Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs RCB: ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜು: ಎಲಿಮಿನೇಟರ್​ನಲ್ಲಿ ಆರ್​ಸಿಬಿಗೆ ಈ ತಂಡ ಎದುರಾಳಿ

Royal Challengers Bengaluru vs Rajasthan Royals, Eliminator: ಐಪಿಎಲ್ 2024ರ ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 22 ಬುಧವಾರ ನಡೆಯಲಿದೆ.

RR vs RCB: ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜು: ಎಲಿಮಿನೇಟರ್​ನಲ್ಲಿ ಆರ್​ಸಿಬಿಗೆ ಈ ತಂಡ ಎದುರಾಳಿ
rr vs rcb eliminator
Follow us
Vinay Bhat
|

Updated on: May 20, 2024 | 7:39 AM

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಯಾರೂ ಊಹಿಸದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿ ಪ್ಲೇ ಆಫ್ ಪ್ರವೇಶಿಸಿತು. ಸಿಎಸ್​ಕೆ ವಿರುದ್ಧ 27 ರನ್‌ಗಳ ಜಯದ ನಂತರ ಬೆಂಗಳೂರು ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿತು. ಮೊದಲ ಎಂಟು ಪಂದ್ಯಗಳಲ್ಲಿ ಏಳನ್ನು ಕಳೆದುಕೊಂಡಿದ್ದ ಆರ್​ಸಿಬಿ ತಂಡವು ಪ್ರಬಲವಾಗಿ ಹೋರಾಡಿ ಆರು ಪಂದ್ಯಗಳನ್ನು ಗೆದ್ದಿತು. ಆರ್​ಸಿಬಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಎಲಿಮಿನೇಟರ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಎಲಿಮಿನೇಟರ್​ನಲ್ಲಿ ಬೆಂಗಳೂರು ಎದುರಾಳಿ ರಾಜಸ್ಥಾನ್ ರಾಯಲ್ಸ್. ಮೇ 22 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2024 ರ ಕೊನೆಯ ಲೀಗ್ ಪಂದ್ಯವನ್ನು ಮಳೆಯಿಂದಾಗಿ ಟಾಸ್ ನಂತರ ಕೈಬಿಡಬೇಕಾಯಿತು. ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ, ತಲಾ ಏಳು ಓವರ್‌ಗಳ ಪಂದ್ಯ ನಡೆಸಲು ನಿರ್ಧಾರವನ್ನು ತೆಗೆದುಕೊಂಡ ತಕ್ಷಣ, ಪುನಃ ಮಳೆ ಬಂದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಒಂಬತ್ತು ಗೆಲುವಿನಿಂದ 20 ಅಂಕಗಳೊಂದಿಗೆ ಕೆಕೆಆರ್ ಮೊದಲ ಸ್ಥಾನದಲ್ಲಿದೆ. ಇತ್ತ ಆರ್​ಆರ್ 17 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಆರ್​ಸಿಬಿ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಧೋನಿ ಸಿಡಿಸಿದ ಆ 110 ಮೀ. ಸಿಕ್ಸ್: ಹೇಗೆ ಗೊತ್ತೇ?

ಮಧ್ಯಾಹ್ನದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿ 17 ಅಂಕ ಗಳಿಸಿತು. ಹೈದರಾಬಾದ್ 0.414 ರ ಉತ್ತಮ ರನ್ ರೇಟ್‌ನಿಂದಾಗಿ ರಾಜಸ್ಥಾನ್ ರಾಯಲ್ಸ್ (0.273) ಗಿಂತ ಮುಂದೆ ಎರಡನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ಮೂಲಕ ಇದೀಗ ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ.

ಮೊದಲ ಕ್ವಾಲಿಫೈಯರ್ ಪಂದ್ಯವು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವೆ ನಡೆಯಲಿದೆ. ಕೋಲ್ಕತ್ತಾ ಮತ್ತು ಸನ್‌ರೈಸರ್ಸ್ ನಡುವಿನ ಈ ಪಂದ್ಯ ಮಂಗಳವಾರ ಮೇ 21 ರಂದು ಆಯೋಜಿಸಲಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 22 ಬುಧವಾರ ನಡೆಯಲಿದೆ. ಈ ಎರಡೂ ಪಂದ್ಯಗಳ ಸ್ಥಳ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ.

ಮೊದಲ ಮತ್ತು ದ್ವಿತೀಯ ಸ್ಥಾನಗಳ ಪ್ರಯೋಜನವೆಂದರೆ ಫೈನಲ್ ತಲುಪಲು ಎರಡು ಅವಕಾಶಗಳನ್ನು ನೀಡಲಾಗುತ್ತದೆ. ನಿಯಮಗಳ ಪ್ರಕಾರ, ಮೊದಲ ಕ್ವಾಲಿಫೈಯರ್ ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಅಂದರೆ ಕೋಲ್ಕತ್ತಾ ಮತ್ತು ಸನ್ ರೈಸರ್ಸ್ ನಡುವೆ ಯಾರು ಗೆದ್ದ ಟೀಮ್ ಫೈನಲ್ ತಲುಪುತ್ತಾರೆ. ಸೋತ ತಂಡ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಲಿದೆ. ಇಲ್ಲಿ ಅವರು ಎಲಿಮಿನೇಟರ್ ವಿಜೇತರನ್ನು ಎದುರಿಸಲಿದ್ದಾರೆ. ಅಂದರೆ ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಸೋತವರು ಟೂರ್ನಿಯಿಂದ ಹೊರಬಿದ್ದರೆ ವಿಜೇತ ತಂಡ ಎರಡನೇ ಕ್ವಾಲಿಫೈಯರ್ ತಲುಪುತ್ತದೆ.

ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು

ಎರಡನೇ ಕ್ವಾಲಿಫೈಯರ್ ಗೆದ್ದ ತಂಡ ಮತ್ತು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವು ಮೇ 24 ಶುಕ್ರವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆಲ್ಲುವ ತಂಡ ಫೈನಲ್ ತಲುಪಲಿದೆ. ಅಂತಿಮ ಪಂದ್ಯವು ಮೇ 26 ರಂದು ಚೆಪಾಕ್‌ನಲ್ಲಿ ಆಯೋಜಿಸಲಾಗಿದೆ. ಸದ್ಯ 10 ವರ್ಷಗಳ ನಂತರ ಕೋಲ್ಕತ್ತಾ ಮೂರನೇ ಬಾರಿಗೆ ಚಾಂಪಿಯನ್ ಆಗುತ್ತದೆಯೇ ಎಂದು ನೋಡಬೇಕು? ಅಥವಾ ಸನ್ ರೈಸರ್ಸ್ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆಯೇ?, ಚೊಚ್ಚಲ ಸೀಸನ್​ನ ಚಾಂಪಿಯನ್ ರಾಜಸ್ಥಾನಕ್ಕೆ 2008 ರ ಬಳಿಕ ಕಪ್ ಸಿಗುತ್ತಾ? ಅಥವಾ ಸತತ 6 ಸೋಲಿನ ನಂತರ 6 ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ತಲುಪಿರುವ ಬೆಂಗಳೂರು 17 ವರ್ಷಗಳ ಕಾಯುವಿಕೆಯ ನಂತರ ಮೊದಲ ಬಾರಿಗೆ ಚಾಂಪಿಯನ್ ಆಗಲು ಸಾಧ್ಯವೇ? ಎಂಬುದು ಇನ್ನೊಂದು ವಾರದಲ್ಲಿ ನಿರ್ಧಾರವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀರು ಕೊಡಿಸಿ ಎಂದ ಮಹಿಳೆಯರಿಂದ ವಂದೇ ಮಾತರಂ ಘೋಷಣೆ ಕೂಗಿಸಿದ ಬಿಜೆಪಿ ಶಾಸಕ
ನೀರು ಕೊಡಿಸಿ ಎಂದ ಮಹಿಳೆಯರಿಂದ ವಂದೇ ಮಾತರಂ ಘೋಷಣೆ ಕೂಗಿಸಿದ ಬಿಜೆಪಿ ಶಾಸಕ
ನೈನಾರ್ ನಾಗೇಂದ್ರನ್​ಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದ ಅಣ್ಣಾಮಲೈ
ನೈನಾರ್ ನಾಗೇಂದ್ರನ್​ಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದ ಅಣ್ಣಾಮಲೈ
ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಜಾತಿಗಣತಿ ವರದಿ ಬಿಡುಗಡೆ ಯಾವಾಗ ಅಂತ ಕೇಳಿದರೆ ಸಿಎಂ ಇತಿಹಾಸ ಹೇಳಿದರು
ಜಾತಿಗಣತಿ ವರದಿ ಬಿಡುಗಡೆ ಯಾವಾಗ ಅಂತ ಕೇಳಿದರೆ ಸಿಎಂ ಇತಿಹಾಸ ಹೇಳಿದರು
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣನ ಪಾತ್ರ ಏನು?
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣನ ಪಾತ್ರ ಏನು?
ಬಿಜೆಪಿ, ಜೆಡಿಎಸ್ ಕೆಲಸವೇ ಅರೋಪ ಮಾಡೋದು, ನಮ್ಮದು ಉತ್ತರ ಕೋಡೋದು: ಸಚಿವ
ಬಿಜೆಪಿ, ಜೆಡಿಎಸ್ ಕೆಲಸವೇ ಅರೋಪ ಮಾಡೋದು, ನಮ್ಮದು ಉತ್ತರ ಕೋಡೋದು: ಸಚಿವ
ತಹವ್ವೂರ್ ರಾಣಾ ಹಸ್ತಾಂತರದಲ್ಲಿ ಕಾಂಗ್ರೆಸ್ ಪಾತ್ರ ಇದೆ;ಪಿ. ಚಿದಂಬರಂ
ತಹವ್ವೂರ್ ರಾಣಾ ಹಸ್ತಾಂತರದಲ್ಲಿ ಕಾಂಗ್ರೆಸ್ ಪಾತ್ರ ಇದೆ;ಪಿ. ಚಿದಂಬರಂ
ಯಾವುದೇ ಅಹಿತಕರ ಘಟನೆಗೆ ಆಸ್ಪದವೀಯದ ಪೋಲೀಸರು
ಯಾವುದೇ ಅಹಿತಕರ ಘಟನೆಗೆ ಆಸ್ಪದವೀಯದ ಪೋಲೀಸರು
ಗುಜರಾತ್ ಟೈಟನ್ಸ್ ಪರ ದಾಖಲೆ ಬರೆದ ಶುಭ್​ಮನ್ ಗಿಲ್
ಗುಜರಾತ್ ಟೈಟನ್ಸ್ ಪರ ದಾಖಲೆ ಬರೆದ ಶುಭ್​ಮನ್ ಗಿಲ್
ಜೆಡಿಎಸ್​ ಮುಖಂಡರ ಕೈಗಳಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪ್ಲಕಾರ್ಡ್​​
ಜೆಡಿಎಸ್​ ಮುಖಂಡರ ಕೈಗಳಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪ್ಲಕಾರ್ಡ್​​