AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tilak Varma: ದೇಶಕ್ಕಾಗಿ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ: ಸಿಂಹದಂತೆ ಘರ್ಜಿಸಿದ ತಿಲಕ್ ವರ್ಮಾ

India vs Pakistan, Asia Cup Final: ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ತಿಲಕ್ ವರ್ಮಾ ಅದ್ಭುತ ಇನ್ನಿಂಗ್ಸ್ ಆಡಿದರು. ಈಗ, ತವರಿಗೆ ಹಿಂದಿರುಗಿದ ನಂತರ, ತಿಲಕ್ ವರ್ಮಾ ಮಹತ್ವದ ಹೇಳಿಕೆ ನೀಡಿದ್ದು, ಸಮಯ ಬಂದರೆ, ನನ್ನ ದೇಶಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

Tilak Varma: ದೇಶಕ್ಕಾಗಿ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ: ಸಿಂಹದಂತೆ ಘರ್ಜಿಸಿದ ತಿಲಕ್ ವರ್ಮಾ
Tilak Varma
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 01, 2025 | 9:24 AM

Share

ಬೆಂಗಳೂರು (ಅ. 01): ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಕಾರಣವಾಗಿದ್ದು 21 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Varma). ತಮ್ಮ ಶಾಂತ ಮತ್ತು ಎಚ್ಚರಿಕೆಯ ಬ್ಯಾಟಿಂಗ್​ನಿಂದ ತಂಡವನ್ನು ಗೆಲುವಿನತ್ತ ಸಾಗಿಸಿದರು. ತಿಲಕ್ ಅವರ ಅಜೇಯ 69 ರನ್‌ಗಳು ಭಾನುವಾರ ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಭಾರತವನ್ನು ಐದು ವಿಕೆಟ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. ಇದೀಗ ದುಬೈನಿಂದ ಭಾರತಕ್ಕೆ ಬಂದ ನಂತರ ತಿಲಕ್ ವರ್ಮಾ ಕೆಲ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಏಷ್ಯಾ ಕಪ್ ಬಗ್ಗೆ ತಿಲಕ್ ವರ್ಮಾ ಹೇಳಿದ್ದೇನು?

“ಆರಂಭದಲ್ಲಿ ಸ್ವಲ್ಪ ಒತ್ತಡ ಮತ್ತು ಉದ್ವಿಗ್ನತೆ ಇತ್ತು, ಆದರೆ ನಾನು ನನ್ನ ದೇಶವನ್ನು ನೆನೆದು ಅದಕ್ಕಾಗಿ ಗೆಲ್ಲಲು ಬಯಸಿದ್ದೆ. ನಾನು ಒತ್ತಡಕ್ಕೆ ಮಣಿದರೆ, ನಾನು ನನ್ನನ್ನು ಮತ್ತು ದೇಶದ 1.4 ಬಿಲಿಯನ್ ಜನರನ್ನು ನಿರಾಸೆಗೊಳಿಸುತ್ತೇನೆ ಎಂದು ನನಗೆ ತಿಳಿದಿತ್ತು” ಎಂದು ಹೇಳಿದರು. “ಆರಂಭಿಕ ದಿನಗಳಲ್ಲಿ ನನ್ನ ತರಬೇತುದಾರರಿಂದ ಕಲಿತ ಅಂಶಗಳನ್ನು ನಾನು ಅನುಸರಿಸಿದೆ. ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನ ಆಟಗಾರರು ನಮ್ಮ ವಿರುದ್ಧ ತುಂಬಾ ಆಕ್ರಮಣಕಾರಿಯಾದರು. ಆದರೆ, ನಾವು ಆಟವನ್ನು ಆಡಬೇಕಾದ ರೀತಿಯಲ್ಲಿ ಆಡುವ ಮೂಲಕ ಪ್ರತಿಕ್ರಿಯಿಸಿದ್ದೇವೆ” ಎಂದು ಅವರು ಹೇಳಿದರು.

