್ ಕೂಡ ಫೈಟ್ ಮಾಡಿಕೊಳ್ಳುತ್ತಿದ್ದರು. ನಿಮ್ಮ ಮಧ್ಯೆ ಎಲ್ಲವೂ ಸರಿ ಇದೆಯೇ’ ಎಂದು ಕೇಳಿದಾಗ, ‘ಆಲ್ ಓಕೆ’ ಎಂದು ನಗುತ್ತಲೇ ಹೇಳಿದರು ಕೃನಾಲ್. ಮಾತಿಗಷ್ಟೇ ಕೃನಾಲ್ ಓಕೆ ಅಂದರೇ ಅಥವಾ ನಿಜಕ್ಕೂ ಹಾರ್ದಿಕ್ ಹಾಗೂ ಕೃನಾಲ್ ಮಧ್ಯೆ ಎಲ್ಲವೂ ಸರಿ ಇದೆಯೇ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.