Retired number: 10, 64, 77; ಕ್ರಿಕೆಟ್​ನಲ್ಲಿ ಈ ನಂಬರ್​ಗಳ ಜರ್ಸಿಗೂ ಸಿಕ್ಕಿದೆ ಶಾಶ್ವತ ನಿವೃತ್ತಿ! ಕಾರಣವೇನು ಗೊತ್ತಾ?

Retired number: ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲದೆ ವಿವಿಧ ಕ್ರೀಡೆಗಳಲ್ಲಿಯೂ ಆಟಗಾರನ ಜೊತೆಗೆ ಅವರು ಧರಿಸಿದ್ದ ಜರ್ಸಿ (jersey) ಕೂಡ ಶಾಶ್ವತವಾಗಿ ನಿವೃತ್ತಿ ಹೊಂದಿದ ಉದಾಹರಣೆಗಳಿವೆ.

Retired number: 10, 64, 77; ಕ್ರಿಕೆಟ್​ನಲ್ಲಿ ಈ ನಂಬರ್​ಗಳ ಜರ್ಸಿಗೂ ಸಿಕ್ಕಿದೆ ಶಾಶ್ವತ ನಿವೃತ್ತಿ! ಕಾರಣವೇನು ಗೊತ್ತಾ?
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಲಿಟಲ್ ಮಾಸ್ಟರ್ ಪ್ರೋಟೀಸ್ ವಿರುದ್ಧ 2001 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 57 ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು, 35.73 ಬ್ಯಾಟಿಂಗ್ ಸರಾಸರಿ ಮತ್ತು 76.31 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಗಳಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 5 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ದ್ವಿಶತಕವೂ ಇದೆ.
Follow us
| Updated By: ಪೃಥ್ವಿಶಂಕರ

Updated on: Jul 26, 2022 | 3:30 PM

ಕ್ರಿಕೆಟ್‌ನಲ್ಲಿ (cricket) ಕೆಲವು ದಿಗ್ಗಜರಿದ್ದಾರೆ, ಅವರು ಕೆಲವೊಮ್ಮೆ ಬ್ಯಾಟ್‌ನಿಂದ ಮತ್ತು ಕೆಲವೊಮ್ಮೆ ಚೆಂಡಿನ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹೀಗಾಗಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಕೈಚಳಕ ತೋರಿದವರಿಗೆ ವಿಶೇಷ ಸ್ಥಾನ ಸಿಕ್ಕಿದೆ. ಅಲ್ಲದೆ ನಿವೃತ್ತಿಯ ನಂತರ ಆ ಆಟಗಾರರ ಆಟವನ್ನು ಸದಾ ನೆನಪಿನಲ್ಲಿಡಲು ಹಲವು ಕಾರ್ಯಕ್ರಮಗಳು ನಡೆದಿವೆ. ಜೊತೆಗೆ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲದೆ ವಿವಿಧ ಕ್ರೀಡೆಗಳಲ್ಲಿಯೂ ಆಟಗಾರನ ಜೊತೆಗೆ ಅವರು ಧರಿಸಿದ್ದ ಜರ್ಸಿ (jersey) ಕೂಡ ಶಾಶ್ವತವಾಗಿ ನಿವೃತ್ತಿ ಹೊಂದಿದ ಉದಾಹರಣೆಗಳಿವೆ. ಅಂತಹ ಮೂವರು ದಿಗ್ಗಜ ಆಟಗಾರರ ನಿವೃತ್ತಿ ಹಾಗೂ ಅವರು ತೊಡುತ್ತಿದ್ದ ಜರ್ಸಿ ಸಂಖ್ಯೆಗೆ ನೀಡಿರುವ ನಿವೃತ್ತಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಫಿಲಿಫ್ ಹ್ಯೂಸ್

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್ (ಫಿಲಿಪ್ ಹ್ಯೂಸ್) ಬ್ಯಾಟಿಂಗ್ ವೇಳೆ ನಡೆದ ಅವಘಡದಿಂದ ಆಕಸ್ಮಿಕವಾಗಿ ಸಾವನ್ನಪ್ಪಿದ ಬಳಿಕ ಮೈದಾನದಲ್ಲಿ ಅವರು ಧರಿಸಿದ್ದ ಜರ್ಸಿಯನ್ನು ಸಹ ನಿವೃತ್ತಿಗೊಳಿಸಲಾಯಿತು. 2014 ರಲ್ಲಿ ತವರಿನ ಪಂದ್ಯದ ವೇಳೆ ಫಿಲ್ ಹ್ಯೂಸ್ ಅವರ ತಲೆಗೆ ಪೆಟ್ಟಾಗಿತ್ತು. ನಂತರ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಆದರೆ ಅವರು ಬದುಕುಳಿಯಲು ಸಾಧ್ಯವಾಗಲಿಲ್ಲ. ಅವರ ಗೌರವಾರ್ಥವಾಗಿ ಫಿಲ್ ಹ್ಯೂಸ್ ಅವರ ಜರ್ಸಿ ಸಂಖ್ಯೆ 64 ಅನ್ನು ಕ್ರಿಕೆಟ್ ಆಸ್ಟ್ರೇಲಿಯಾ ಶಾಶ್ವತವಾಗಿ ನಿವೃತ್ತಿಗೊಳಿಸಿತು. ಅನೇಕ ಆಸ್ಟ್ರೇಲಿಯನ್ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಈ ಸಂಖ್ಯೆಯನ್ನು ಧರಿಸುವುದನ್ನು ಎಂದಿಗೂ ನೋಡಲಾಗುವುದಿಲ್ಲ.

