AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT 2021: ಪ್ರೇರಕ್ ಮಂಕಡ್ ಅದ್ಭುತ ಇನ್ನಿಂಗ್ಸ್; ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ತಲುಪಿದ ಸೌರಾಷ್ಟ್ರ

Vijay Hazare Trophy: >ಸೌರಾಷ್ಟ್ರ ತನ್ನ ಆಲ್‌ರೌಂಡರ್ ಆಟದ ಆಧಾರದ ಮೇಲೆ ಭಾರತದ ದೇಶೀಯ ಪಂದ್ಯಾವಳಿಯ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ.

VHT 2021: ಪ್ರೇರಕ್ ಮಂಕಡ್ ಅದ್ಭುತ ಇನ್ನಿಂಗ್ಸ್; ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ತಲುಪಿದ ಸೌರಾಷ್ಟ್ರ
ಪ್ರೇರಕ್ ಮಂಕಡ್
TV9 Web
| Edited By: |

Updated on: Dec 22, 2021 | 6:58 PM

Share

ಸೌರಾಷ್ಟ್ರ ತನ್ನ ಆಲ್‌ರೌಂಡರ್ ಆಟದ ಆಧಾರದ ಮೇಲೆ ಭಾರತದ ದೇಶೀಯ ಪಂದ್ಯಾವಳಿಯ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ತಂಡ ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳು ಡಿಸೆಂಬರ್ 24 ರಂದು ಮುಖಾಮುಖಿಯಾಗಲಿವೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ವಿದರ್ಭ ತಂಡದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.ಸೌರಾಷ್ಟ್ರದ ಬೌಲರ್‌ಗಳು ವಿದರ್ಭವನ್ನು ತೊಂದರೆಗೊಳಿಸಿದಲ್ಲದೆ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ತಂಡವನ್ನು ಗೆಲುವಿನ ಹೊಸ್ತಿಲನ್ನು ದಾಟಿಸಿದರು. ಸೌರಾಷ್ಟ್ರ ನಾಯಕ ಜಯದೇವ್ ಉನದ್ಕತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ವಿದರ್ಭ ತಂಡ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಸೌರಾಷ್ಟ್ರ 29.5 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಾಧಿಸಿತು.

ಆದರೆ ಸೌರಾಷ್ಟ್ರ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 8 ರನ್ ಇದ್ದಾಗ ವಿಶ್ವರಾಜ್ ಜಡೇಜಾ ವಿಕೆಟ್ ಕಳೆದುಕೊಂಡಿದ್ದರು. ಇದಾದ ಬಳಿಕ ಹಾರ್ವಿಕ್ ದೇಸಾಯಿ ಕೂಡ ಒಟ್ಟು 13 ರನ್ ಗಳಿಸಿ ಔಟಾದರು. ಲಲಿತ್ ಯಾದವ್ ಶೆಲ್ಡನ್ ಜಾಕ್ಸನ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ಜಡೇಜಾಗೆ ಖಾತೆಯನ್ನು ಸಹ ತೆರೆಯಲು ಸಾಧ್ಯವಾಗಲಿಲ್ಲ ಆದರೆ ದೇಸಾಯಿ ಅವರ ಇನ್ನಿಂಗ್ಸ್ ಒಂಬತ್ತು ರನ್‌ ದಾಟಲು ಸಹ ಸಾಧ್ಯವಾಗಲಿಲ್ಲ. ಜಾಕ್ಸನ್ 22 ಎಸೆತಗಳಲ್ಲಿ 15 ರನ್ ಗಳಿಸಿದರು. ಸೌರಾಷ್ಟ್ರ 35 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ತಂಡದ ಮೇಲೆ ಒತ್ತಡವಿತ್ತು, ಈ ಕಾರಣದಿಂದಾಗಿ ಪ್ರೇರಕ್ ಮಂಕಡ್ ಮತ್ತು ಅರ್ಪಿತ್ ವಾಸವಡಾ ಜೊತೆಯಾಟ ಆಡಿದರು. ಇವರಿಬ್ಬರೂ ತಂಡಕ್ಕೆ ನಾಲ್ಕನೇ ಹೊಡೆತ ಬೀಳಲು ಬಿಡಲಿಲ್ಲ. ಪ್ರೇರಕ್ 72 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಅರ್ಪಿತ್ ಅವರಿಗೆ ಉತ್ತಮ ಬೆಂಬಲ ನೀಡಿದರು ಮತ್ತು 66 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 41 ರನ್ ಗಳಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ನೀಡಿದರು.