“ನಾವು ಮೂರು ವಿಕೆಟ್‌ಗಳನ್ನು ಮೊದಲೇ ಕಳೆದುಕೊಂಡೆವು ಮತ್ತು ವಾತಾವರಣವು ಸಾಕಷ್ಟು ಬಿಸಿಯಾಗಿತ್ತು. ನಾನು ಬೇಗನೆ ಬ್ಯಾಟಿಂಗ್ ಮಾಡಲು ಬಂದೆ, ಆದರೆ ನಾನು ಯಾವುದೇ ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ತಂಡ ಅಥವಾ ದೇಶವನ್ನು ನಿರಾಸೆಗೊಳಿಸಲಿಲ್ಲ. ಪಂದ್ಯದ ಸಮಯದಲ್ಲಿ, ನನ್ನ ಗಮನ ಮೂಲಭೂತ ವಿಷಯಗಳ ಮೇಲೆ ಇತ್ತು ಮತ್ತು ನಾನು ಅವರಿಗೆ ಪ್ರತಿಕ್ರಿಯಿಸಲು ಬಯಸಲಿಲ್ಲ. ನಾನು ಏನು ಹೇಳಬೇಕೋ ಅದನ್ನು ಪಂದ್ಯದ ನಂತರ ಹೇಳಿದೆ. ಪಂದ್ಯದಲ್ಲಿ ನನಗೆ ವಿವರಿಸಲು ಸಾಧ್ಯವಾಗದ ಬಹಳಷ್ಟು ವಿಷಯಗಳು ನಡೆಯುತ್ತಿದ್ದವು. ಇದು ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಸಂಭವಿಸುತ್ತದೆ, ಆದರೆ ನಮ್ಮ ಗಮನ ಪಂದ್ಯವನ್ನು ಗೆಲ್ಲುವುದರ ಮೇಲೆ ಇತ್ತು” ಎಂದು ತಿಲಕ್ ಹೇಳಿದರು.

ಇದನ್ನೂ ಓದಿ
Image
ಟ್ರೋಫಿ-ಪದಕಗಳನ್ನು ಹಿಂದಿರುಗಿಸುತ್ತೇನೆ, ಆದರೆ..: ಷರತ್ತು ಹಾಕಿದ ಮೊಹ್ಸಿನ್
Image
ಟೀಮ್ ಇಂಡಿಯಾಗೆ ಬಿಗ್ ಶಾಕ್: ಸ್ಟಾರ್ ಆಟಗಾರ 4 ವಾರ ಕಣಕ್ಕಿಳಿಯುವಂತಿಲ್ಲ..!
Image
ಟಾಸ್ ಗೆದ್ದ ಶ್ರೀಲಂಕಾ: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ
Image
IPL 2026: RCB ತಂಡ ಮಾರಾಟ..?

India vs Pakistan: ನಾನು ಟ್ರೋಫಿ-ಪದಕಗಳನ್ನು ಹಿಂದಿರುಗಿಸುತ್ತೇನೆ, ಆದರೆ..: ಭಾರತಕ್ಕೆ ಷರತ್ತು ಹಾಕಿದ ಮೊಹ್ಸಿನ್

“ಕೊನೆಯ ಓವರ್‌ನಲ್ಲಿ ನಾನು ಒತ್ತಡದಲ್ಲಿರಲಿಲ್ಲ. ಪಂದ್ಯ ಗೆಲ್ಲುತ್ತೇನೆಂದು ನನಗೆ ತಿಳಿದಿತ್ತು. ನಾನು ನನ್ನ ದೇಶದ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ ಮತ್ತು ಒಂದೊಂದೇ ತಂತ್ರಗಳನ್ನು ಹೆಣೆಯುತ್ತಿದ್ದೆ. ಸಮಯ ಬಂದರೆ, ನನ್ನ ದೇಶಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದನಿದ್ದೇನೆ” ಎಂದು ಅವರು ಹೇಳಿದರು.

ತಿಲಕ್ ಈ ಇನ್ನಿಂಗ್ಸ್ ಅನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದೆಂದು ಕರೆದರು. ಅವರು ಹೇಳಿದರು, “ನಾನು ಇದನ್ನು ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದೆಂದು ಕರೆಯುತ್ತೇನೆ. ಇದರ ಹೊರತಾಗಿ, ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಾನು ಅಜೇಯ 72 ರನ್ ಗಳಿಸಿದೆ, ಅದು ಉತ್ತಮ ಇನ್ನಿಂಗ್ಸ್ ಆಗಿತ್ತು. ಏಷ್ಯಾ ಕಪ್ ಆಡುವುದು ಮತ್ತು ಒತ್ತಡದಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್ ಆಡುವುದು ಒಂದು ಉತ್ತಮ ಭಾವನೆಯಾಗಿತ್ತು. ನಾನು ಈ ಇನ್ನಿಂಗ್ಸ್ ಅನ್ನು ನನ್ನ ಅತ್ಯುತ್ತಮ ಇನ್ನಿಂಗ್ಸ್ ಎಂದು ಕರೆಯುತ್ತೇನೆ” ಎಂದು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