RCB vs PBKS, IPL Final Highlights: ನೆಲಮಂಗಲದಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ

ಆರ್​ಸಿಬಿ ಪಿಬಿಕೆಎಸ್​ ಐಪಿಎಲ್​ ಲೈವ್: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯುವ ಐಪಿಎಲ್ ಫೈನಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಸೆಣಸಲಿವೆ. ಇತ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆರ್​ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ವಿವಿಧೆಡೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಕ್ಷಣಕ್ಷಣದ ಅಪ್​​ಡೇಟ್ ಇಲ್ಲಿದೆ.

RCB vs PBKS, IPL Final Highlights: ನೆಲಮಂಗಲದಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ
ಆರ್​ಸಿಬಿ ಪಿಬಿಕೆಎಸ್​ ಐಪಿಎಲ್​ ಲೈವ್
Edited By:

Updated on: Jun 03, 2025 | 5:06 PM

ಐಪಿಎಲ್ ಫೈನಲ್​​ನಲ್ಲಿ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್: ಲೈವ್ ಅಪ್​ಡೇಟ್

ಪ್ರಸಕ್ತ ಋತುವಿನ ಐಪಿಎಲ್ (IPL 2025) ಟೂರ್ನಿ ಕೊನೆಯ ಹಂತಕ್ಕೆ ಬಂದಿದ್ದು ಗುಜರಾತ್​​ನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ಮಧ್ಯೆ ಫೈನಲ್ ಹಣಾಹಣಿ ನಡೆಯಲಿದೆ. ಕಪ್ ಗೆಲ್ಲುವ ನಿಚ್ಚಿನ ತಂಡವಾಗಿರುವ ಆರ್​​ಸಿಬಿಗೆ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದ ವಿವಿಧೆಡೆ ಆರ್​​ಸಿಬಿ ಗೆಲುವಿಗಾಗಿ ಪ್ರಾರ್ಥನೆ, ಪೂಜೆ ನೆರವೇರುತ್ತಿವೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಆರ್​ಸಿಬಿಗೆ ಶುಭ ಹಾರೈಸಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಆರ್​​ಸಿಬಿ‌ಅಭಿಮಾನಿಗಳಿಂದ ವಿಶೇಷ ಪೂಜೆ ನೆರವೇರಿದೆ. ಆರ್​ಸಿಬಿ ಈ ಬಾರಿ ಕಪ್ ಗೆಲ್ಲುವ ಮೂಲಕ 18 ವರ್ಷಗಳ ಕಪ್ ಬರ ನೀಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಆರ್​​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಫೈನಲ್​ ಪಂದ್ಯ ಸಂಬಂಧಿತ ಎಲ್ಲ ಅಪ್​ಡೇಟ್​​ಗಳು ಇಲ್ಲಿ ಲಭ್ಯ.

LIVE NEWS & UPDATES

The liveblog has ended.
  • 03 Jun 2025 04:43 PM (IST)

    ನೆಲಮಂಗಲದಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ

    ಕ್ರಿಕೆಟ್ ನೋಡುವ ವೇಳೆ ಬರುವ ಆರ್​ಸಿಬಿ ಅಭಿಮಾನಿಗಳಿಗೆ ನೆಲಮಂಗಲದಲ್ಲಿ ಬಿರಿಯಾನಿ ವಿತರಿಸಲು ತಯಾರಿ ನಡೆದಿದೆ. ನೆಲಮಂಗಲ ಕ್ರಿಕೆಟ್ ಅಭಿಮಾನಿಗಳು ಸುಮಾರು 500 ಜನರಿಗೆ ಬಿರಿಯಾನಿ ವಿತರಿಸಲು ತಯಾರಿ ನಡೆಸುತ್ತಿದ್ದಾರೆ. ನೆಲಮಂಗಲ ನಗರದ ರಾಯನ್ ನಗರದಲ್ಲಿ ಸಿದ್ಧತೆ ನಡೆಯುತ್ತಿದೆ.