ವಿದರ್ಭದ ಬ್ಯಾಟ್ಸ್‌ಮನ್‌ಗಳ ಕಳಪೆ ಆಟ ವಿದರ್ಭ ಪರ ಅಪೂರ್ವ ವಾಂಖೆಡೆ ಒಬ್ಬರೇ ಅರ್ಧ ರನ್ ಗಳಿಸಿದರು. ಅವರು 69 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಸಿಕ್ಸರ್‌ಗಳ ನೆರವಿನಿಂದ 72 ರನ್ ಗಳಿಸಿದರು. ಇವರನ್ನು ಬಿಟ್ಟರೆ ಬೇರಾವ ಬ್ಯಾಟ್ಸ್‌ಮನ್‌ಗೂ ದೊಡ್ಡ ಇನ್ನಿಂಗ್ಸ್‌ ಆಡಲಾಗಲಿಲ್ಲ. ನಾಯಕ ಫೈಜ್ ಫಜಲ್ 59 ಎಸೆತಗಳಲ್ಲಿ ಬೌಂಡರಿ ನೆರವಿನಿಂದ 23 ರನ್ ಗಳಿಸಿದರು. ಅವರು ತಂಡದ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಮೂರನೇ ಓವರ್‌ನಲ್ಲಿ ರನ್ ಗಳಿಸಿದ ನಂತರ ಅವರ ಜೊತೆಗಾರ ಅರ್ಥವ್ ಟೈಡೆ ಉನಾದ್ಕತ್‌ಗೆ ಬಲಿಯಾದರು. ಏಳನೇ ಓವರ್ ನಲ್ಲಿ ಉನದ್ಕತ್ ಗಣೇಶ್ ಸತೀಶ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಆಗ ತಂಡದ ಸ್ಕೋರ್ ಎಂಟು ರನ್ ಆಗಿತ್ತು. ಒಂದು ರನ್ ನಂತರ ಯಶ್ ರಾಥೋಡ್ (1) ಕೂಡ ಔಟಾದರು. ಅಕ್ಷಯ್ ವಾಡ್ಕರ್ 31 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಆದಿತ್ಯ ಸರ್ವಾಟೆ ಕೂಡ 22 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.

ಅಷ್ಟರಲ್ಲಿ ಅಪೂರ್ವ ಜವಬ್ದಾರಿಯುತ ಆಟವಾಡಿ ತಂಡದ ಸ್ಕೋರ್ ಬೋರ್ಡ್ ಅನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಆದಿತ್ಯ ನಂತರ ಲಲಿತ್ ಯಾದವ್ ಕೂಡ 1 ರನ್ ಗಳಿಸಿ ಔಟಾದರು. ಯಶ್ ಠಾಕೂರ್ ಅವರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿದರ್ಭ ತಂಡದ ಸ್ಕೋರ್ 86ಕ್ಕೆ ಎಂಟು ವಿಕೆಟ್ ಕಳೆದುಕೊಂಡಿತು. ಅಕ್ಷಯ್ ವಾಘ್ರೆ ಅಪೂರ್ವರನ್ನು ಬೆಂಬಲಿಸಿದರು. ಅಕ್ಷಯ್ ಹೆಚ್ಚು ರನ್ ಗಳಿಸಲಿಲ್ಲ ಆದರೆ ಅಪೂರ್ವ ಜೊತೆ ನಿಂತರು. ಅಪೂರ್ವ ಒಟ್ಟು ಸ್ಕೋರ್ 150 ರಲ್ಲಿ ಔಟಾದರು. ಅವರ ನಿರ್ಗಮನದ ನಂತರ ಆದಿತ್ಯ ಠಾಕ್ರೆ ಕೂಡ ಒಂದು ಎಸೆತದಲ್ಲಿ ಔಟಾದರು. ಇದರೊಂದಿಗೆ ವಿದರ್ಭದ ಇಡೀ ತಂಡ ಆಲ್​ಔಟ್ ಆಯಿತು. ಅಕ್ಷಯ್ 27 ಎಸೆತಗಳಲ್ಲಿ ಐದು ರನ್ ಗಳಿಸಿ ಅಜೇಯರಾಗಿ ಉಳಿದರು.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