ಇದನ್ನೂ ಓದಿ
Image
IND vs WI: ತಂಡದಿಂದ ಹೊರಗಿದ್ದ ಆಟಗಾರ ಇದೀಗ ಧೋನಿ-ಕೊಹ್ಲಿಯನ್ನು ಹಿಂದಿಕ್ಕಿ, ಇತಿಹಾಸ ಸೃಷ್ಟಿಸಲಿದ್ದಾನೆ!
Image
ಎರಡೇ ಪದದಲ್ಲಿ ಕೊಹ್ಲಿಯನ್ನು ಹೊಗಳಿ ಭಾರತೀಯರ ಹೃದಯ ಗೆದ್ದ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್
Image
ತೆರೆ ಮೇಲೆ ಶೋಯೆಬ್ ಅಖ್ತರ್ ಜೀವನ ಚರಿತ್ರೆ; ನನ್ನ ಬಯೋಪಿಕ್​ಗೆ ಸಲ್ಮಾನ್ ಖಾನ್ ಸೂಕ್ತ ಎಂದ ಪಾಕ್ ಬೌಲರ್

ಪರಸ್ ಖಡ್ಕಾ

ನೇಪಾಳ ಕ್ರಿಕೆಟ್ ತಂಡದ ಪ್ರಸಿದ್ಧ ನಾಯಕ ಪರಸ್ ಖಡ್ಕ ಅವರು ಆಗಸ್ಟ್ 2021 ರಲ್ಲಿ ನಿವೃತ್ತಿ ಘೋಷಿಸಿದರು. ತಂಡಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಕ್ರಿಕೆಟ್ ಮಂಡಳಿಯು ಅವರಿಗೆ ವಿಶೇಷ ಗೌರವವನ್ನು ನೀಡಲು ನಿರ್ಧರಿಸಿತು. ಪರಾಸ್ ಖಡ್ಕಾ ನೇಪಾಳದ ಪರ ಆಡುವಾಗ 77 ನೇ ನಂಬರ್​ನ ಜರ್ಸಿ ತೊಡುತ್ತಿದ್ದರು. ಹೀಗಾಗಿ ಅವರ ಜೊತೆಗೆ ಅವರು ತೊಡುತ್ತಿದ್ದ ಜರ್ಸಿ ಸಂಖ್ಯೆಗೂ ಶಾಶ್ವತವಾಗಿ ನಿವೃತ್ತಿ ನೀಡಲು ನಿರ್ಧರಿಸಲಾಯಿತು. ಈಗ ನೇಪಾಳ ತಂಡದ ಯಾವ ಆಟಗಾರನೂ ಈ ಜೆರ್ಸಿ ಧರಿಸಿ ಮೈದಾನಕ್ಕೆ ಬರುವುದಿಲ್ಲ.

ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಜಗತ್ತಿನ ದೇವರು ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎರಡು ದಶಕಗಳಿಗೂ ಹೆಚ್ಚು ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು, ಅತಿ ಹೆಚ್ಚು ಶತಕಗಳು ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದಾಖಲೆಗಳನ್ನು ಹೊಂದಿರುವ ಶ್ರೇಷ್ಠ ವ್ಯಕ್ತಿಯ ಗೌರವಾರ್ಥವಾಗಿ BCCI ಅವರ 10ನೇ ನಂಬರ್ ಜರ್ಸಿಯನ್ನು ನಿವೃತ್ತಿ ಮಾಡಲು ನಿರ್ಧರಿಸಿತು.

2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ ನಂತರ, ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಕೆಲವು ವರ್ಷಗಳ ನಂತರ ಶಾರ್ದೂಲ್ ಠಾಕೂರ್ ಈ ನಂಬರ್ ಜೆರ್ಸಿ ತೊಟ್ಟು ಭಾರತದ ಪರ ಆಡುತ್ತಿದ್ದರು. ಇದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐಗೆ ಛೀಮಾರಿ ಹಾಕಿದರು, ಜೊತೆಗೆ ಶಾರ್ದೂಲ್ ಕೂಡ ಭಾರೀ ಟೀಕೆಗೆ ಗುರಿಯಾದರು. ನಂತರ ಮಂಡಳಿಯು ಜೆರ್ಸಿಯನ್ನು ನಿವೃತ್ತಿಗೊಳಿಸಬೇಕೆಂದು ನಿರ್ಧರಿಸಿತು.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