  • 03 Jun 2025 03:42 PM (IST)

    ಈ ಸಲ ಕಪ್​…..ಹೇಳಲ್ಲ, ಮಾಡಿ ತೋರಿಸ್ತೀವಿ: ಶಿವಣ್ಣ

    ಗುಜರಾತ್​​ನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ಮಧ್ಯೆ ಫೈನಲ್ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕೆ ನಟ ಶಿವರಾಜ್ ಕುಮಾರ್​ ಅವರು ಶುಭ ಹಾರೈಸಿದ್ದಾರೆ. ಈ ಸಲ ಕಪ್​.. ಹೇಳಲ್ಲ, ಮಾಡಿ ತೋರಿಸ್ತೀವಿ ಎಂದ ನಟ ಶಿವರಾಜ್ ಕುಮಾರ್​ ಅವರು ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.


  • 03 Jun 2025 03:22 PM (IST)

    ಶುಭಕೋರಿದ ಕಲಬುರಗಿ ವಿದ್ಯಾರ್ಥಿಗಳು‌

    ಆರ್​ಸಿಬಿ ಗೆಲ್ಲಲಿ ಅಂತ ಕಲಬುರಗಿಯ ಆರ್​ಜೆ ಕಾಲೇಜಿನ ವಿದ್ಯಾರ್ಥಿಗಳು ಶುಭಕೋರಿದರು. ವಿದ್ಯಾರ್ಥಿಗಳು ಡಿಜೆ ಸೌಂಡ್​ಗೆ ಡ್ಯಾನ್ಸ್​ ಮಾಡುತ್ತಾ ಚೀಯರ್ ಅಫ್ ಮಾಡಿದರು.  ಈ ಸಲ ಕಪ್ ನಮ್ದೆ ಅಂತ ವಿದ್ಯಾರ್ಥಿನಿಯರು‌  ಡೈಲಾಗ್ ಹೊಡೆದರು. ಕೈಯಲ್ಲಿ ಆರ್​ಸಿಬಿ ಆಟಗಾರರ ಭಾವಚಿತ್ರ ಹಿಡಿದು ಚೀಯರ್ ಅಪ್ ಮಾಡಿದರು. ವಿರಾಟ್ ಕೊಹ್ಲಿ ಶತಕ ಸಿಡಿಸಿ ಪಂಜಾಬ್​ ಅನ್ನು ಸೋಲಿಸುತ್ತಾರೆ ಎಂದು ವಿದ್ಯಾರ್ಥಿನಿಯರು‌ ಶುಭ ಕೋರಿದರು.

    ಇದನ್ನೂ ಓದಿ: ಪಂಜಾಬ್ ಕಿಂಗ್ಸ್​ ಕಪ್ ಗೆಲ್ಬೇಕು, ಅದಕ್ಕೆ RCB ಗೆಲ್ಲುತ್ತೆ: ವೀರೇಂದ್ರ ಸೆಹ್ವಾಗ್

     

  • 03 Jun 2025 02:51 PM (IST)

    IPL Final Live: ಬೆಳಗಾವಿಯಲ್ಲಿ ಆರ್​​ಸಿಬಿ ಅಭಿಮಾನಿಗಳಿಂದ ಪೂಜೆ

    ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬರಲಿ ಎಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪೂಜೆ ನೆರವೇರಿಸಿದರು. ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಅಭಿಮಾನಿಗಳು ಆರ್​ಸಿಬಿ ಪರ ಘೋಷಣೆ ಕೂಗಿದರು.

  • 03 Jun 2025 02:16 PM (IST)

    IPL Final Live: ಆರ್​ಸಿಬಿಗೆ ಮೋಹಕ ತಾರೆ ರಮ್ಯಾ ಶುಭಹಾರೈಕೆ

    ಈ ಸಲ ಕಪ್ ನಮ್ದು ಎಂದು ಸ್ಯಾಂಡಲ್​ವುಡ್ ಮೋಹಕತಾರೆ ನಟಿ ರಮ್ಯಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟ್ರೋಫಿ ಎತ್ತಿದ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ.

  • 03 Jun 2025 12:33 PM (IST)

    IPL Final Live: ಆರ್​ಸಿಬಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ

    ಐಪಿಎಲ್ ಫೈನಲ್​​ನಲ್ಲಿ ಪಂಜಾಬ್ ತಂಡವನ್ನು ಎದುರಿಸುತ್ತಿರುವ ಆರ್​ಸಿಬಿಗೆ ಮುಖ್ಯಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ ಅವರು, ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು ಎಂದು ಉಲ್ಲೇಖಿಸಿದ್ದಾರೆ.

