AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಟೀಂ ಇಂಡಿಯಾದಲ್ಲಿ ಏಕದಿನ ನಾಯಕತ್ವ ಬಿಕ್ಕಟ್ಟು; ಆಫ್ರಿಕಾ ಪ್ರವಾಸಕ್ಕೆ ಏಕದಿನ ತಂಡ ಆಯ್ಕೆಗೆ ಕಂಟಕ!

IND vs SA: ODI ನಾಯಕತ್ವವು ಬಹಳ ಸೂಕ್ಷ್ಮ ವಿಷಯವಾಗಿದೆ. ರೋಹಿತ್ ಶರ್ಮಾ ಅವರನ್ನು ಟಿ 20 ಜೊತೆಗೆ ಏಕದಿನ ನಾಯಕನನ್ನಾಗಿ ಮಾಡಬೇಕು ಎಂದು ಕೆಲವರ ವಾದವಾಗಿದೆ.

IND vs SA: ಟೀಂ ಇಂಡಿಯಾದಲ್ಲಿ ಏಕದಿನ ನಾಯಕತ್ವ ಬಿಕ್ಕಟ್ಟು; ಆಫ್ರಿಕಾ ಪ್ರವಾಸಕ್ಕೆ ಏಕದಿನ ತಂಡ ಆಯ್ಕೆಗೆ ಕಂಟಕ!
ಭಾರತ ತಂಡ
TV9 Web
| Edited By: |

Updated on:Dec 08, 2021 | 7:03 PM

Share

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಆಯ್ಕೆದಾರರಿಗೆ ಕಷ್ಟಕರವಾಗಿದೆ. ಇದರಿಂದಾಗಿ ಏಕದಿನ ತಂಡದ ಆಯ್ಕೆ ಸ್ವಲ್ಪ ತಡವಾಗುವ ಎಲ್ಲಾ ಲಕ್ಷಣಗಳು ಕಾಣತೊಡಗಿದೆ. ಆದರೆ, ಟೆಸ್ಟ್ ತಂಡಕ್ಕೆ ತಂಡವನ್ನು ಪ್ರಕಟಿಸಲಾಗುವುದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಯಾರನ್ನು ನಾಯಕನನ್ನಾಗಿ ಮಾಡಬೇಕು ಎಂಬುದೇ ಏಕದಿನ ತಂಡದ ಆಯ್ಕೆಗೆ ಸಮಸ್ಯೆಯಾಗಿದೆ. ಇತ್ತೀಚೆಗಷ್ಟೇ ವಿರಾಟ್ ಟಿ20 ತಂಡದ ನಾಯಕತ್ವ ತೊರೆದಿದ್ದು, ರೋಹಿತ್ ಈ ಸ್ಥಾನಕ್ಕೆ ಬಂದಿದ್ದಾರೆ. ಆದರೆ ಏಕದಿನ ತಂಡದ ನಾಯಕತ್ವ ವಿರಾಟ್ ಕೈನಲ್ಲಿದೆ. ಹೀಗಿರುವಾಗ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಬೇಕೋ ಅಥವಾ ಅವರನ್ನೇ ಹುದ್ದೆಯಿಂದ ಕೆಳಗಿಳಿಸಬೇಕೋ ಎಂಬ ಸಮಸ್ಯೆ ತಲೆದೋರಿದೆ. ಸಾಮಾನ್ಯವಾಗಿ ಟಿ-20-ಒಡಿಐ ನಾಯಕರೂ ಒಂದೇ ಆಗಿರುತ್ತಾರೆ. ಆದರೆ ಟೆಸ್ಟ್ ತಂಡದ ನೇತೃತ್ವವನ್ನು ಬೇರೆ ವ್ಯಕ್ತಿ ವಹಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ODI ನಾಯಕತ್ವವು ಬಹಳ ಸೂಕ್ಷ್ಮ ವಿಷಯವಾಗಿದೆ. ರೋಹಿತ್ ಶರ್ಮಾ ಅವರನ್ನು ಟಿ 20 ಜೊತೆಗೆ ಏಕದಿನ ನಾಯಕನನ್ನಾಗಿ ಮಾಡಬೇಕು ಎಂದು ಕೆಲವರ ವಾದವಾಗಿದೆ. ಆದರೆ ಇದಕ್ಕಾಗಿ ಆಯ್ಕೆದಾರರು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ತಿಳಿಯಲು ಅವರೊಂದಿಗೆ ಮಾತನಾಡಬೇಕಾಗುತ್ತದೆ. ರೋಹಿತ್ ಅವರ ಪಾತ್ರದ ಬಗ್ಗೆ ಸ್ಪಷ್ಟತೆ ಬಯಸಿರುವುದರಿಂದ ಈ ಪರಿಸ್ಥಿತಿಯನ್ನು ಸಹ ರೋಹಿತ್ ಅವರೊಂದಿಗೆ ಚರ್ಚಿಸಲಾಗುವುದು. ಶಿಖರ್ ಧವನ್ ಏಕದಿನ ತಂಡಕ್ಕೆ ಮರಳುವುದು ನಿಶ್ಚಿತ ಎಂದು ನಂಬಲಾಗಿದೆ.

ಭಾರತವು ಜನವರಿ 19 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಬೇಕಾಗಿದೆ ಮತ್ತು ಅದು ಇನ್ನೂ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಅದೇ ಸಮಯದಲ್ಲಿ ವಿಜಯ್ ಹಜಾರೆ ಟ್ರೋಫಿ ಕೂಡ ನಡೆಯುತ್ತಿದೆ. ಆಯ್ಕೆದಾರರು ಕೂಡ ಅಲ್ಲಿ ಆಡುವ ಪ್ರತಿಭೆಯ ಮೇಲೆ ಕಣ್ಣೀಡಲಿದ್ದಾರೆ. ಯಾವಾಗ ಟೀಮ್ ಇಂಡಿಯಾದಲ್ಲಿ ಆಡುವುದಿಲ್ಲವೋ ಆಗ ದೇಶೀಯ ಟೂರ್ನಿಯ ಮೇಲೆ ಆಯ್ಕೆಗಾರರ ದೃಷ್ಟಿ ನೆಟ್ಟಿರುತ್ತದೆ. ಇನ್ನು ಧವನ್ ಅವರು ಸ್ಥಿರವಾಗಿ ಆಡುತ್ತಿದ್ದಾರೆ. ಕಳೆದ ಎರಡು ಸರಣಿಗಳಲ್ಲಿಯೂ ಅವರು ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ದೊಡ್ಡ ಪಡೆ ತೆರಳಲಿದೆ. ಹಿರಿಯರನ್ನು ಹೊರಗಿಡುವುದು ಅವರ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತದೆ.

ಟೆಸ್ಟ್ ತಂಡ ಡಿಸೆಂಬರ್ 16 ರಂದು ಹೊರಡಲಿದೆ ಅದೇ ಸಮಯದಲ್ಲಿ, ಟೆಸ್ಟ್ ಸರಣಿಗಾಗಿ, ಭಾರತ ತಂಡವು ಡಿಸೆಂಬರ್ 16 ರಂದು ಹೊರಡಲಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನ್ಯೂಜಿಲೆಂಡ್ ಸರಣಿಯಲ್ಲಿ ವಿಶ್ರಾಂತಿ ಪಡೆದ ಆಟಗಾರರೊಂದಿಗೆ ಮಾತನಾಡಲು ಬಯಸುತ್ತಾರೆ. ಅಂತಹ ಆಟಗಾರರಲ್ಲಿ ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮುಂತಾದ ಹೆಸರುಗಳಿವೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಯಿತು ಆದರೆ ಅವರು T20 ಸರಣಿಯ ಭಾಗವಾಗಿದ್ದರು.

Published On - 7:02 pm, Wed, 8 December 21