KL Rahul: ಕ್ಲೀನ್ಸ್ವೀಪ್ ಸಾಧನೆ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
IND vs ZIM, 3rd ODI: ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 13 ರನ್ಗಳಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಏನು ಹೇಳಿದರು ನೋಡಿ.

ಹರಾರೆ ಸ್ಫೋರ್ಟ್ಸ್ ಕ್ಲಬ್ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ ಭಾರತ (India vs Zimbabwe) 3-0 ಅಂತರದಿಂದ ಸರಣಿ ಕ್ಲೀನ್ಸ್ವೀಪ್ ಗೈದ ಸಾಧನೆ ಮಾಡಿದೆ. ಶುಭ್ಮನ್ ಗಿಲ್ (Sbhuman Gill) ಅವರ 130 ರನ್ ಹಾಗೂ ಇಶಾನ್ ಕಿಶನ್ ಅವರ ಅರ್ಧಶತಕದ ನೆರವಿನಿಂದ ಭಾರತ 50 ಓವರ್ಗಳಲ್ಲಿ 289 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ 49.3 ಓವರ್ನಲ್ಲಿ 276 ರನ್ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಸಿಖಂದರ್ ರಾಜಾ 115 ರನ್ ಸಿಡಿಸಿ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಭಾರತ 13 ರನ್ಗಳಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಏನು ಹೇಳಿದರು ನೋಡಿ.
“ತುಂಬಾ ಸಂತಸವಾಗುತ್ತಿದೆ. ನಾವು ಕೆಲ ಉತ್ತಮ ಯೋಜನೆಯೊಂದಿಗೆ ಇಲ್ಲಿಗೆ ಬಂದಿದ್ದೆವು. ಅವರು ತುಂಬಾ ವೃತ್ತಿಪರರಾಗಿದ್ದಾರೆ, ಈ ಫಲಿತಾಂಶದಿಂದ ಸಂತೋಷವಾಗಿದೆ. ನಾವು ಈ ಪಂದ್ಯವನ್ನು ಆದಷ್ಟು ಬೇಗ ಮುಗಿಸಲು ಭಯಸಿದ್ದೆವು. ಆದರೆ, ಜಿಂಬಾಬ್ವೆ ಅಂತಿಮ ಹಂತದವರೆಗೆ ಪಂದ್ಯವನ್ನು ಕೊಂಡೊಯ್ಯಿದರು. ಕೆಲವು ತಿಂಗಳುಗಳ ಬಳಿಕ ತಂಡಕ್ಕೆ ಮರಳಿರುವುದರಿಂದ ಆಯಾಸವಾಗಿದೆ. ಆದರೆ, ಇದು ನಮ್ಮ ಕೆಲಸ, ಭಾರತಕ್ಕಾಗಿ ಆಡಬೇಕು,” ಎಂದು ಹೇಳಿದ್ದಾರೆ.
ಶುಭ್ಮನ್ ಗಿಲ್ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿದ ರಾಹುಲ್, ”ಗಿಲ್ ಐಪಿಎಲ್ನಿಂದಲೂ ಅದ್ಭುತ ಫಾರ್ಮ್ನಲ್ಲಿದ್ದು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ತುಂಬಾ ಖುಷಿ ನೀಡುತ್ತದೆ. ಅವರಲ್ಲಿ ಅತಿಯಾದ ಆತ್ಮವಿಶ್ವಾಸವಿಲ್ಲ. ಆರೀತಿಯ ಮನೋಧರ್ಮ ಒಳ್ಳೆಯದು,” ಎಂಬುದು ರಾಹುಲ್ ಮಾತು.
ಇನ್ನು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಶುಭ್ಮನ್ ಗಿಲ್, ”ನಾನು ಡಾಟ್ ಬಾಲ್ ಅನ್ನು ಆಡುವುದು ಆದಷ್ಟು ಕಡಿಮೆ ಮಾಡಿಕೊಂಡೆ. ಹೆಚ್ಚು ಗ್ಯಾಪ್ನಲ್ಲಿ ರನ್ ಗಳಿಸಲು ಮುಂದಾದೆ. ನಾನು ಕ್ರೀಸ್ಗೆ ಬಂದಾಗ ಕೆಲ ಬೌಲರ್ಗಳು ಉತ್ತಮ ಬೌಲಿಂಗ್ ಮಾಡುತ್ತಾರೆ. ಸೆಟಲ್ ಆದಾಗ ನಾವುಕೂಡ ಆ್ಯಟಾಕ್ ಮಾಡಬಹುದು. ಇಲ್ಲಿ ಬ್ಯಾಟಿಂಗ್ ಮಾಡಲು ತುಂಬಾ ಖುಷಿಯಾಗುತ್ತದೆ,” ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಬಗ್ಗೆ ಮಾತನಾಡಿದ ಗಿಲ್, ”ಈ ಶತಕ ನನಗೆ ತುಂಬಾನೆ ವಿಶೇಷ. ನಾನು ಈ ಸೆಂಚುರಿಯನ್ನು ತಂದೆಗೆ ಅರ್ಪಿಸುತ್ತೇನೆ. ಇಂಥಹ ತಂಡದಲ್ಲಿ ಆಡುತ್ತಿರುವುದು ಅತ್ಯುತ್ತಮ ಅನುಭವ ನೀಡುತ್ತದೆ. ಇಲ್ಲಿ ಅನೇಕ ಅದ್ಭುತ ಆಟಗಾರರಿದ್ದಾರೆ,” ಎಂದು ಗಿಲ್ ಹೇಳಿದರು.
ಸೋತ ಜಿಂಬಾಬ್ವೆ ತಂಡದ ನಾಯಕ ರೆಗಿಸಾ ಜಕಾಬ್ವಾ ಮಾತನಾಡಿ, ”ಮೊದಲಿಗೆ ಭಾರತ ತಂಡಕ್ಕೆ ಶುಭಕೋರುತ್ತೇನೆ. ಅವರು ಅತ್ಯುತ್ತಮ ಆಟವಾಡಿದ್ದಾರೆ. ಸಿಖಂದರ್ ಮತ್ತು ಬ್ರಾಡ್ ಉತ್ತಮ ಫೈಟ್ ನೀಡಿದರು. ಆದರೆ, ಭಾರತ ತನ್ನ ಘನತೆಯನ್ನು ಉಳಿಸಿಕೊಂಡಿತು. ನಾವು ಕಷ್ಟದ ಸಂದರ್ಭದಿಂದ ಕಮ್ಬ್ಯಾಕ್ ಮಾಡಿದ್ದೇವೆ. ನಮ್ಮ ಬೌಲಿಂಗ್ ವಿಭಾಗದಲ್ಲಿ ಪಾಸಿಟಿವ್ ಇದೆ. ಈ ಸರಣಿಯಿಂದ ಅನೇಕ ವಿಚಾರಗಳನ್ನು ಕಲಿತಿದ್ದೇವೆ,” ಎಂದು ಹೇಳಿದ್ದಾರೆ.
Published On - 9:16 am, Tue, 23 August 22