  • 03 Jun 2025 12:24 PM (IST)

    IPL Final Live: ಅಹಮದಾಬಾದ್ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟ

    ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದ ಮುಖ್ಯ ದ್ವಾರದ ಹೊರಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಕೆಲ ಹೊತ್ತು ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಸಾವುನೋವುಗಳು ತಪ್ಪಿವೆ. ಆದರೆ, ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಫೈನಲ್ ಪಂದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

  • 03 Jun 2025 11:33 AM (IST)

    IPL Final Live: ಕಪ್ ತೆಗೆದುಕೊಂಡು ಬನ್ನಿ, ಡಿಕೆ ಶಿವಕುಮಾರ್ ಹಾರೈಕೆ

    ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಆರ್​​ಸಿಬಿಗೆ ಶುಭ ಹಾರೈಸಿದ್ದಾರೆ. ಅರ್​ಸಿಬಿ ಜೆರ್ಸಿ ತೊಟ್ಟು ವಿಡಿಯೋ ಸಂದೇಶ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

    ವಿಡಿಯೋ ಇಲ್ಲಿದೆ ನೋಡಿ: ಅರ್​ಸಿಬಿ ಜೆರ್ಸಿ ತೊಟ್ಟು ತಂಡಕ್ಕೆ ಶುಭ ಹಾರೈಸಿ ಕಪ್ ತೆಗೆದುಕೊಂಡು ಬನ್ನಿ ಎಂದ ಡಿಕೆ ಶಿವಕುಮಾರ್

  • 03 Jun 2025 11:29 AM (IST)

    IPL Final Live: RCB ಗೆಲುವಿಗಾಗಿ ಎಲ್ಲೆಲ್ಲೂ ಹೋಮ, ಹವನ!

    RCB ಗೆಲುವಿಗಾಗಿ ಎಲ್ಲೆಲ್ಲೂ ಹೋಮ, ಹವನ ನಡೆಯುತ್ತಿದೆ. ದೇಶಾದ್ಯಂತ ಅಭಿಮಾನಿಗಳ ಪೂಜೆ, ಪುನಸ್ಕಾರದ ಮಧ್ಯೆ ಮೈಸೂರಿನಲ್ಲಿ ಆರ್​​ಸಿಬಿ ಅಭಿಮಾನಿಗಳು ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

  • 03 Jun 2025 11:26 AM (IST)

    IPL Final Live: ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು?

    ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರು ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಬಹುದು ಎನ್ನಲಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು ಎಂಬ ಕುತೂಹಲ ಉಂಟಾಗಿದೆ. ಈ ಮೈದಾನದಲ್ಲಿ ಈವರೆಗೆ 44 ಟಿ20 ಪಂದ್ಯಗಳನ್ನು ಆಡಲಾಗಿದೆ. 44 ಪಂದ್ಯಗಳಲ್ಲಿ 12 ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿವೆ.

    ವಿವರಗಳಿಗೆ ಓದಿ: ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು?

  • 03 Jun 2025 11:24 AM (IST)

    IPL Final Live: ಮಂಡ್ಯ ನಗರದಲ್ಲಿ ಆರ್​ಸಿಬಿ ಅಭಿಮಾನಿಗಳ ಗುಂಪಿನಿಂದ ವಿಶೇಷ ಪೂಜೆ

    ಅರ್​ಸಿಬಿ ತಂಡದ ಗೆಲುವಿಗಾಗಿ ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಅಭಿಮಾನಿಯೊಬ್ಬರು ಉರುಳುಸೇವೆ ಮಾಡಿದ್ದಾರೆ.

    ವಿಡಿಯೋ ನೋಡಿ: ಐಪಿಎಲ್ ಫೈನಲ್: ಆರ್​ಸಿಬಿ ಗೆಲುವಿಗೆ ಮಂಡ್ಯದ ಅಭಿಮಾನಿಯಿಂದ ಉರುಳು ಸೇವೆ!

  • 03 Jun 2025 11:20 AM (IST)

    IPL Final Live: ಉದಗಟ್ಟಿ ಉದ್ದಮ್ಮ ದೇವಿಗೆ ವಿಶೇಷ ಪೂಜೆ

    ಆರ್​​ಸಿಬಿ ಅಭಿಮಾನಿಗಳು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಉದಗಟ್ಟಿ ಉದ್ದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರ್​ಸಿಬಿಗೆ ಶುಭ ಹಾರೈಸಿದರು. ವಿರಾಟ್ ಕೊಹ್ಲಿ ಜರ್ಸಿ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು.

