AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025 Rain Rules: ಐಪಿಎಲ್ ಫ್ಯಾನ್ಸ್​ಗೆ ಬಂಪರ್ ಸುದ್ದಿ: ಬಿಸಿಸಿಐ ಹೊಸ ನಿಯಮ ಜಾರಿ

IPL 2025: ಐಪಿಎಲ್ 2025 ಪ್ಲೇ ಆಫ್ ಪಂದ್ಯಗಳ ಸಮಯದಲ್ಲಿ ಮಳೆಯಿಂದಾಗಿ ಆಟಕ್ಕೆ ಅಡ್ಡಿಯುಂಟಾದರೆ, ಅದಕ್ಕೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಈ ಹಿಂದಿನ ಪಂದ್ಯಗಳಿಗೆ, ಮಳೆ ಅಡ್ಡಿಪಡಿಸಿದರೆ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು, ಆದರೆ ಈಗ ಅದನ್ನು 120 ನಿಮಿಷಗಳಿಗೆ ಅಂದರೆ 2 ಗಂಟೆಗಳವರೆಗೆ ಹೆಚ್ಚಿಸಲಾಗಿದೆ.

IPL 2025 Rain Rules: ಐಪಿಎಲ್ ಫ್ಯಾನ್ಸ್​ಗೆ ಬಂಪರ್ ಸುದ್ದಿ: ಬಿಸಿಸಿಐ ಹೊಸ ನಿಯಮ ಜಾರಿ
Ipl 2025 Rain Rules (1)
Vinay Bhat
|

Updated on: May 21, 2025 | 7:06 AM

Share

ಬೆಂಗಳೂರು (ಮೇ. 21): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League) ಪ್ಲೇಆಫ್ ಮತ್ತು ಫೈನಲ್ ಪಂದ್ಯದ ಸ್ಥಳವನ್ನು ಘೋಷಿಸಲಾಗಿದೆ. ಈಗಾಗಲೇ ಪ್ಲೇಆಫ್‌ಗೆ ಮೂರು ತಂಡಗಳು ಲಗ್ಗೆಯಿಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಮತ್ತು ಪಂಜಾಗ್ ಕಿಂಗ್ಸ್ ಕ್ವಾಲಿಫೈ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪಿದ ನಾಲ್ಕನೇ ತಂಡವಾಗಲಿದೆ. ಐಪಿಎಲ್ 2025 ರ ನಾಕೌಟ್ ಹಂತಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಸಂಪೂರ್ಣವಾಗಿ ಸಜ್ಜಾಗಿದೆ. ಈ ಋತುವಿನಲ್ಲಿ, ಮಳೆಯಿಂದಾಗಿ ಅನೇಕ ದೊಡ್ಡ ಪಂದ್ಯಗಳು ಪರಿಣಾಮ ಬೀರಿದವು, ಇದು ಪ್ಲೇ ಆಫ್ ಸಮೀಕರಣದ ಮೇಲೂ ಪರಿಣಾಮ ಬೀರಿತು, ಆದರೆ ಈಗ ಬಿಸಿಸಿಐ ಮಳೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಹೊರಡಿಸಿದೆ.

ವಾಸ್ತವವಾಗಿ, ಪ್ಲೇ ಆಫ್ ಪಂದ್ಯಗಳ ಸಮಯದಲ್ಲಿ ಮಳೆಯಿಂದಾಗಿ ಆಟಕ್ಕೆ ಅಡ್ಡಿಯುಂಟಾದರೆ, ಅದಕ್ಕೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಈ ಹಿಂದಿನ ಪಂದ್ಯಗಳಿಗೆ, ಮಳೆ ಅಡ್ಡಿಪಡಿಸಿದರೆ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು, ಆದರೆ ಈಗ ಅದನ್ನು 120 ನಿಮಿಷಗಳಿಗೆ ಅಂದರೆ 2 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಳೆಯಿಂದ ಪ್ರಭಾವಿತವಾದ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಪೂರ್ಣಗೊಳಿಸಬಹುದೆಂಬ ಸಂಪೂರ್ಣ ಭರವಸೆ ಈಗ ಇದೆ, ಆದರೆ ಪಂದ್ಯವು ನಿಗದಿತ ಸಮಯದೊಳಗೆ ಪ್ರಾರಂಭವಾಗದಿದ್ದರೆ, ಅಂಪೈರ್ ಮತ್ತು ಮ್ಯಾಚ್ ರೆಫರಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮಳೆಯ ಕಾರಣ ಪಂದ್ಯದ ಸ್ಥಳ ಬದಲಾವಣೆ

