ಆರ್​ಸಿಬಿ vs ಸಿಎಸ್​ಕೆ ಪಂದ್ಯದಲ್ಲಿ ಈ ಪ್ಲೇಯರ್​ಗಳ ಮಧ್ಯೆ ನಡೆಯಲಿದೆ ಕಾಳಗ; ಇಲ್ಲಿದೆ ವಿವರ

ಇಂದಿನ ಪಂದ್ಯ ಎರಡೂ ತಂಡಕ್ಕೆ ಪ್ರಮುಖ ಎನಿಸಿಕೊಂಡಿದೆ. ಫಾಪ್​ ಡುಪ್ಲೆಸಿಸ್ ಅವರು ಆರ್​ಸಿಬಿ ತಂಡವನ್ನು ಮುನ್ನಡೆಸಿದರೆ, ಚೆನ್ನೈಗೆ ಧೋನಿ ಸಾರಥ್ಯ ಇದೆ.  

ಆರ್​ಸಿಬಿ vs ಸಿಎಸ್​ಕೆ ಪಂದ್ಯದಲ್ಲಿ ಈ ಪ್ಲೇಯರ್​ಗಳ ಮಧ್ಯೆ ನಡೆಯಲಿದೆ ಕಾಳಗ; ಇಲ್ಲಿದೆ ವಿವರ
ಆರ್​ಸಿಬಿ VS ಸಿಎಸ್​​ಕೆ

Updated on: Apr 17, 2023 | 1:03 PM

ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸತತ ಮೂರನೇ ಪಂದ್ಯವನ್ನು ಹೋಮ್​ ಪಿಚ್​ನಲ್ಲಿ ಆಡುತ್ತಿದೆ. ಈ ಬಾರಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯವನ್ನು ಆರ್​ಸಿಬಿ ಗೆದ್ದಿದೆ. ಇಂದು (ಏಪ್ರಿಲ್ 17) ಆರ್​​ಸಿಬಿ ತಂಡವು ಚೆನ್ನೈ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಈ ಸೀಸನ್​ನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಎರಡು ಮ್ಯಾಚ್​ನ ಗೆದ್ದಿವೆ. ಹೀಗಾಗಿ, ಇಂದಿನ ಪಂದ್ಯ ಎರಡೂ ತಂಡಕ್ಕೆ ಪ್ರಮುಖ ಎನಿಸಿಕೊಂಡಿದೆ. ಫಾಪ್​ ಡುಪ್ಲೆಸಿಸ್ ಅವರು ಆರ್​ಸಿಬಿ ತಂಡವನ್ನು ಮುನ್ನಡೆಸಿದರೆ, ಚೆನ್ನೈಗೆ ಧೋನಿ (Dhoni) ಸಾರಥ್ಯ ಇದೆ.

ರುತುರಾಜ್ ಗಾಯಕ್ವಾಡ್​ vs ಮೊಹಮದ್ ಸಿರಾಜ್

ರುತುರಾಜ್ ಗಾಯಕ್ವಾಡ್ ಅವರು ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರು ಕೆಲ ಪಂದ್ಯಗಳಲ್ಲಿ ಎಡವಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಪ್ರಮುಖ ಎನಿಸಿಕೊಂಡಿದ್ದಾರೆ. ಸಿಎಸ್​ಕೆ ಪರ ಅವರು ಓಪನಿಂಗ್ ಮಾಡಲಿದ್ದಾರೆ. ಅವರನ್ನು ಕಟ್ಟಿ ಹಾಕಲು ಆರ್​ಸಿಬಿ ತಂಡದ ಬೌಲರ್ ಮೊಹಮದ್ ಸಿರಾಜ್ ಇದ್ದಾರೆ. ತಮ್ಮ ಸ್ವಿಂಗ್ ಮೂಲಕ ಅವರು ರುತುರಾಜ್ ಗಾಯಕ್ವಾಡ್ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಲಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆದರೆ, ಪಂದ್ಯ ಆರ್​ಸಿಬಿ ಕೈ ಸೇರಲಿದೆ.

ಮ್ಯಾಕ್ಸ್​ವೆಲ್​ vs ಜಡೇಜಾ

ಆರ್​ಸಿಬಿ ಮಧ್ಯಮ ಕ್ರಮಾಂಕಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್​ ಅವರು ಆಸರೆ ಆಗಿದ್ದಾರೆ. ವಿರಾಟ್ ಹಾಗೂ ಫಾಪ್ ಡುಪ್ಲೆಸಿಸ್ ಅವರು ಒಳ್ಳೆಯ ಓಪನಿಂಗ್ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬರುವ ಗ್ಲೆನ್ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ಇವರು ಆಲ್​ರೌಂಡರ್ ಕೂಡ ಹೌದು. ಧೋನಿ ತಂಡದಲ್ಲಿ ರವೀಂದ್ರ ಜಡೇಜಾ ಆಲ್​ರೌಂಡರ್ ಆಗಿದ್ದಾರೆ. ಈ ಸೀಸನ್​ನಲ್ಲಿ ಮ್ಯಾಕ್ಸ್​ವೆಲ್ ಎರಡು ಬಾರಿ ಸ್ಪಿನ್​ಗೆ ಔಟ್ ಆಗಿದ್ದಾರೆ. ಹೀಗಾಗಿ, ಮ್ಯಾಕ್ಸ್​ವೆಲ್ ಬ್ಯಾಟಿಂಗ್​ಗೆ ಬಂದರೆ ರವೀಂದ್ರ ಜಡೇಜಾ ಅವರನ್ನು ಧೋನಿ ಬೌಲಿಂಗ್​ಗೆ ಇಳಿಸಬಹುದು.

ಇದನ್ನೂ ಓದಿ: MS Dhoni Six: ಎಂಎಸ್ ಧೋನಿ ಸಿಡಿಸಿದ ಆ ಒಂದು ಸಿಕ್ಸ್​ಗೆ ದಂಗಾದ ನರೇಂದ್ರ ಮೋದಿ ಸ್ಟೇಡಿಯಂ: ವೈರಲ್ ವಿಡಿಯೋ

ಧೋನಿ vs ಹರ್ಷಲ್ ಪಟೇಲ್​

ಸಿಎಸ್​ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಚಿಂತೆ ಕಾಡಿದೆ. ಉತ್ತಮ ಆರಂಭ ಸಿಕ್ಕರೂ ಮಧ್ಯಮ ಕ್ರಮಾಂಕದಲ್ಲಿ ತಂಡ ತೊಂದರೆ ಎದುರಿಸುತ್ತಿದೆ. ಧೋನಿ ಅವರು ಈ ಜವಾಬ್ದಾರಿಯನ್ನು ಹೊರಬೇಕಿದೆ. ಧೋನಿಯನ್ನು ಆರ್​ಸಿಬಿ ಬೌಲರ್ ಹರ್ಷಲ್ ಕಟ್ಟಿ ಹಾಕಲು ಪ್ರಯತ್ನಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:52 pm, Mon, 17 April 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us