AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs CSK: ಫೈನಲ್​ನಲ್ಲಿ ಸೋಲಿಲ್ಲದ ಸರದಾರ ಕೆಕೆಆರ್: ಈ ಬಾರಿ ಕೂಡ ಗೆಲ್ಲುತ್ತಾ?

IPL 2021: ಕೊಲ್ಕತ್ತಾ ನೈಟ್​ ರೈಡರ್ಸ್​ ಫೈನಲ್​ಗೆ ತಲುಪಿದೆ. ಈ ಬಾರಿ ಕೂಡ ಕೆಕೆಆರ್​ಗೆ ಸಿಎಸ್​ಕೆ ಎದುರಾಳಿಯಾಗಿ ಸಿಕ್ಕಿದೆ. ಅಂದರೆ 2012 ರ ಬಳಿಕ ಸಿಎಸ್​ಕೆ ಹಾಗೂ ಕೆಕೆಆರ್​ ಫೈನಲ್ ಆಡುತ್ತಿದೆ.

KKR vs CSK: ಫೈನಲ್​ನಲ್ಲಿ ಸೋಲಿಲ್ಲದ ಸರದಾರ ಕೆಕೆಆರ್: ಈ ಬಾರಿ ಕೂಡ ಗೆಲ್ಲುತ್ತಾ?
KKR vs CSK
TV9 Web
| Edited By: |

Updated on: Oct 14, 2021 | 5:12 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನೇನಿದ್ದರೂ ಫೈನಲ್ ಕಾದಾಟ. ಅದು ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ (KKR)​ ತಂಡಗಳ ನಡುವೆ ಎಂಬುದು ವಿಶೇಷ. ಈ ಐಪಿಎಲ್​ನ ಬಲಿಷ್ಠ ಪಡೆ ಎನಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (DC)​ ತಂಡಕ್ಕೆ ಸೋಲುಣಿಸಿ ಉಭಯ ತಂಡಗಳು ಫೈನಲ್​ಗೇರಿರುವುದು ವಿಶೇಷ. ಅದರಲ್ಲೂ ಕೊಲ್ಕತ್ತಾ ನೈಟ್​ ರೈಡರ್ಸ್​ ಮೂರನೇ ಬಾರಿ ಫೈನಲ್​ ಆಡುತ್ತಿರುವುದು ವಿಶೇಷ. ಅಂದರೆ 2014ರ ಚಾಂಪಿಯನ್​ ಪಟ್ಟದ ಬಳಿಕ ಕೆಕೆಆರ್ ಫೈನಲ್​ಗೆ ಎಂಟ್ರಿ ಕೊಟ್ಟಿಲ್ಲ. ಇದೀಗ 6 ಸೀಸನ್​ ಬಳಿಕ ಕೆಕೆಆರ್​ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್​ ಎಂಬ ಐಪಿಎಲ್​ ಬಲಿಷ್ಠ ಪಡೆಯ ಜೊತೆ.

ಈ ಹಿಂದೆ 2 ಬಾರಿ ಫೈನಲ್​ ಪ್ರವೇಶಿಸಿದ್ದ ಕೆಕೆಆರ್ ಎರಡು ಸಲ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಲ್ಲೂ 2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಫೈನಲ್​ ಆಡಿದ್ದ ಕೆಕೆಆರ್ ಸಿಎಸ್​ಕೆ ಸೋಲುಣಿಸಿ ಟ್ರೋಫಿ ಎತ್ತಿ ಹಿಡಿದಿದ್ದರು. ಧೋನಿ ನೇತೃತ್ವದ ಸಿಎಸ್​ಕೆ ನೀಡಿದ 190 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಅಂದು ಕೊಲ್ಕತ್ತಾ 19.4 ಓವರ್​ನಲ್ಲಿ ಚೇಸ್ ಮಾಡಿತ್ತು.

ಇದಾದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್​ ಫೈನಲ್ ಪ್ರವೇಶಿಸಿದ್ದು 2014 ರಲ್ಲಿ. ಈ ವೇಳೆ ಕೂಡ ತಂಡವನ್ನು ಮುನ್ನಡೆಸಿದ್ದು ಗೌತಮ್ ಗಂಭೀರ್. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ದ ನಡೆದಿದ್ದ ಫೈನಲ್​ ಹಣಾಹಣಿಯಲ್ಲಿ ರೋಚಕ ಜಯ ಸಾಧಿಸಿ ಕೆಕೆಆರ್​ ಗೆಲುವಿನ ಕೇಕೆ ಹಾಕಿತ್ತು. ಅಂದು ಜಾರ್ಜ್​ ಬೈಲಿ ಮುನ್ನಡೆಸಿದ್ದ ಪಂಜಾಬ್ ತಂಡ ಮೊದಲು ಬ್ಯಾಟ್​ ಮಾಡಿ 199 ರನ್​ಗಳ ಕಠಿಣ ಗುರಿ ನೀಡಿತ್ತು. ಈ ಬೃಹತ್ ಸವಾಲನ್ನು ಬೆನ್ನತ್ತಿದ ಕೆಕೆಆರ್ 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದೀಗ ಮತ್ತೊಮ್ಮೆ ಕೊಲ್ಕತ್ತಾ ನೈಟ್​ ರೈಡರ್ಸ್​ ಫೈನಲ್​ಗೆ ತಲುಪಿದೆ. ಈ ಬಾರಿ ಕೂಡ ಕೆಕೆಆರ್​ಗೆ ಸಿಎಸ್​ಕೆ ಎದುರಾಳಿಯಾಗಿ ಸಿಕ್ಕಿದೆ. ಅಂದರೆ 2012 ರ ಬಳಿಕ ಸಿಎಸ್​ಕೆ ಹಾಗೂ ಕೆಕೆಆರ್​ ಫೈನಲ್ ಆಡುತ್ತಿದೆ. 2 ಬಾರಿ ಫೈನಲ್​ ಪ್ರವೇಶಿಸಿ ಕಪ್ ಗೆದ್ದಿರುವ ಕೆಕೆಆರ್​ ಒಂದೆಡೆಯಾದರೆ, 8 ಬಾರಿ ಫೈನಲ್ ಪ್ರವೇಶಿಸಿ 3 ಬಾರಿ ಕಪ್ ಗೆದ್ದಿರುವ ಸಿಎಸ್​ಕೆ ಮತ್ತೊಂದೆಡೆ ಇದೆ. ಹೀಗಾಗಿ ಫೈನಲ್ ಹೋರಾಟದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

(KKR have never lost an IPL final yet)

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