ಇದನ್ನೂ ಓದಿ
Image
IPL ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯಕ್ಕೆ ಈ ಮೈದಾನ ಸಜ್ಜು
Image
ಪಂತ್ ಮಾತ್ರವಲ್ಲ LSG ದೋಣಿಯನ್ನು ಮುಳುಗಿಸಿದ್ದು ಈ 5 ಆಟಗಾರರು
Image
IPLನಿಂದ ಲಕ್ನೋ ಔಟ್: ಪಂದ್ಯದ ಬಳಿಕ ವಿಚಿತ್ರ ಹೇಳಿಕೆ ನೀಡಿದ ರಿಷಭ್ ಪಂತ್
Image
ಐದನೇ ತಂಡವಾಗಿ ಲೀಗ್​ನಿಂದ ಹೊರಬಿದ್ದ ಲಕ್ನೋ

ಬಿಸಿಸಿಐ ಹೆಚ್ಚುವರಿ ಸಮಯವನ್ನು ಸೇರಿಸಿದ್ದಲ್ಲದೆ, ಸ್ಥಳವನ್ನು ಸಹ ಬದಲಾಯಿಸಿದೆ. ವಾಸ್ತವವಾಗಿ, ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಮೇ 23 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯ ಸಂಪೂರ್ಣವಾಗಿ ಮಳೆಯಿಂದಾಗಿ ರದ್ದಾಗಿತ್ತು.

IPL 2025 Playoffs Schedule: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ ಈ ಮೈದಾನ

ಬದಲಾದ ಸ್ಥಳದ ಪ್ರಕಾರ, ಐಪಿಎಲ್‌ನ ಅಂತಿಮ ಪಂದ್ಯವನ್ನು ಈಗ ಅಹಮದಾಬಾದ್‌ನಲ್ಲಿ ನಡೆಸಲಾಗುವುದು. ನರೇಂದ್ರ ಮೋದಿ ಕ್ರೀಡಾಂಗಣವು ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವನ್ನು ಆಯೋಜಿಸಲಿದೆ. ಜೂನ್ 1 ರಂದು ಕ್ವಾಲಿಫೈಯರ್ 2 ನಡೆಯಲಿದೆ. ಈ ಪಂದ್ಯವು ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ ಗೆದ್ದ ತಂಡದ ನಡುವೆ ನಡೆಯಲಿದೆ. ಜೂನ್ 3 ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಐಪಿಎಲ್ 18 ನೇ ಸೀಸನ್‌ನ ವಿಜೇತರು ಯಾರು ಎಂಬುದು ನಿರ್ಧಾರ ಆಗಲಿದೆ.

ಈ ಮೊದಲು ಈ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಆಯೋಜಿಸಲಾಗಿತ್ತು. ಆದರೆ, ಕೆಲವು ಕಾರಣಗಳಿಂದಾಗಿ ಇವುಗಳನ್ನು ಬದಲಾಯಿಸಲಾಗಿದೆ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಬದಲಾವಣೆ ಮಾಡಿದೆ. ‘ಹವಾಮಾನ ಮತ್ತು ಇತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿಯು ಪ್ಲೇಆಫ್‌ಗಳಿಗೆ ಹೊಸ ಸ್ಥಳಗಳನ್ನು ನಿರ್ಧರಿಸಿದೆ’ ಎಂದು ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!