
ಐಪಿಎಲ್ 2025 (IPL 2025) ರ ಲೀಗ್ ಹಂತದಲ್ಲಿ ಕೆಲವೇ ಪಂದ್ಯಗಳು ಉಳಿದಿವೆ. ಇದರ ನಂತರ, ಪ್ಲೇಆಫ್ ಪಂದ್ಯಗಳು ನಡೆದರೆ ಕೊನೆಯದಾಗಿ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಈ ನಡುವೆ ಭಾರತ ಯುವ ಪಡೆ ಇಂಗ್ಲೆಂಡ್ಗೆ ವಿಮಾನ ಹತ್ತಿದೆ. ವಾಸ್ತವವಾಗಿ ಭಾರತ ಎ ತಂಡವು (India A team) ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬೇಕಾಗಿದೆ. ಆ ಬಳಿಕ ಇದೇ ತಂಡ ಹಿರಿಯ ಭಾರತೀಯ ತಂಡದೊಂದಿಗೆ ಅಭ್ಯಾಸ ಪಂದ್ಯವನ್ನು ಸಹ ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಎ ತಂಡದ ಕೆಲವು ಆಟಗಾರರು ಐಪಿಎಲ್ ಮಧ್ಯದಲ್ಲಿ ಇಂಗ್ಲೆಂಡ್ ತಲುಪಿದ್ದಾರೆ.
ಭಾರತ ಎ ತಂಡ ಇಂದು ಇಂಗ್ಲೆಂಡ್ ತಲುಪಿದೆ. ಈ ಪ್ರವಾಸ ಆರಂಭವಾಗುವ ಮುನ್ನ, ವೇಗಿ ತುಷಾರ್ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಅವರು ತಂಡದ ಅನೇಕ ಸ್ಟಾರ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ತನುಷ್ ಕೋಟ್ಯಾನ್ ಮತ್ತು ರುತುರಾಜ್ ಗಾಯಕ್ವಾಡ್ ಇರುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಳ್ಳುವುದರ ಜೊತೆಗೆ ತುಷಾರ್ ಪಾಂಡೆ, ಈ ಎಲ್ಲಾ ಆಟಗಾರರು ಇಂಗ್ಲೆಂಡ್ ತಲುಪಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಭಾರತ ಎ ತಂಡದ ಈ ಪ್ರವಾಸವು ಮೇ 30 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಮೊದಲ ಪ್ರಥಮ ದರ್ಜೆ ಪಂದ್ಯವು ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿದೆ. ಎರಡನೇ ಪಂದ್ಯ ಜೂನ್ 6 ರಂದು ನಾರ್ಥಾಂಪ್ಟನ್ನಲ್ಲಿ ನಡೆಯಲಿದ್ದು, ಜೂನ್ 13 ರಂದು ಬೆಕೆನ್ಹ್ಯಾಮ್ನಲ್ಲಿ ಹಿರಿಯ ಭಾರತೀಯ ತಂಡದ ವಿರುದ್ಧದ ಇಂಟ್ರಾ-ಸ್ಕ್ವಾಡ್ ಪಂದ್ಯದೊಂದಿಗೆ ಪ್ರವಾಸವು ಕೊನೆಗೊಳ್ಳಲಿದೆ. ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಸರಣಿಯನ್ನು ಆಡಲಿರುವ ಭಾರತೀಯ ಟೆಸ್ಟ್ ತಂಡಕ್ಕೆ ಈ ಪ್ರವಾಸವು ಪ್ರಮುಖ ತಯಾರಿಯಾಗಿದೆ.
IND vs ENG: ಇಂಗ್ಲೆಂಡ್ ವಿರುದ್ಧ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? ಇಲ್ಲಿದೆ ಸಂಭಾವ್ಯ ತಂಡ
ಫೋಟೋದಲ್ಲಿ ಕಾಣುತ್ತಿರುವ ಆಟಗಾರರು ಈ ಪ್ರವಾಸಕ್ಕೆ ಆಯ್ಕೆಯಾದ ತಂಡದ ಭಾಗವಾಗಿದ್ದಾರೆ. ಅಭಿಮನ್ಯು ಈಶ್ವರನ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದ್ದು, ಧ್ರುವ್ ಜುರೆಲ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಭಾರತೀಯ ಟೆಸ್ಟ್ ತಂಡದ ನಿಯಮಿತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಈ ಪ್ರವಾಸದಲ್ಲಿ ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಅಭ್ಯಾಸ ಮಾಡಲು ಅವಕಾಶ ಪಡೆಯಲಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದ ಸರ್ಫರಾಜ್ ಖಾನ್ ಈಗ ಫಿಟ್ ಆಗಿದ್ದು, ತಂಡಕ್ಕೆ ಮರಳುತ್ತಿದ್ದಾರೆ.
ಗಾಯದಿಂದಾಗಿ ಐಪಿಎಲ್ನಿಂದ ಹೊರಬಿದ್ದಿದ್ದ ರುತುರಾಜ್ ಗಾಯಕ್ವಾಡ್ ಕೂಡ ಈ ಪ್ರವಾಸದಲ್ಲಿ ತಂಡದಲ್ಲಿದ್ದಾರೆ. ಪ್ರತಿಭಾನ್ವಿತ ಆಲ್ರೌಂಡರ್ ಆಗಿರುವ ತನುಷ್ ಕೋಟ್ಯಾನ್ ಮತ್ತು ತುಷಾರ್ ಪಾಂಡೆಯಂತಹ ಯುವ ವೇಗದ ಬೌಲರ್ಗಳು ಈ ಪ್ರವಾಸದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ. ಉಳಿದಂತೆ ಐಪಿಎಲ್ ನಡೆಯುತ್ತಿರುವ ಕಾರಣದಿಂದಾಗಿ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಕೆಲವು ಆಟಗಾರರು ಮೊದಲ ಪಂದ್ಯದ ನಂತರವೇ ತಂಡವನ್ನು ಸೇರಿಕೊಳ್ಳುತ್ತಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