AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sachin Tendulkar: ‘ಅಪ್ಪ ನೆನಪಾದ್ರು’; ಮಗನ ಚೊಚ್ಚಲ ಶತಕದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು ಗೊತ್ತಾ?

Sachin Tendulkar: ಶತಕದ ಹಿಂದಿನ ರಾತ್ರಿ ಅರ್ಜುನ್ ಜೊತೆ ಮಾತನಾಡಿದ್ದೆ. ಆ ರಾತ್ರಿ ಅರ್ಜುನ್‌ ಜತೆ ಮಾತನಾಡಿದಾಗ ಶತಕ ಬಾರಿಸಲು ಪ್ರಯತ್ನಿಸುವಂತೆ ಹೇಳಿದ್ದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

Sachin Tendulkar: ‘ಅಪ್ಪ ನೆನಪಾದ್ರು’; ಮಗನ ಚೊಚ್ಚಲ ಶತಕದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು ಗೊತ್ತಾ?
ಮಗನೊಂದಿಗೆ ಸಚಿನ್ ತೆಂಡೂಲ್ಕರ್Image Credit source: Cricket Australia
Follow us
TV9 Web
| Updated By: ಪೃಥ್ವಿಶಂಕರ

Updated on:Dec 16, 2022 | 11:47 AM

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಬುಧವಾರ ಅತ್ಯಂತ ವಿಶೇಷ ದಿನವಾಗಿತ್ತು. ಇದಕ್ಕೆ ಕಾರಣವೂ ಇದ್ದು, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಾವಳಿಯಲ್ಲಿ (Ranji Trophy) ಗೋವಾ ಪರ ಚೊಚ್ಚಲ ಆವೃತ್ತಿಯನ್ನು ಆಡುತ್ತಿರುವ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ರಣಜಿಯಲ್ಲಿ ಅಪ್ಪ ಮಾಡಿದ ದಾಖಲೆಯನ್ನು ಅರ್ಜುನ್ ಸರಿಗಟ್ಟಿದ್ದರು. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅರ್ಜುನ್ ಶತಕದ ಬಳಿಕ ಹಲವು ಕ್ರಿಕೆಟ್​ ಪಂಡಿತರು ಅವರನ್ನು ಹಾಡಿ ಹೊಗಳಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ಅರ್ಜುನ್‌ ಶತಕದ ಬಗ್ಗೆ ಮಾತನಾಡಿರುವ ಕ್ರಿಕೆಟ್ ದೇವರು, ಮಗನ ಆಟದಿಂದ ನನ್ನ ತಂದೆ ನೆನಪಾದರು ಎಂಬ ಹೇಳಿಕೆ ನೀಡಿದ್ದಾರೆ.

23 ವರ್ಷದ ಅರ್ಜುನ್ ತೆಂಡೂಲ್ಕರ್, ಕಳೆದ ಆವೃತ್ತಿಯವರೆಗೂ ಮುಂಬೈ ತಂಡದ ಪರ ಆಡುತ್ತಿದ್ದರು. ಇದರೆ ಮುಂಬೈ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಈ ವರ್ಷ ಮುಂಬೈ ಬಿಟ್ಟು ಗೋವಾ ಪರ ಆಡಲು ನಿರ್ಧರಿಸಿದ್ದರು. ಅದರಂತೆಯೇ ಬುಧವಾರದಿಂದ ಆರಂಭವಾದ ಗೋವಾ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ಅರ್ಜುನ್ 207 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 120 ರನ್​ಗಳ ಇನ್ನಿಂಗ್ಸ್ ಆಡಿದರು. ಅಲ್ಲದೆ ಬೌಲಿಂಗ್​ನಲ್ಲೂ ಮಿಂಚಿನ ಪ್ರದರ್ಶನ ತೋರಿರುವ ಅರ್ಜುನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ಪನಂತೆಯೇ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್..!

