AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

On This Day: ಅಜೇಯ 36 ರನ್​: ಏಕದಿನ ಕ್ರಿಕೆಟ್​ನ ಅತ್ಯಂತ ಕಳಪೆ ಬ್ಯಾಟಿಂಗ್..!

Sunil Gavaskar: ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್​ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು.

On This Day: ಅಜೇಯ 36 ರನ್​: ಏಕದಿನ ಕ್ರಿಕೆಟ್​ನ ಅತ್ಯಂತ ಕಳಪೆ ಬ್ಯಾಟಿಂಗ್..!
Sunil GavaskarImage Credit source: Wisden
TV9 Web
| Edited By: |

Updated on: Jun 07, 2022 | 11:39 AM

Share

ಕ್ರಿಕೆಟ್​ ಅಂಗಳದಲ್ಲಿ ಜೂನ್ 7 ಅಂತಹ ವಿಶೇಷ ದಿನವಂತು ಅಲ್ಲ. ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮಾತ್ರ ಜೂನ್ 7ನೇ ತಾರೀಖನ್ನು ಸುನಿಲ್ ಗವಾಸ್ಕರ್ (Sunil Gavaskar) ಅವರ ಕಾರಣದಿಂದ ನೆನಪಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ 1975 ರ ಜೂನ್ 7 ರಂದು ಭಾರತ ತಂಡವು ಇಂಗ್ಲೆಂಡ್​ ವಿರುದ್ದ ವಿಶ್ವಕಪ್ ಪಂದ್ಯವಾಡಿತ್ತು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಡೇನಿಯಲ್ ಅಮಿಸ್ (137) ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ನಿಗದಿತ 60 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 334 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್​ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು. ಅಲ್ಲದೆ ಸುನಿಲ್ ಗವಾಸ್ಕರ್ ಅವರಿಗೆ ಸಾಥ್ ನೀಡಿದರು. 22 ರನ್​ಗಳಿಸಿ ಅಂಶುಮಾನ್ ಔಟಾದರೆ, ಆ ಬಳಿಕ ಬಂದ ಗುಂಡಪ್ಪ ವಿಶ್ವನಾಥ್ 37 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ಟೀಮ್ ಇಂಡಿಯಾದ ಮೂರು ವಿಕೆಟ್​ಗಳು ಪತನವಾದರೂ ಸುನಿಲ್ ಗವಾಸ್ಕರ್ ಒಂದೆಡೆ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತಿದ್ದರು.

ಅತ್ತ ಇಂಗ್ಲೆಂಡ್​ ಬೌಲರ್​ಗಳು ಮಾರಕ ದಾಳಿ ನಡೆಸುತ್ತಿದ್ದರೆ ಸುನಿಲ್ ಗವಾಸ್ಕರ್ ರನ್​ಗಳಿಸಲು ಪರದಾಡಿದರು. ಅಷ್ಟೇ ಅಲ್ಲದೆ ರನ್​ಗಳಿಸಲು ಯಾವುದೇ ಆಸಕ್ತಿಯನ್ನೂ ಕೂಡ ತೋರಲಿಲ್ಲ. ಇತ್ತ ಇಂಗ್ಲೆಂಡ್ ಬೌಲರ್​ಗಳು ಗವಾಸ್ಕರ್ ವಿಕೆಟ್ ಪಡೆಯಲು ಹರಸಾಹಸ ಪಟ್ಟರು. ಇನ್ನೊಂದೆಡೆ ಏಕದಿನ ಪಂದ್ಯ ವೀಕ್ಷಿಸುತ್ತಿದ್ದ ಇಂಗ್ಲೆಂಡ್​ ಕ್ರಿಕೆಟ್​ಗಳೂ ಕೂಡ ಗೊಂದಲಕ್ಕೀಡಾದರು. ಏಕೆಂದರೆ ರನ್​ಗಳಿಸದೇ ಕ್ರೀಸ್​ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್ ಟೆಸ್ಟ್ ಪಂದ್ಯದಂತೆ ಬ್ಯಾಟಿಂಗ್ ಮಾಡಿದ್ದರು.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಅಂತಿಮವಾಗಿ ಭಾರತ ತಂಡ 60 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷ ಎಂದರೆ ಸುನಿಲ್ ಗವಾಸ್ಕರ್ ಅವರನ್ನು ಔಟ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್​ಗಳು ವಿಫಲರಾಗಿದ್ದರು. ಇನ್ನು 60 ಓವರ್​ವರೆಗೆ ಬ್ಯಾಟ್ ಮಾಡಿದ ಸುನಿಲ್ ಗವಾಸ್ಕರ್ ಕಲೆಹಾಕಿದ್ದು ಕೇವಲ 36 ರನ್​ ಮಾತ್ರ.

ಅಜೇಯರಾಗಿ ಉಳಿದ ಸುನಿಲ್ ಗವಾಸ್ಕರ್ ಬರೋಬ್ಬರಿ 174 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ ಕೇವಲ 1 ಫೋರ್ ಮಾತ್ರ ಬಾರಿಸಿದ್ದರು. ಇದರಲ್ಲೇ ಸುನಿಲ್ ಗವಾಸ್ಕರ್ ಎಷ್ಟು ನಿಧಾನವಾಗಿ ಬ್ಯಾಟ್ ಬೀಸಿದ್ದರು ಎಂಬುದನ್ನು ಊಹಿಸಬಹುದು. ಇತ್ತ ಔಟ್ ಆಗದೇ 60 ಓವರ್​ವರೆಗೆ ಕ್ರೀಸ್ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್​ನಿಂದಾಗಿ ಅಂದು ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಅಂದರೆ ಬರೋಬ್ಬರಿ 202 ರನ್​ಗಳ ಅಂತರದಿಂದ ಆ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತು.

ಸುನಿಲ್ ಗವಾಸ್ಕರ್ ಅವರ 174 ಎಸೆತಗಳಲ್ಲಿ 36 ರನ್​ಗಳ ಈ ಇನಿಂಗ್ಸ್​ ಅನ್ನು ಏಕದಿನ ಕ್ರಿಕೆಟ್​ನಲ್ಲಿ ಭಾರತೀಯ ಆಟಗಾರನ ಅತ್ಯಂತ ಕೆಟ್ಟ ಇನಿಂಗ್ಸ್​ ಎಂದು ಪರಿಗಣಿಸಲಾಗಿದೆ. ಇಂದಿಗೆ ಈ ಕಳಪೆ ಬ್ಯಾಟಿಂಗ್​ ದಾಖಲೆಗೆ 47 ವರ್ಷಗಳು ತುಂಬಿರುವುದು ವಿಶೇಷ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?