  • 03 Jun 2025 11:17 AM (IST)

    IPL Final Live: ಕರವೇ ಕಾರ್ಯಕರ್ತರಿಂದ ವಿಶೇಷ ಪೂಜೆ

    ಕರವೇ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರ್​ಸಿಬಿಗೆ ಶುಭ ಹಾರೈಸಿದರು. ವಿರಾಟ್ ಕೊಹ್ಲಿ ಭಾವಚಿತ್ರ ಹಿಡಿದು ಬಂದ ಪುಟ್ಟ ಮಕ್ಕಳು ಜಯಘೋಷ ಮೊಳಗಿಸಿದರು.

  • 03 Jun 2025 10:54 AM (IST)

    IPL Final Live: ಆರ್​ಸಿಬಿ ಗೆಲುವಿಗಾಗಿ ಈಡುಗಾಯಿ ಒಡೆದು ಪ್ರಾರ್ಥನೆ

    RCB ಗೆಲುವಿಗಾಗಿ ಅಭಿಮಾನಿಗಳು ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಮಂಡ್ಯದಲ್ಲಿ ಶಕ್ತಿ ದೇವಿ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಉರುಳು ಸೇವೆ ಮಾಡಿ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಲಾಗಿದೆ.

  • 03 Jun 2025 10:52 AM (IST)

    IPL Final Live: ಬೆಂಗಳೂರಿನಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

    ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲುವ ಫೇವರಿಟ್ ತಂಡವಾದ ಕಾರಣ, ಸಂಭ್ರಮಾಚರಣೆ ಹೆಸರಿನಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ತೋರದಂತೆ ಕಟ್ಟೆಚ್ಚರ ವಹಿಸಲು ಪೊಲೀಸ್ ಕಮಿಷನರ್ ಬಿ ದಯಾನಂದ ಸೂಚನೆ ನೀಡಿದ್ದಾರೆ.

  • 03 Jun 2025 10:50 AM (IST)

    IPL Final Live: ಬಲ ಭಾಗದಿಂದ ಹೂ ನೀಡಿ ಅಭಯ ನೀಡಿದ ಜನಾರ್ಧನ ಸ್ವಾಮಿ

    ಗಡಿ ನಾಡು ಚಾಮರಾಜನಗರದಲ್ಲಿ ಆರ್​ಸಿಬಿ ಅಭಿಮಾನಿಗಳು ವಿಶೇಷ ಪೂಜೆ ನೆರೆವೇರಿಸಿದ್ದಾರೆ. ಇದೇ ವೇಳೆ, ಬಲ ಭಾಗದಿಂದ ಹೂವಿನ ಪ್ರಸಾದ ನೀಡಿ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವರು ಅಭಯ ನೀಡಿದ್ದು, ಆರ್​​ಸಿಬಿ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

  • 03 Jun 2025 10:48 AM (IST)

    IPL Final Live: ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಐಪಿಎಲ್ ಫೈನಲ್​​ನಲ್ಲಿ ಇಂದು ಆರ್​​ಸಿಬಿ ಹಾಗೂ ಪಂಜಾಬ್ ಮುಖಾಮುಖಿಯಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬರಲಿ ಎಂದು ಅಭಿಮಾನಿಗಳು ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

  • 03 Jun 2025 10:47 AM (IST)

    IPL Final Live: ಬಾಗಲಕೋಟೆಯಲ್ಲಿ ಸಾಯಿ ಬಾಬಾ ಬಳಿ ಪ್ರಾರ್ಥನೆ

    ಬಾಗಲಕೋಟೆಯಲ್ಲಿ ಆರ್​ಸಿಬಿ ಅಭಿಮಾನಿಗಳ ಜೋಷ್ ಮುಗಿಲುಮುಟ್ಟಿದ್ದು, ತಂಡವನ್ನು ಫೈನಲ್​ನಲ್ಲಿ ಗೆಲ್ಲಿಸುವಂತೆ ಅಭಿಮಾನಿಗಳು ಸಾಯಿಬಾಬಾಗೆ ಪ್ರಾರ್ಥನೆ ಸಲ್ಲಿಸಿದರು.

  • Published On - 10:44 am, Tue, 3 June 25