‘ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸುವುದು ಯಾರಿಗೂ ಇಷ್ಟವಿರಲಿಲ್ಲ’; ಗೊಂದಲಗಳಿಗೆ ತೆರೆ ಎಳೆದ ಜಯ್​ ಶಾ

Asia Cup 2023: ಮಾಜಿ ಅಧ್ಯಕ್ಷರು ಹೇಳುವಂತೆ ಈ ಹಿಂದೆ ಯುಎಇಯಲ್ಲಿ ಟಿ20 ವಿಶ್ವಕಪ್ ಆಡಲಾಗಿದೆ. ಆದರೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತಿದೆ. ಹೀಗಾಗಿ ಟಿ20 ಹಾಗೂ ಏಕದಿನ ಮಾದರಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ದುಬೈನಲ್ಲಿ ಸೆಪ್ಟೆಂಬರ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡುವುದು ಬಹಳ ತ್ರಾಸದಾಯಕ ಎಂದಿದ್ದಾರೆ.

‘ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸುವುದು ಯಾರಿಗೂ ಇಷ್ಟವಿರಲಿಲ್ಲ’; ಗೊಂದಲಗಳಿಗೆ ತೆರೆ ಎಳೆದ ಜಯ್​ ಶಾ
ಜಯ್ ಶಾ, ನಜಮ್ ಸೇಥಿ
Follow us
|

Updated on:Sep 06, 2023 | 12:05 PM

ಈ ಬಾರಿಯ ಏಷ್ಯಾಕಪ್​ಗೆ (Asia Cup 2023) ಶ್ರೀಲಂಕಾ ಮತ್ತು ಪಾಕಿಸ್ತಾನ (Sri Lanka and Pakistan) ಜಂಟಿಯಾಗಿ ಆತಿಥ್ಯವಹಿಸುತ್ತಿರುವ ವಿಚಾರ ನಿಮಗೆಲ್ಲ ಗೊತ್ತಿರುವುದೆ. ವಾಸ್ತವವಾಗಿ ಈ ಪಂದ್ಯವಾಳಿ ಪಾಕಿಸ್ತಾನದಲ್ಲಿ ಮಾತ್ರ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಸರಿ ಇಲ್ಲದ ಕಾರಣ ಶ್ರೀಲಂಕಾಕ್ಕೂ ಆತಿಥ್ಯದ ಹಕ್ಕು ಸಿಕ್ಕಿತು. ಆದರೀಗ ಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು. ಇದರ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ನಜಮ್ ಸೇಥಿ (Najam Sethi) ಏಷ್ಯಾಕಪ್ ಆಯೋಜನೆಯಲ್ಲಿ ಇಷ್ಟೆಲ್ಲ ಅವ್ಯವಸ್ಥೆ ಕಂಡುಬರಲು ಎಸಿಸಿ ಅಧ್ಯಕ್ಷ ಜಯ್ ಶಾ (Jay Shah) ಅವರೇ ನೇರ ಕಾರಣ ಎಂದಿದ್ದರು. ಇದೀಗ ನಜಮ್ ಸೇಥಿ ಹೇಳಿಕೆಗೆ ಎಸಿಸಿ ಅಧ್ಯಕ್ಷ ಜಯ್ ಶಾ ಪ್ರತಿಕ್ರಿಯೆ ನೀಡುವ ಮೂಲಕ ಪಾಕ್ ಮಂಡಳಿ ಮಾಜಿ ಅಧ್ಯಕ್ಷರ ಬಾಯಿಗೆ ಭೀಗ ಹಾಕಿದ್ದಾರೆ.

ಮೇಲೆ ಹೇಳಿದಂತೆ ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಈ ಟೂರ್ನಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಪ್ರಸ್ತಾವನೆಯನ್ನು ಬಿಸಿಸಿಐ ಸ್ಪಷ್ಟವಾಗಿ ನಿರಾಕರಿಸಿತ್ತು. ಇದಾದ ಬಳಿಕ ಭಾರತದ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಯುಎಇಯಲ್ಲಿ ನಡೆಸಬಹುದು ಎಂದು ಪಾಕಿಸ್ತಾನ ಸಲಹೆ ನೀಡಿತ್ತು. ಆದರೆ ಎಸಿಸಿ, ಶ್ರೀಲಂಕಾದಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಿತು. ಹೀಗಾಗಿ ಕೇವಲ ನಾಲ್ಕು ಪಂದ್ಯಗಳ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿ ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾಗೆ ನೀಡಲಾಯಿತು.

