AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯಿಂದ ವಿಶೇಷ ವಸ್ತು ಪಡೆದು ಮಗನಿಗೆ ಗಿಫ್ಟ್ ಕೊಟ್ಟ ಸ್ಟಾರ್ ಆಟಗಾರ

ಸದ್ಯ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 3 ಏಕದಿನ ಸರಣಿಯಲ್ಲಿ ಗೆದ್ದಿದ್ದು, ಸಾಕಷ್ಟು ಹುರುಪು ನೀಡಿದೆ. ಮೂರೂ ಪಂದ್ಯವನ್ನು ಗೆದ್ದು ಇಂಗ್ಲೆಂಡ್​ನ ವೈಟ್ ವಾಶ್ ಮಾಡಿದೆ. ಈಗ ಖ್ಯಾತ ಆಟಗಾರನೋರ್ವ ವಿರಾಟ್ ಕೊಹ್ಲಿ ಅವರಿಂದ ಗಿಫ್ಟ್ ಒಂದನ್ನು ಪಡೆದು ಮಗನಿಗೆ ನೀಡಿದ್ದಾರೆ.

ಕೊಹ್ಲಿಯಿಂದ ವಿಶೇಷ ವಸ್ತು ಪಡೆದು ಮಗನಿಗೆ ಗಿಫ್ಟ್ ಕೊಟ್ಟ ಸ್ಟಾರ್ ಆಟಗಾರ
ವಿರಾಟ್
ರಾಜೇಶ್ ದುಗ್ಗುಮನೆ
|

Updated on: Feb 14, 2025 | 12:02 PM

Share

ವಿರಾಟ್ ಕೊಹ್ಲಿ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರ ಬಗ್ಗೆ ಇರುವ ಕ್ರೇಜ್ ಕಡಿಮೆ ಆಗುವಂಥದ್ದಲ್ಲ. ಅವರಿಂದ ಯಾವುದಾದರೂ ವಸ್ತು ಸಿಕ್ಕರೆ ಅದನ್ನು ಪ್ರೀತಿಯಿಂದ ಆಟಗಾರರು ಇಟ್ಟುಕೊಳ್ಳುತ್ತಾರೆ. ಈಗ ಕೆವಿನ್ ಪೀಟರ್ಸನ್​ ವಿರಾಟ್ ಕೊಹ್ಲಿಯಿಂದ ಜರ್ಸಿಯನ್ನು ಗಿಫ್ಟ್ ಪಡೆದು ಅದನ್ನು ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಜರ್ಸಿಯ ಮೇಲೆ ಕೊಹ್ಲಿಯ ಹಸ್ತಾಕ್ಷರ ಇದೆ ಅನ್ನೋದು ವಿಶೇಷ.

ಕೆವಿನ್ ಪೀಟರ್​ಸನ್ ಅವರು ಭಾರತ vs ಇಂಗ್ಲೆಂಡ್ ಒಡಿಐ ಸೀರಿಸ್​ನಲ್ಲಿ ಕಮೆಂಟೇಟರ್ ಆಗಿದ್ದರು. ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ಆಗಿರೋ ಅವರು ಕೊಹ್ಲಿಯಿಂದ ಜೆರ್ಸಿ ಪಡೆದಿದ್ದಾರೆ. ಈ ಶರ್ಟ್​ಗೆ ಕೊಹ್ಲಿ ಅವರು ಹಸ್ತಾಕ್ಷರ ಹಾಕಿ ಕೊಟ್ಟಿದ್ದಾರೆ. ಇದನ್ನು ಕೆವಿನ್ ಅವರು ಮಗ ಡೈಲನ್​ಗೆ ನೀಡಿದ್ದಾರೆ. ಮಗ ಶರ್ಟ್ ಹಾಕಿ ನಿಂತಿರೋ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಕೆವಿನ್ ಹಂಚಿಕೊಂಡಿದ್ದಾರೆ.

ಕೆವಿನ್ ಪೀಟರ್​ಸನ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ 2009-10ರ ಸಂದರ್ಭದಲ್ಲಿ ಆರ್​​ಸಿಬಿಯಲ್ಲಿ ಒಟ್ಟಾಗಿ ಆಡಿದ್ದರು. ಈ ಮೂಲಕ ಡ್ರೆಸ್ಸಿಂಗ್​ ರೂಂನ ಒಟ್ಟಾಗಿ ಹಂಚಿಕೊಂಡಿದ್ದರು. ಈ ಗೆಳೆತನ ಈಗಲೂ ಮುಂದುವರಿದಿದೆ. ಕೊಹ್ಲಿ ಜೆರ್ಸಿ ಪಡೆದ ಕೆವಿನ್ ಮಗ ಮತ್ತಷ್ಟು ಖುಷಿ ಆಗಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಡಬಲ್ ಶಾಕ್

ಸದ್ಯ ಚಾಂಪಿಯನ್ಸ್​ ಟ್ರೋಫಿ ಬರುತ್ತಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 3 ಏಕದಿನ ಸರಣಿಯಲ್ಲಿ ಗೆದ್ದಿದ್ದು, ಸಾಕಷ್ಟು ಹುರುಪು ನೀಡಿದೆ. ಮೂರೂ ಪಂದ್ಯವನ್ನು ಗೆದ್ದು ಇಂಗ್ಲೆಂಡ್​ನ ವೈಟ್ ವಾಶ್ ಮಾಡಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿ ಹೊರಗುಳಿದರು. ಎರಡನೇ ಪಂದ್ಯದಲ್ಲಿ ಐದು ರನ್​ಗೆ ಔಟ್ ಆದರೆ, ಮೂರನೇ ಪಂದ್ಯದಲ್ಲಿ 52 ರನ್ ಸಿಡಿಸಿದರು. ಈ ಮೂಲಕ ಏಕದಿನ ಪಂದ್ಯದಲ್ಲಿ 73 ಅರ್ಧಶತಕ ಸಿಡಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರಿಂದ ಸಾಕಷ್ಟು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