Don Bradman: ಡಾನ್ ಬ್ರಾಡ್ಮನ್ ನಮ್ಮಲ್ಲಿ ಹುಟ್ಟಿದ್ದರೆ ಮೀನುಗಾರನಾಗುತ್ತಿದ್ದರು ಎಂದ ಐಸ್​​ಲೆಂಡ್ ಕ್ರಿಕೆಟ್: ವಿಚಿತ್ರ ಟ್ವೀಟ್​ ಹಿಂದಿದೆ ಕಾರಣ

Iceland Cricket Twitter: ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಕುರಿತು ಐಸ್​​ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Don Bradman: ಡಾನ್ ಬ್ರಾಡ್ಮನ್ ನಮ್ಮಲ್ಲಿ ಹುಟ್ಟಿದ್ದರೆ ಮೀನುಗಾರನಾಗುತ್ತಿದ್ದರು ಎಂದ ಐಸ್​​ಲೆಂಡ್ ಕ್ರಿಕೆಟ್: ವಿಚಿತ್ರ ಟ್ವೀಟ್​ ಹಿಂದಿದೆ ಕಾರಣ
Don Bradman and R Ashwin
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Dec 25, 2021 | 1:25 PM

ಐಸ್​​ಲೆಂಡ್ ದೇಶ ಕ್ರಿಕೆಟ್ (Iceland Cricket) ಲೋಕದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಈವರೆಗೆ ಗೋಚರಿಸಿಲ್ಲ. ದುರ್ಬಲ ತಂಡವಾಗಿ ಗುರುತಿಸಿಕೊಂಡಿರುವ ಐಸ್​​ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್​ (Iceland Cricket Twitter) ಖಾತೆಯಲ್ಲಿ ಮಾತ್ರ ಪ್ರಚಂಡವಾಗಿದೆ. ಕಳೆದ ಕೆಲವು ವರ್ಷಗಳಿಂದ ಐಸ್​​ಲೆಂಡ್ ಕ್ರಿಕೆಟ್​ನ ಟ್ವಿಟ್ಟರ್ ಖಾತೆ ಟ್ವೀಟ್​ಗಳ ವಿಚಾರಕ್ಕೆ ಭಾರೀ ಸುದ್ದಿಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಐಸ್​​ಲೆಂಡ್ ಕ್ರಿಕೆಟ್ ಟ್ವಿಟ್ಟರ್ ಖಾತೆಗೆ ಸಾಕಷ್ಟು ಫಾಲೋವರ್​ಗಳು ಕೂಡ ಇದ್ದಾರೆ ಎಂದರೆ ನಂಬಲೇ ಬೇಕು. ಸದ್ಯ ಐಸ್​​ಲೆಂಡ್ ಕ್ರಿಕೆಟ್ ಹೊಸದಾಗಿ ಒಂದು ಟ್ವೀಟ್ ಮಾಡಿದ್ದು, ಇದು ಕ್ರಿಕೆಟ್ ವಲಯದಲ್ಲಿ ಸಖತ್ ಸೌಂಡ್ ಆಡುತ್ತಿದೆ. ಅಷ್ಟಕ್ಕೂ ಐಸ್​​ಲೆಂಡ್ ಕ್ರಿಕೆಟ್ ಮಾಡಿದ ಈ ಟ್ವೀಟ್ ಏನು..?

ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಕುರಿತು ಐಸ್​​ಲೆಂಡ್ ಕ್ರಿಕೆಟ್ ಟ್ವೀಟ್ ಒಂದನ್ನು ಮಾಡಿದೆ. “ಜೀವನದಲ್ಲಿ ಎಲ್ಲವೂ ಸನ್ನಿವೇಶ ಮತ್ತು ಅದೃಷ್ಟದಿಂದ ಕೂಡಿರುತ್ತದೆ. ಉದಾಹರಣೆಗೆ ಆರ್. ಅಶ್ವಿನ್ ಶ್ರೀಲಂಕಾದಲ್ಲಿ ಹುಟ್ಟಿದ್ದರೆ ಅವರು ಮುತ್ತಯ್ಯ ಮುರಳೀಧರನ್ ರೀತಿಯಲ್ಲಿ ಅನೇಕ ವಿಕೆಟ್​ಗಳನ್ನು ಪಡೆದುಕೊಂಡು ಕ್ರಿಕೆಟ್ ವೃತ್ತಿ ಜೀವನವನ್ನು ಕೊನೆಗೊಳಿಸಬಹುದಿತ್ತು. ಹಾಗೆಯೇ ಡಾನ್ ಬ್ರಾಡ್ಮನ್ ಐಸ್​ಲೆಂಡ್​ನಲ್ಲಿ ಹುಟ್ಟಿದ್ದರೆ ಯಾವುದೇ ಅಂತರರಾಷ್ಟ್ರೀಯ ರನ್ ಗಳಿಸುತ್ತಿರಲಿಲ್ಲ ಬದಲಾಗಿ ಮೀನುಗಾರನಾಗುತ್ತಿದ್ದರು. ಅದೇ ಜೀವನ,” ಎಂದ ಟ್ವೀಟ್ ಮಾಡಿದೆ.

ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಕಮೆಂಟ್​ಗಳು ಬರುತ್ತಿವೆ. ಐಸ್​ಲೆಂಡ್ ಟ್ವಿಟ್ಟರ್ ಖಾತೆಯಿಂದ ಈರೀತಿಯ ಟ್ವೀಟ್​ಗಳು ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಐಸಿಸಿ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾ ಪರ ಅಂಬಟಿ ರಾಯುಡು ಅವರನ್ನು ಕೈಬಿಟ್ಟಾಗ ಕೂಡ ಐಸ್​ಲೆಂಡ್ ಕ್ರಿಕೆಟ್ ಇದಕ್ಕೆ ಪ್ರತಿಕ್ರಿಯಿಸಿತ್ತು.

ವಿಶ್ವಕಪ್ ವೀಕ್ಷಿಸಲು 3D ಕನ್ನಡಕಕ್ಕೆ ಆರ್ಡರ್ ಮಾಡಿದ್ದೇನೆ ಎಂದು ರಾಯುಡು ವ್ಯಂಗ್ಯ ಮಾಡಿ ಹಾಕಿದ್ದ ಟ್ವೀಟ್​ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆಯೂ ಐಸ್​ಲೆಂಡ್ ಕ್ರಿಕೇಟ್​ ಮಂಡಳಿ​ ಉಲ್ಲೇಖ ಮಾಡಿತ್ತು. “ಮಯಾಂಕ್​ ಅಗರ್​ವಾಲ್​ ಬೌಲಿಂಗ್​ನಲ್ಲಿ ಶೇ.72.33 ಸರಾಸರಿ ಹೊಂದಿದ್ದಾರೆ. ಈಗಲಾದರೂ ರಾಯುಡು ತಮ್ಮ 3ಡಿ ಗ್ಲಾಸ್​ಅನ್ನು ತೆಗೆದಿಡಬೇಕು. ಅವರಿಗೋಸ್ಕರ ಸಿದ್ಧಪಡಿಸಿದ ಈ ದಾಖಲೆಗಳನ್ನು ಓದಲು ಅವರಿಗೆ ಸಾಮಾನ್ಯ ಕನ್ನಡಕದ ಅಗತ್ಯತೆ ಇದೆ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ,” ಎಂದು ಐಸ್​ಲೆಂಡ್​ ಕ್ರಿಕೆಟ್​ ಮಂಡಳಿ ಆಹ್ವಾನ ನೀಡಿತ್ತು.

ಅಲ್ಲದೆ ರಾಯುಡುಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಚಾರದಲ್ಲಿ ಲಾಭ ಪಡೆದುಕೊಳ್ಳಲು ಐಸ್​ಲೆಂಡ್​ ಮುಂದಾಗಿತ್ತು. ಈ ಕುರಿತು ವಿಲಕ್ಷಣ ಟ್ವೀಟ್​ ಕೂಡ ಮಾಡಿತ್ತು. “ನೀವು ನಮ್ಮ ದೇಶದ ನಾಗರಿಕತ್ವ ಪಡೆದುಕೊಳ್ಳಿ. ಈ ಮೂಲಕ ಐಸ್​​ಲೆಂಡ್​ ತಂಡವನ್ನು ಪ್ರತಿನಿಧಿಸಿ. ಒಂದೊಮ್ಮೆ ನಿಮಗೆ ವಿಶ್ವಕಪ್​ನಲ್ಲಿ ಅವಕಾಶ ಸಿಕ್ಕರೆ ಭಾರತದ ಪರವಾಗಿ ಆಟವಾಡಿ,” ಎಂದು ಕೋರಿತ್ತು.

KL Rahul: ರಹಾನೆ-ಅಯ್ಯರ್ ಪೈಕಿ ಯಾರಿಗೆ ಸ್ಥಾನ?: ಕಠಿಣ ಪ್ರಶ್ನೆಗೆ ಕೆಎಲ್ ರಾಹುಲ್ ಖಡಕ್ ಉತ್ತರ

RCB New Captain: ಶಾಕಿಂಗ್: ಆರ್​ಸಿಬಿ ತಂಡಕ್ಕೆ ಕ್ಯಾಪ್ಟನ್ ಫಿಕ್ಸ್?: ಹೊಸ ನಾಯಕ ಯಾರು ಗೊತ್ತೇ?

(Iceland Cricket Hilarious Tweet the names of Ravichandran Ashwin and Don Bradman went viral on the micro-blogging site)

Published On - 11:52 am, Sat, 25 December 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು