AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್​ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ

IPL 2022 | CSK vs MI: ಎಂಎಸ್ ಧೋನಿ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿರ್ವಹಿಸಿ, ಗೆಲ್ಲೇಬೇಕಾಗಿದ್ದ ಪಂದ್ಯದಲ್ಲಿ ತಂಡವನ್ನು ಜಯದ ದಡ ಸೇರಿಸಿದ್ದಾರೆ. ಸಿಎಸ್​ಕೆ ಮಾಜಿ ನಾಯಕನ ಭರ್ಜರಿ ಇನ್ನಿಂಗ್ಸ್ ಮತ್ತೊಮ್ಮೆ ಕ್ರಿಕೆಟ್ ಪ್ರಿಯರ ಮನಗೆದ್ದಿದೆ.

MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್​ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ
ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಬ್ಯಾಟಿಂಗ್ ವೈಖರಿ (Credits: IPL/Twitter)
TV9 Web
| Updated By: shivaprasad.hs|

Updated on:Apr 22, 2022 | 8:02 AM

Share

ವಿಶ್ವ ಕಂಡ ಅತ್ಯುತ್ತಮ ಫಿನಿಶರ್​​ಗಳಲ್ಲಿ ಒಬ್ಬರು ಎಂದು ಖ್ಯಾತರಾಗಿರುವ ಧೋನಿಗೆ (MS Dhoni) ಈಗ 40 ವರ್ಷ. ಕಳೆದ ಐಪಿಎಲ್​ ಸಂದರ್ಭದಲ್ಲಿ ಅವರಲ್ಲಿ ಇನ್ನೆಷ್ಟು ಬ್ಯಾಟಿಂಗ್ ಉಳಿದಿದೆ ಎಂಬುದು ದೊಡ್ಡ ಚರ್ಚೆಯಾಗಿತ್ತು. ಧೋನಿಗೆ ಐಪಿಎಲ್​ನಿಂದಲೂ ನಿವೃತ್ತಿ ಹೊಂದುವಂತೆ ಹಲವರು ಕಾಲೆಳೆದಿದ್ದರು. ಆದರೆ ಈ ಐಪಿಎಲ್​ನ ಆರಂಭಿಕ ಪಂದ್ಯದಲ್ಲೇ ದಂಡವನ್ನು ಕುಸಿತದಿಂದ ಕಾಪಾಡಿದ್ದ ಧೋನಿ ಕಮ್​ಬ್ಯಾಕ್ ಸೂಚನೆ ನೀಡಿದ್ದರು. ಇದೀಗ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿರ್ವಹಿಸಿ, ಗೆಲ್ಲೇಬೇಕಾಗಿದ್ದ ಪಂದ್ಯದಲ್ಲಿ ತಂಡವನ್ನು ಜಯದ ದಡ ಸೇರಿಸಿದ್ದಾರೆ. ಗುರುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022ರ (IPL 2022) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲುಬ್ಯಾಟ್ ಮಾಡಿದ ಮುಂಬೈ ಮುಕೇಶ್ ಚೌಧರಿ ದಾಳಿಗೆ ತತ್ತರಿಸಿತು. ಒಟ್ಟಾರೆ ತಂಡವು 7 ವಿಕೆಟ್ ನಷ್ಟಕ್ಕೆ 155 ರನ್​ಗಳ ಸಾಧಾರಣ ಮೊತ್ತ ಪೇರಿಸಿತು.

ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ರುತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರೆ, ಉಳಿದ ಬ್ಯಾಟರ್​ಗಳು ದೊಡ್ಡ ಜತೆಯಾಟ ನೀಡಲಿಲ್ಲ. ರಾಬಿನ್ ಉತ್ತಪ್ಪ 25 ಎಸೆತಗಳಲ್ಲಿ 30 ರನ್​ ಗಳಿಸಿದರೆ, ಉತ್ತಮ ಆಟವಾಡಿದ ಅಂಬಾಟಿ ರಾಯುಡು 35 ಎಸೆತಗಳಲ್ಲಿ 40 ರನ್ ಗಳಿಸಿದರು. ಜಡೇಜಾ ಈ ಪಂದ್ಯದಲ್ಲೂ ಸದ್ದು ಮಾಡಲಿಲ್ಲ. ಕೊನೆಯ 18 ಎಸೆತಗಳಲ್ಲಿ ಚೆನ್ನೈಗೆ ಗೆಲ್ಲಲು 42 ರನ್​ಗಳ ಅವಶ್ಯಕತೆ ಇತ್ತು. ಆದರೆ ತಂಡದಲ್ಲಿದ್ದ ಬ್ಯಾಟರ್​ಗಳ ಫಾರ್ಮ್ ನೋಡಿ, ಚೆನ್ನೈನಿಂದ ಪಂದ್ಯ ಕೈತಪ್ಪಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ಯೋಚನೆಯನ್ನು ಮತ್ತೆ ತಲೆಕೆಳಗಾಗಿಸಿದ್ದು ಎಂಎಸ್ ಧೋನಿ!

ಧೋನಿ- ಪ್ರಿಟೋರಿಸ್ ಬ್ಯಾಟಿಂಗ್; ಪಂದ್ಯ ಗೆಲ್ಲಿಸಿದ ಎಂಎಸ್:

ನಿರ್ಣಾಯಕವಾಗಿದ್ದ 18ನೇ ಓವರ್​ನಲ್ಲಿ ಪ್ರಿಟೋರಿಸ್ ಒಂದು ಸಿಕ್ಸ್ ಬಾರಿಸಿದರೆ, ಧೋನಿ ಒಂದು ಬೌಂಡರಿ ಹೊಡೆದರು. ಒಟ್ಟಾರೆ ಆ ಓವರ್​ನಲ್ಲಿ 14 ರನ್​ಗಳನ್ನು ತಂಡ ಗಳಿಸಿತು. ಪಂದ್ಯ ಗೆಲ್ಲಲು ಇನ್ನೂ 29 ರನ್​ಗಳ ಅವಶ್ಯಕತೆ ಇತ್ತು. 19ನೇ ಓವರ್​ನಲ್ಲಿ ಎರಡು ಫೋರ್ ಬಾರಿಸಿದ ಪ್ರಿಟೋರಿಸ್ 11 ರನ್ ಗಳಿಸಿದರು. ಕೊನೆಯ ಓವರ್​ನಲ್ಲಿ 6 ಎಸೆತಗಳಲ್ಲಿ 17 ರನ್​ಗಳು ಬೇಕಿತ್ತು. ಆದರೆ ವಿಶ್ವದ ಬೆಸ್ಟ್ ಫಿನಿಶರ್ ನಾನ್ ಸ್ಟ್ರೈಕರ್​ ಎಂಡ್​ನಲ್ಲಿದ್ದರು.

ನಾಟಕೀಯವಾಗಿದ್ದ 20ನೇ ಓವರ್:

ಅಂತಿಮ ಓವರ್​ನಲ್ಲಿ ಚೆನ್ನೈಗೆ ಗೆಲ್ಲಲು ಬರೋಬ್ಬರಿ 17 ರನ್​ಗಳು ಬೇಕಿತ್ತು. ಕ್ರೀಸ್​ನಲ್ಲಿದ್ದುದು ಪ್ರಿಟೋರಿಸ್. ಮೊದಲ ಎಸೆತದಲ್ಲೇ ಜಯದೇವ್ ಉನಾದ್ಕತ್ ಎಸೆತದಲ್ಲಿ ಪ್ರಿಟೋರಿಸ್ ಎಲ್​ಬಿಡಬ್ಲ್ಯೂ ಆದರು. ಮುಂಬೈ ಇದಕ್ಕೆ ರಿವ್ಯೂ ಸಹಾಯ ಪಡೆಯಿತು. ನಂತರ ಕ್ರೀಸ್​ಗೆ ಬಂದ ಬ್ರಾವೋ ಸಿಂಗಲ್ ತೆಗೆದರು. ಆಗ ಧೋನಿ ಸ್ಟ್ರೈಕ್​ಗೆ ಬಂದರು. 4 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ ಇತ್ತು. ಎಲ್ಲರೂ ಮತ್ತೊಮ್ಮೆ ಹಳೆಯ ಧೋನಿಯ ನಿರೀಕ್ಷೆಯಲ್ಲಿದ್ದರು. ಎಂಎಸ್ ಆ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.

19ನೇ ಓವರ್​ನ 3ನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಧೋನಿ, ಮುಂದಿನ ಎಸೆತವನ್ನು ಬೌಂಡರಿಗೆ ಕಳಿಸಿದರು. 5ನೇ ಎಸೆತದಲ್ಲಿ 2 ರನ್​ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ ಎಸೆತದಲ್ಲಿ ಗೆಲ್ಲಲು ಬೌಂಡರಿ ಗಳಿಸಲೇಬೇಕಿತ್ತು. ಲೋ ಫುಲ್​ಟಾಸ್ ಬಾಲ್ ಹಾಕಿದ ಉನದ್ಕತ್ ಎಸೆತವನ್ನು ಧೋನಿ ಬೌಂಡರಿ ಸಿಡಿಸಿ ತಂಡವನ್ನು ಜಯದ ದಡ ಸೇರಿಸಿದರು.

ಕೊನೆಯ ಓವರ್​ನಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಹೇಗಿತ್ತು? ಇಲ್ಲಿದೆ ನೋಡಿ

ಈ ಪಂದ್ಯದ ಮೂಲಕ ಮುಂಬೈ ಇದುವರೆಗೆ ಆಡಿದ ಎಲ್ಲಾ 7 ಪಂದ್ಯಗಳನ್ನೂ ಸೋತಿದೆ. ಪಂದ್ಯಾವಳಿಯ ಮೊದಲ ಏಳು ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ ಮುಂಬೈ ಇಂಡಿಯನ್ಸ್. ಈ ನಡುವೆ 7 ಪಂದ್ಯಗಳಿಂದ 2 ಜಯ ಗಳಿಸಿರುವ ಚೆನ್ನೈ, ಮುಂದಿನ ಪಂದ್ಯಗಳತ್ತ ಗಮನಹರಿಸಿದೆ.

ಇದನ್ನೂ ಓದಿ: IPL 2022: ಸೊನ್ನೆ ಸುತ್ತುವ ಮೂಲಕ ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ

MI vs CSK Highlights, IPL 2022: ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಿಸಿದ ಧೋನಿ; ಮುಂಬೈಗೆ ಸತತ 7ನೇ ಸೋಲು

Published On - 7:52 am, Fri, 22 April 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್