Asia Cup 2023: ‘ಕ್ರೀಡೆಯಲ್ಲಿ ರಾಜಕೀಯ ಅಕ್ಷಮ್ಯ’; ಜಯ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ನಜಮ್ ಸೇಥಿ

ದುಬೈನಲ್ಲಿ ನಡೆಸಲು ಸಲಹೆ ನೀಡಿದ್ದವು

ಇದೀಗ ಲಂಕಾದಲ್ಲಿ ಮಳೆಯಿಂದಾಗಿ ಪಂದ್ಯಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದ ಮಾಜಿ ಅಧ್ಯಕ್ಷ ನಜಮ್ ಸೇಥಿ, ಈ ಮೊದಲು ಹೈಬ್ರಿಡ್ ಮಾದರಿಯ ಚರ್ಚೆ ನಡೆದಾಗ ನಾವು ದುಬೈನಲ್ಲಿ ಪಂದ್ಯಾವಳಿ ನಡೆಸಲು ಸಲಹೆ ನೀಡಿದ್ದವು. ಆದರೆ ಎಸಿಸಿ, ಆ ಸಮಯದಲ್ಲಿ ದುಬೈನ ವಾತಾವರಣ ಅತ್ಯಧಿಕ ಬಿಸಿಯಾಗಿರುತ್ತದೆ. ಹೀಗಾಗಿ ಅಲ್ಲಿ ಪಂದ್ಯಾವಳಿ ನಡೆಸಲಿ ಸಾಧ್ಯವಿಲ್ಲ ಎಂದಿತ್ತು. ಇದೀಗ ಪಂದ್ಯಾವಳಿ ವಿಫಲವಾಗುತ್ತಿರುವುದಕ್ಕೆ ಕಾರಣ ಎಸಿಸಿಯ ಅಧ್ಯಕ್ಷರು ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿರುವುದು ಎಂದು ಜಯ್ ಶಾ ವಿರುದ್ಧ ಕಿಡಿಕಾರಿದ್ದರು.

ಮಾದರಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ

ಇದೀಗ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಹಾಗೂ ಎಸಿಸಿ ಅಧ್ಯಕ್ಷ ಜಯ್ ಶಾ, ಯುಎಇಯಲ್ಲಿನ ಬಿಸಿಯ ವಾತಾವರಣ ಮತ್ತು ಪಿಸಿಬಿಯಲ್ಲಿನ ಉನ್ನತ ಸ್ಥಾನಗಳಲ್ಲಿ ಆಗಾಗ್ಗೆ ಬದಲಾವಣೆಗಳಿಂದಾಗಿ ಪಂದ್ಯವನ್ನು ಶ್ರೀಲಂಕಾದಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದಿದ್ದಾರೆ. ಮಾಜಿ ಅಧ್ಯಕ್ಷರು ಹೇಳುವಂತೆ ಈ ಹಿಂದೆ ಯುಎಇಯಲ್ಲಿ ಟಿ20 ವಿಶ್ವಕಪ್ ಆಡಲಾಗಿದೆ. ಆದರೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತಿದೆ. ಹೀಗಾಗಿ ಟಿ20 ಹಾಗೂ ಏಕದಿನ ಮಾದರಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ದುಬೈನಲ್ಲಿ ಸೆಪ್ಟೆಂಬರ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡುವುದು ಬಹಳ ತ್ರಾಸದಾಯಕ ಎಂದಿದ್ದಾರೆ.

ಯಾರಿಗೂ ಇಷ್ಟವಿರಲಿಲ್ಲ

ಈ ಪಂದ್ಯಾವಳಿಯಲ್ಲಿ ಪಾಲ್ಗೋಳುತ್ತಿರುವ ಎಲ್ಲ ಮಂಡಳಿಗಳೂ ಸಹ ಪಾಕಿಸ್ತಾನದಲ್ಲಿ ಪಂದ್ಯ ನಡೆಸಲು ಹಿಂದೇಟು ಹಾಕಿದ್ದರು. ಎಲ್ಲಾ ಮಾಜಿ ಸದಸ್ಯರ ಹೊರತಾಗಿ, ಮಾಧ್ಯಮ ಹಕ್ಕುಗಳನ್ನು ಪಡೆದವರೂ ಪಾಕಿಸ್ತಾನದಲ್ಲಿ ಪಂದ್ಯವನ್ನು ನಡೆಸುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಪಾಕಿಸ್ತಾನದ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದರು. ಈ ಎಲ್ಲ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಪರಿಹಾರ ಕಂಡುಕೊಳ್ಳುವುದು ಎಸಿಸಿ ಅಧ್ಯಕ್ಷನಾಗಿ ನನ್ನ ಕೆಲಸವಾಗಿದೆ. ಹೀಗಾಗಿ ನಾನು ಶ್ರೀಲಂಕಾದಲ್ಲಿ ಪಂದ್ಯಾವಳಿ ಆಯೋಜಿಸುವ ತೀರ್ಮಾನಕ್ಕೆ ಬಂದೆ ಎಂದು ಶಾ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Wed, 6 September 23