AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಓವಲ್ ಟೆಸ್ಟ್ ಗೆದ್ದ ಭಾರತ; ಆಂಗ್ಲ ಬ್ಯಾಟ್ಸ್‌ಮನ್​ಗಳ ಹೆಡೆಮುರಿ ಕಟ್ಟಿದ ಕೊಹ್ಲಿ ಬೌಲರ್ಸ್

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದುಬೀಗಿದೆ. ಕೊಹ್ಲಿ ಬೌಲರ್​ಗಳ ಹೋರಾಟಕ್ಕೆ ಈ ಗೆಲುವು ಭಾರತಕ್ಕೆ ಒಲಿದಿದೆ.

IND vs ENG: ಓವಲ್ ಟೆಸ್ಟ್ ಗೆದ್ದ ಭಾರತ; ಆಂಗ್ಲ ಬ್ಯಾಟ್ಸ್‌ಮನ್​ಗಳ ಹೆಡೆಮುರಿ ಕಟ್ಟಿದ ಕೊಹ್ಲಿ ಬೌಲರ್ಸ್
Virat Kohli Team India
TV9 Web
| Updated By: ಪೃಥ್ವಿಶಂಕರ|

Updated on: Sep 06, 2021 | 9:08 PM

Share

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದುಬೀಗಿದೆ. ಕೊಹ್ಲಿ ಬೌಲರ್​ಗಳ ಹೋರಾಟಕ್ಕೆ ಈ ಗೆಲುವು ಭಾರತಕ್ಕೆ ಒಲಿದಿದೆ. ಒಂದು ಹಂತದಲ್ಲಿ ಇಂಗ್ಲೆಂಡ್​ನತ್ತ ವಾಲಿದ್ದ ಪಂದ್ಯವನ್ನು ಟೀಂ ಇಂಡಿಯಾ ಬೌಲರ್​ಗಳು ತಮ್ಮ ಬಿಗಿಯಾದ ಬೌಲಿಂಗ್​ನಿಂದ ಭಾರತದ ಕಡೆಗೆ ತಿರುಗಿಸಿದರು. ಅದರಲ್ಲೂ ಯಾರ್ಕರ್ ಕಿಂಗ್ ಬುಮ್ರಾ ತೆಗೆದುಕೊಂಡ ಎರಡು ವಿಕೆಟ್​ಗಳಾದ ಓಲಿ ಪೋಪ್ ಹಾಗೂ ಜಾನಿ ಬೈರ್​ಸ್ಟೋ ವಿಕೆಟ್​ಗಳು ಪಂದ್ಯದ ದಿಕ್ಕನೆ ಬದಲಿಸಿದವು. ಇದು ಸಾಲದೆಂಬಂತೆ ಭಾರತಕ್ಕೆ ಮುಳುವಾಗಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್​ನನ್ನು ಶಾರ್ದೂಲ್ ಠಾಕೂರ್ ಬಲಿ ಪಡೆದ ನಂತರ ಗೆಲುವು ಬಾಗಶಃ ಭಾರತದ ಬತ್ತಳಿಕೆಗೆ ಬಂದು ಬಿದ್ದಿತು.

ಭಾರತದ ಇನ್ನಿಂಗ್ಸ್‌ ಹೀಗಿತ್ತು ಈ ಮೊದಲು, ರೋಹಿತ್ ಶರ್ಮಾ (127) ಮತ್ತು ಚೇತೇಶ್ವರ ಪೂಜಾರ (61) ಅವರ ಇನ್ನಿಂಗ್ಸ್ ಮೂರನೇ ದಿನದ ಭಾರತೀಯ ಇನ್ನಿಂಗ್ಸ್‌ನ ಹೈಲೈಟ್ ಆಗಿದ್ದರೆ, ನಾಲ್ಕನೇ ದಿನ, ಶಾರ್ದೂಲ್ ಠಾಕೂರ್ ಮತ್ತು ರಿಷಭ್ ಪಂತ್ ಏಳನೇ ವಿಕೆಟ್ ಗೆ 100 ರನ್ ಜೊತೆಯಾಟವನ್ನು ಹಂಚಿಕೊಂಡರು. ತಂಡವನ್ನು ಪ್ರಬಲ ಮುನ್ನಡೆಗೆ ಕೊಂಡೊಯ್ಯದರು. ಭಾರತವನ್ನು ಬಲಿಷ್ಠ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊಡುಗೆ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 57 ರನ್ ಗಳಿಸಿದ ಠಾಕೂರ್ 72 ಎಸೆತಗಳಲ್ಲಿ 60 ರನ್ ಗಳಿಸಿದ್ದು ಇದರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು.

ಪಂತ್ 106 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 50 ರನ್ ಗಳಿಸಿದರು. ಇಬ್ಬರೂ ಏಳನೇ ವಿಕೆಟ್​ಗೆ 100 ರನ್ ಜೊತೆಯಾಟವನ್ನು ಹಂಚಿಕೊಂಡರು. ಉಮೇಶ್ ಯಾದವ್ 25 ಮತ್ತು ಜಸ್ಪ್ರೀತ್ ಬುಮ್ರಾ 24 ರನ್​ಗಳ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಮೂರು ವಿಕೆಟ್ ಪಡೆದರೆ, ಒಲ್ಲಿ ರಾಬಿನ್ಸನ್ ಮತ್ತು ಮೊಯೀನ್ ಅಲಿ ತಲಾ ಎರಡು ವಿಕೆಟ್ ಪಡೆದರು.

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?