2. ತಂದೆಯನ್ನು ನೆನೆದ ಸಚಿನ್‌

ಈಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿನ್ ಅವರ ಬಳಿ ಮಗ ಅರ್ಜುನ್ ಶತಕದ ಬಗ್ಗೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದೇವರು, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ‘‘ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಯಾರೋ ನನ್ನ ತಂದೆಯನ್ನು ಸಚಿನ್ ತಂದೆ ಎಂದು ಕರೆದದ್ದು ನನಗೆ ಇನ್ನೂ ನೆನಪಿದೆ. ಆಗ ನನ್ನ ತಂದೆಯ ಸ್ನೇಹಿತರೊಬ್ಬರು ನನ್ನ ತಂದೆಯ ಬಳಿ ಈಗ ನಿನಗೆ ಹೇಗನಿಸುತ್ತಿದೆ? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ನನ್ನಪ್ಪ ಇದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ ಎಂದಿದ್ದರು. ಅಲ್ಲದೆ, ಪ್ರತಿಯೊಬ್ಬ ತಂದೆಯು ತನ್ನ ಮಗುವಿನ ಕೆಲಸದಿಂದ ಗುರುತಿಸಲ್ಪಡಬೇಕೆಂದು ಬಯಸಿದ್ದರು ಎಂದಿದ್ದಾರೆ.

3. ಶತಕ ಬಾರಿಸುವಂತೆ ಸಲಹೆ ನೀಡಿದ್ದ ಸಚಿನ್

ಶತಕದ ಹಿಂದಿನ ರಾತ್ರಿ ಅರ್ಜುನ್ ಜೊತೆ ಮಾತನಾಡಿದ್ದೆ. ಆ ರಾತ್ರಿ ಅರ್ಜುನ್‌ ಜತೆ ಮಾತನಾಡಿದಾಗ ಶತಕ ಬಾರಿಸಲು ಪ್ರಯತ್ನಿಸುವಂತೆ ಹೇಳಿದ್ದೆ. ನಾನು ಮಾತನಾಡುವ ವೇಳೆಗಾಗಲೇ ಮೊದಲ ದಿನದಾಟ ಮುಕ್ತಾಯವಾಗಿತ್ತು. ಮೊದಲ ದಿನದಂತ್ಯಕ್ಕೆ ಅರ್ಜುನ್ ಅಜೇಯ 4 ರನ್ ಗಳಿಸಿದ್ದರು. ದಿನದಾಟದಂತ್ಯಕ್ಕೂ ಮುನ್ನ ವಿಕೆಟ್ ಉರುಳಿದರಿಂದ ಅರ್ಜುನ್​ನನ್ನು ರಾತ್ರಿ ಕಾವಲುಗಾರನಾಗಿ (ನೈಟ್ ವಾಚ್​ಮನ್) ಕಳುಹಿಸಲಾಗಿತ್ತು. ಈ ವೇಳೆ ಅರ್ಜುನ್, ಈ ಪಿಚ್‌ನಲ್ಲಿ ಉತ್ತಮ ಸ್ಕೋರ್ ಏನಾಗಬಹುದು ಎಂದು ನನ್ನ ಬಳಿ ಕೇಳಿದ್ದ. ಅದಕ್ಕೆ ನಾನು, ಕನಿಷ್ಠ 375 ರನ್ ತಲುಪಬೇಕು ಎಂದು ಹೇಳಿದೆ. ಆಗ ಗೋವಾ ಸ್ಕೋರ್ ತಂಡದ 5 ವಿಕೆಟ್​ಗೆ 210 ಆಗಿತ್ತು. ಇದೇ ವೇಳೆ ನೀನು ಶತಕ ಸಿಡಿಸಬೇಕು ಎಂದು ನಾನು ಅರ್ಜುನ್​ಗೆ ಹೇಳಿದ್ದೆ ಎಂದು ಸಚಿನ್ ಹೇಳಿಕೊಂಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Fri, 16 December 22

ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
VIDEO: ಹಾದೀಲಿ ಬೀದಿಲಿ, ನಡು ರೋಡಲ್ಲಿ... ಕುಣಿದು ಕುಪ್ಪಳಿಸಿದ RCB ಫ್ಯಾನ್
VIDEO: ಹಾದೀಲಿ ಬೀದಿಲಿ, ನಡು ರೋಡಲ್ಲಿ... ಕುಣಿದು ಕುಪ್ಪಳಿಸಿದ RCB ಫ್ಯಾನ್
ಆರ್​ಸಿಬಿ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ದೀಪಾವಳಿ!
ಆರ್​ಸಿಬಿ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ದೀಪಾವಳಿ!
VIDEO: ನಮ್ಮ ಕ್ಯಾಪ್ಟನ್ಸ್ ಬಾಯಲ್ಲಿ 'ನಮ್ದು' ಕನ್ನಡ
VIDEO: ನಮ್ಮ ಕ್ಯಾಪ್ಟನ್ಸ್ ಬಾಯಲ್ಲಿ 'ನಮ್ದು' ಕನ್ನಡ