
ಮೈದಾನದಲ್ಲಿ ಆಟಗಾರರು ಸಿಡಿಸುವ ಬೌಂಡರಿ-ಸಿಕ್ಸರ್ಗಳು ಅಭಿಮಾನಿಗಳಿಗೆ ಸಂಭ್ರಮ ತರುವುದು ಸಹಜ. ಆದರೆ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟರ್ ಪ್ರಿಯಾನ್ಶ್ ಆರ್ಯ ಹೊಡೆದ ಒಂದು ಸಿಕ್ಸರ್ ಹಿರಿಯ ಅಭಿಮಾನಿಯೊಬ್ಬರ ಪಾಲಿಗೆ ಸಂಕಷ್ಟ ತಂದೊಡ್ಡಿತ್ತು. ಇದೀಗ ಆ ಅಭಿಮಾನಿಯ ನೆರವಿಗೆ ಧಾವಿಸುವ ಮೂಲಕ ಪಂಜಾಬ್ ಕಿಂಗ್ಸ್ (PBKS) ತಂಡ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಮುಲ್ಲನ್ಪುರದ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಪ್ರಿಯಾನ್ಶ್ ಆರ್ಯ ಸಿಡಿಸಿದ ಭರ್ಜರಿ ಸಿಕ್ಸರ್ ನೇರವಾಗಿ ಸ್ಟ್ಯಾಂಡ್ನಲ್ಲಿದ್ದ ಕ್ರಿಶನ್ ಚಂದ್ ಎಂಬ ವೃದ್ಧರ ಮುಖಕ್ಕೆ ಬಡಿಯಿತು. ಏಟಿನ ರಭಸಕ್ಕೆ ಅವರ ಕಣ್ಣಿನ ಮೇಲ್ಭಾಗದಲ್ಲಿ ಆಳವಾದ ಗಾಯವಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಮೈದಾನದ ವೈದ್ಯಕೀಯ ಸಿಬ್ಬಂದಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಯ ನಂತರ ಅಭಿಮಾನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:
The fans come first, always ❤️
Wishing Krishan Chand ji a speedy recovery. Glad to see him doing better 🙌 pic.twitter.com/b1trjoyMXC
— Punjab Kings (@PunjabKingsIPL) May 2, 2026
ಅಭಿಮಾನಿಯ ಬಗ್ಗೆ ತೋರಿದ ಈ ಕಾಳಜಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. “ಕೇವಲ ಆಟ ಗೆಲ್ಲುವುದು ಮುಖ್ಯವಲ್ಲ, ಅಭಿಮಾನಿಗಳ ಮನ ಗೆಲ್ಲುವುದು ಕೂಡ ಮುಖ್ಯ” ಎಂದು ನೆಟ್ಟಿಗರು ಪಂಜಾಬ್ ಕಿಂಗ್ಸ್ ತಂಡದ ನಡೆಯನ್ನು ಕೊಂಡಾಡುತ್ತಿದ್ದಾರೆ.
Published On - 11:10 am, Sun, 3 May 26