AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 Asia Cup, 2023: ರಾಜ್ ಲಿಂಬಾನಿ ಮಿಂಚಿನ ಬೌಲಿಂಗ್: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್

India U19 vs Nepal U19: ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರಾಜ್ ಲಿಂಬಾನಿ 9.1 ಓವರ್​ಗಳಲ್ಲಿ 13 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಲಿಂಬಾನಿಗೆ ಉತ್ತಮ ಸಾಥ್ ನೀಡಿದ ಆರಾಧ್ಯ ಶುಕ್ಲ 2 ವಿಕೆಟ್ ಪಡೆದರೆ, ಅರ್ಶಿನ್ ಕುಲ್ಕರ್ಣಿ ಒಂದು ವಿಕೆಟ್ ಕಬಳಿಸಿದರು.

U19 Asia Cup, 2023: ರಾಜ್ ಲಿಂಬಾನಿ ಮಿಂಚಿನ ಬೌಲಿಂಗ್: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್
Raj Limbani
TV9 Web
| Updated By: ಝಾಹಿರ್ ಯೂಸುಫ್|

Updated on: Dec 12, 2023 | 3:58 PM

Share

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾಕಪ್ (U19 Asia Cup, 2023)​ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ರಾಜ್ ಲಿಂಬಾನಿ ಮಾರಕ ದಾಳಿಗೆ ತತ್ತರಿಸಿತು. ಐದನೇ ಓವರ್​ನಲ್ಲಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಲಿಂಬಾನಿ, ಆ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಗಮನ ಸೆಳೆದರು.

ಕರಾರುವಾಕ್ ದಾಳಿಯೊಂದಿಗೆ ಮಿಂಚಿದ ರಾಜ್ ಲಿಂಬಾನಿ ನೇಪಾಳ ತಂಡದ ಯಾವುದೇ ಬ್ಯಾಟ್ಸ್​ಮನ್​ ಅನ್ನು ಎರಡಂಕಿ ಗಳಿಸಲು ಬಿಡಲಿಲ್ಲ ಎಂಬುದು ವಿಶೇಷ. ಪರಿಣಾಮ ನೇಪಾಳ ತಂಡವು 22.1 ಓವರ್​ಗಳಲ್ಲಿ 52 ರನ್​ಗಳಿಸಿ ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರಾಜ್ ಲಿಂಬಾನಿ 9.1 ಓವರ್​ಗಳಲ್ಲಿ 13 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಲಿಂಬಾನಿಗೆ ಉತ್ತಮ ಸಾಥ್ ನೀಡಿದ ಆರಾಧ್ಯ ಶುಕ್ಲ 2 ವಿಕೆಟ್ ಪಡೆದರೆ, ಅರ್ಶಿನ್ ಕುಲ್ಕರ್ಣಿ ಒಂದು ವಿಕೆಟ್ ಕಬಳಿಸಿದರು.

ಕೇವಲ 57 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾದ ಅರ್ಶಿನ್ ಕುಲ್ಕರ್ಣಿ (40) ಹಾಗೂ ಆದರ್ಶ್ ಸಿಂಗ್ (13) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ 7.1 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್​ಗಳಿಸಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು.

ಭಾರತ ಅಂಡರ್ 19 ಪ್ಲೇಯಿಂಗ್ ಇಲೆವೆನ್: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ಉದಯ್ ಸಹರಾನ್ (ನಾಯಕ), ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಎ ಅವಿನಾಶ್ (ವಿಕೆಟ್ ಕೀಪರ್), ರಾಜ್ ಲಿಂಬಾನಿ, ಆರಾಧ್ಯ ಶುಕ್ಲಾ, ಮುರುಗನ್ ಅಭಿಷೇಕ್, ಸೌಮಿ ಪಾಂಡೆ.

ಇದನ್ನೂ ಓದಿ: IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು

ನೇಪಾಳ ಅಂಡರ್ 19 ಪ್ಲೇಯಿಂಗ್ ಇಲೆವೆನ್: ದೇವ್ ಖಾನಲ್ (ನಾಯಕ), ಅರ್ಜುನ್ ಕುಮಾಲ್, ದೀಪಕ್ ಪ್ರಸಾದ್ ದುಮ್ರೆ, ಹೇಮಂತ್ ಧಾಮಿ, ಉತ್ತಮ್ ರಂಗು ಥಾಪಾ ಮಗರ್ (ವಿಕೆಟ್ ಕೀಪರ್) , ದೀಪೇಶ್ ಕಾಂಡೇಲ್, ಆಕಾಶ್ ಚಂದ್, ಸುಭಾಷ್ ಭಂಡಾರಿ, ದೀಪಕ್ ಬೋಹರಾ, ಗುಲ್ಸನ್ ಝಾ, ದೀಪಕ್ ಬೋಹರಾ.

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು